<p><strong>ಶಿರಸಿ</strong>: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಕಾರಿ ಎಂದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ರೂಪಾ ಪಾಟೀಲ ಹೇಳಿದರು.</p>.<p>ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತಿನ ಹಣವನ್ನು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ಬಿಡುಗಡೆಗೊಳಿಸಿದ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆ ಹಾಗೂ ಪೌಷ್ಟಿಕ ಕೈ ತೋಟದ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಯೋಜನೆ ಕೇಂದ್ರ ಸರ್ಕಾರದ್ದಾಗಿದ್ದು, ಇದರ 20ನೇ ಕಂತಿನ ಆರ್ಥಿಕ ನೆರವನ್ನು ದೇಶದಾದ್ಯಂತ 9.7 ಕೋಟಿಗಿಂತಲೂ ಹೆಚ್ಚಿನ ರೈತರಿಗೆ ₹ 20,500 ಕೋಟಿ ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದರು.</p>.<p>ಕೃಷಿ ಉಪನಿರ್ದೇಶಕ ನಟರಾಜ ಟಿ.ಎಚ್. ಮಾತನಾಡಿ, ಕೃಷಿ ಸಮ್ಮಾನ್ ನಿಧಿಯ ಯೋಜನೆಯ ಲಾಭವನ್ನು ಜಿಲ್ಲೆಯ 1,61,531 ರೈತರು ಪಡೆದುಕೊಂಡಿದ್ದಾರೆ ಎಂದರು.</p>.<p>ಸಂಜೀವಿನಿ ಎನ್ಆರ್ಎಲ್ಎಂ ತಾಲ್ಲೂಕು ವ್ಯವಸ್ಥಾಪಕ ಕಿರಣ ಭಟ್, ಕೆವಿಕೆ ವಿಜ್ಞಾನಿಗಳಾದ ಹರೀಶ ಡಿ.ಕೆ, ವಿಜಯಲಕ್ಷ್ಮಿ ಎಸ್. ನಾಯಕ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಕಾರಿ ಎಂದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ರೂಪಾ ಪಾಟೀಲ ಹೇಳಿದರು.</p>.<p>ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತಿನ ಹಣವನ್ನು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ಬಿಡುಗಡೆಗೊಳಿಸಿದ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆ ಹಾಗೂ ಪೌಷ್ಟಿಕ ಕೈ ತೋಟದ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಯೋಜನೆ ಕೇಂದ್ರ ಸರ್ಕಾರದ್ದಾಗಿದ್ದು, ಇದರ 20ನೇ ಕಂತಿನ ಆರ್ಥಿಕ ನೆರವನ್ನು ದೇಶದಾದ್ಯಂತ 9.7 ಕೋಟಿಗಿಂತಲೂ ಹೆಚ್ಚಿನ ರೈತರಿಗೆ ₹ 20,500 ಕೋಟಿ ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದರು.</p>.<p>ಕೃಷಿ ಉಪನಿರ್ದೇಶಕ ನಟರಾಜ ಟಿ.ಎಚ್. ಮಾತನಾಡಿ, ಕೃಷಿ ಸಮ್ಮಾನ್ ನಿಧಿಯ ಯೋಜನೆಯ ಲಾಭವನ್ನು ಜಿಲ್ಲೆಯ 1,61,531 ರೈತರು ಪಡೆದುಕೊಂಡಿದ್ದಾರೆ ಎಂದರು.</p>.<p>ಸಂಜೀವಿನಿ ಎನ್ಆರ್ಎಲ್ಎಂ ತಾಲ್ಲೂಕು ವ್ಯವಸ್ಥಾಪಕ ಕಿರಣ ಭಟ್, ಕೆವಿಕೆ ವಿಜ್ಞಾನಿಗಳಾದ ಹರೀಶ ಡಿ.ಕೆ, ವಿಜಯಲಕ್ಷ್ಮಿ ಎಸ್. ನಾಯಕ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>