<p><strong>ಕಾರವಾರ</strong>: ಕಳೆದ ಒಂದು ವಾರದಿಂದ ಈಚೆಗೆ ಬಿರುಸು ಕಳೆದುಕೊಂಡಿದ್ದ ಮಳೆಯು ಶನಿವಾರ ಪುನಃ ಬಿರುಸು ಪಡೆಯಿತು. ಅರ್ಧ ದಿನಗಳ ಕಾಲ ಸುರಿದ ಮಳೆಯಿಂದ ಹಲವೆಡೆ ಜಲಾವೃತ ಸಮಸ್ಯೆ ಉಂಟಾಯಿತು.</p>.<p>ತಾಲ್ಲೂಕಿನ ಮುದಗಾ ಸಮೀಪ ಸಂಪರ್ಕ ರಸ್ತೆಯ ಮೇಲೆ ನೀರು ನಿಂತು ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಸಮೀಪದ ಕಾರ್ಮಿಕರ ಕಾಲೊನಿಗಳಿಗೂ ನೀರು ನುಗ್ಗಿತ್ತು. ಸತತ ಮಳೆಯಿಂದ ನಗರದ ಸಾಯಿಕಟ್ಟಾ, ಪದ್ಮನಾಭ ನಗರ ಸೇರಿದಂತೆ ಕೆಲವೆಡೆ ರಸ್ತೆಯ ಮೇಲೆ ಕೆಲ ಹೊತ್ತು ನೀರು ನಿಂತಿತ್ತು.</p>.<p>ಶುಕ್ರವಾರ ತಡರಾತ್ರಿ ಬೀಸಿದ ವೇಗದ ಗಾಳಿಯಿಂದ ಮರಗಳ ಟೊಂಗೆಗಳು ಮುರಿದು ಬಿದ್ದಿದ್ದರಿಂದ ಬಾಂಡಿಶಿಟ್ಟಾ, ನಂದನಗದ್ದಾ ಭಾಗದಲ್ಲಿ ಹಲವು ತಾಸುಗಳವರೆಗೆ ವಿದ್ಯುತ್ ವ್ಯತ್ಯಯ ಉಂಟಾಯಿತು. ರಭಸದಿಂದ ಸುರಿದ ಮಳೆಯಿಂದ ಶಾಲೆ ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಪರದಾಡಿದರು.</p>.<p>ಶುಕ್ರವಾರದಿಂದ ಶನಿವಾರ ನಸುಕಿನ ಜಾವದವರೆಗೆ ಜಿಲ್ಲೆಯ ಹೊನ್ನಾವರದಲ್ಲಿ 13 ಸೆಂ.ಮೀ, ಭಟ್ಕಳದಲ್ಲಿ 12.9 ಸೆಂ.ಮೀ, ಕುಮಟಾದಲ್ಲಿ 11 ಸೆಂ.ಮೀ, ಸಿದ್ದಾಪುರದಲ್ಲಿ 7.5 ಸೆಂ.ಮೀ, ಕಾರವಾರದಲ್ಲಿ 6.3 ಸೆಂ.ಮೀ ಮಳೆ ಸುರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ಕಳೆದ ಒಂದು ವಾರದಿಂದ ಈಚೆಗೆ ಬಿರುಸು ಕಳೆದುಕೊಂಡಿದ್ದ ಮಳೆಯು ಶನಿವಾರ ಪುನಃ ಬಿರುಸು ಪಡೆಯಿತು. ಅರ್ಧ ದಿನಗಳ ಕಾಲ ಸುರಿದ ಮಳೆಯಿಂದ ಹಲವೆಡೆ ಜಲಾವೃತ ಸಮಸ್ಯೆ ಉಂಟಾಯಿತು.</p>.<p>ತಾಲ್ಲೂಕಿನ ಮುದಗಾ ಸಮೀಪ ಸಂಪರ್ಕ ರಸ್ತೆಯ ಮೇಲೆ ನೀರು ನಿಂತು ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಸಮೀಪದ ಕಾರ್ಮಿಕರ ಕಾಲೊನಿಗಳಿಗೂ ನೀರು ನುಗ್ಗಿತ್ತು. ಸತತ ಮಳೆಯಿಂದ ನಗರದ ಸಾಯಿಕಟ್ಟಾ, ಪದ್ಮನಾಭ ನಗರ ಸೇರಿದಂತೆ ಕೆಲವೆಡೆ ರಸ್ತೆಯ ಮೇಲೆ ಕೆಲ ಹೊತ್ತು ನೀರು ನಿಂತಿತ್ತು.</p>.<p>ಶುಕ್ರವಾರ ತಡರಾತ್ರಿ ಬೀಸಿದ ವೇಗದ ಗಾಳಿಯಿಂದ ಮರಗಳ ಟೊಂಗೆಗಳು ಮುರಿದು ಬಿದ್ದಿದ್ದರಿಂದ ಬಾಂಡಿಶಿಟ್ಟಾ, ನಂದನಗದ್ದಾ ಭಾಗದಲ್ಲಿ ಹಲವು ತಾಸುಗಳವರೆಗೆ ವಿದ್ಯುತ್ ವ್ಯತ್ಯಯ ಉಂಟಾಯಿತು. ರಭಸದಿಂದ ಸುರಿದ ಮಳೆಯಿಂದ ಶಾಲೆ ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಪರದಾಡಿದರು.</p>.<p>ಶುಕ್ರವಾರದಿಂದ ಶನಿವಾರ ನಸುಕಿನ ಜಾವದವರೆಗೆ ಜಿಲ್ಲೆಯ ಹೊನ್ನಾವರದಲ್ಲಿ 13 ಸೆಂ.ಮೀ, ಭಟ್ಕಳದಲ್ಲಿ 12.9 ಸೆಂ.ಮೀ, ಕುಮಟಾದಲ್ಲಿ 11 ಸೆಂ.ಮೀ, ಸಿದ್ದಾಪುರದಲ್ಲಿ 7.5 ಸೆಂ.ಮೀ, ಕಾರವಾರದಲ್ಲಿ 6.3 ಸೆಂ.ಮೀ ಮಳೆ ಸುರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>