ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಕಾರವಾರ: ನಗರಸಭೆ ವ್ಯಾಪ್ತಿಯ ಗುಡ್ಡೆಹಳ್ಳಿ ರಸ್ತೆ ಶಾಪಗ್ರಸ್ತ

ಕಾಯಿಲೆ ಬಿದ್ದವರ ಚಿಕಿತ್ಸೆಗೆ ಕರೆದೊಯ್ಯುವುದೂ ಸವಾಲು: ಓದಿಗೆ ಊರು ಬಿಡುವ ಚಿಂತೆ
Published : 24 ಸೆಪ್ಟೆಂಬರ್ 2024, 5:47 IST
Last Updated : 24 ಸೆಪ್ಟೆಂಬರ್ 2024, 5:47 IST
ಫಾಲೋ ಮಾಡಿ
Comments
ಕಾರವಾರ ನಗರ ವ್ಯಾಪ್ತಿಯ ಗುಡ್ಡೆಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಡಿದಾದ ಕಚ್ಚಾರಸ್ತೆ
ಕಾರವಾರ ನಗರ ವ್ಯಾಪ್ತಿಯ ಗುಡ್ಡೆಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಡಿದಾದ ಕಚ್ಚಾರಸ್ತೆ
ಗುಡ್ಡೆಹಳ್ಳಿ ರಸ್ತೆಯ ದುರಸ್ತಿಗೆ ಹಿಂದಿನ ಶಾಸಕರು ಅನುದಾನ ಕೊಡಿಸಿದ್ದರೂ ಕೆಲಸ ಆಗಿಲ್ಲ. ತ್ವರಿತವಾಗಿ ಕೆಲಸ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ
ರವಿರಾಜ ಅಂಕೋಲೇಕರ್ ನಗರಸಭೆ ಅಧ್ಯಕ್ಷ
ಗುಡ್ಡೆಹಳ್ಳಿಗೆ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸುತ್ತಲೇ ಮೂರು ತಲೆಮಾರು ಕಳೆಯಿತು. ರಸ್ತೆ ಸುಧಾರಣೆಯಾಗದ ಹೊರತು ಆರೋಗ್ಯ ಶಿಕ್ಷಣದಂತಹ ಸೌಲಭ್ಯ ಪಡೆಯುವುದೂ ಕಷ್ಟವಾಗಿದೆ
ದೇವರಾಯ ಗೌಡ ಗ್ರಾಮಸ್ಥ
ಅನುದಾನ ಸಿಕ್ಕರೂ ಸುಧಾರಣೆಯಾಗದ ರಸ್ತೆ
‘ಗ್ರಾಮಕ್ಕೆ 1.2 ಕಿ.ಮೀ ಉದ್ದದ ರಸ್ತೆ ಸುಧಾರಣೆಗೆ ₹50 ಲಕ್ಷ ಮಂಜೂರಾಗಿತ್ತು. ಈವರೆಗೆ ಕೆಲಸ ಸರಿಯಾಗಿ ನಡೆದಿಲ್ಲ. ಕೆಲವೇ ಅಡಿಗಳಷ್ಟು ದೂರದವರೆಗೆ ಜಲ್ಲಿ ಕಲ್ಲು ಮಿಶ್ರಣ ಮಾಡಿದ್ದರು. ಉಳಿದ ಕೆಲಸವನ್ನು ಈವರೆಗೆ ಮಾಡಿಲ್ಲ’ ಎಂದು ಗುಡ್ಡೆಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ‘ಶವವನ್ನು ಕೋಲಿಗೆ ಕಟ್ಟಿಕೊಂಡು ಸಾಗಿದ ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡು ಜಲ್ಲಿ ಹರವಿದ್ದ ರಸ್ತೆಯ ಮೇಲೆ ಮಣ್ಣು ಹಾಸುವ ಕೆಲಸ ನಡೆದಿದೆ. ಉಳಿದ ಭಾಗ ದುರಸ್ತಿಪಡಿಸುವ ಕೆಲಸವನ್ನೂ ಕೈಗೊಳ್ಳಬೇಕು’ ಎಂದೂ ಹೇಳಿದ್ದಾರೆ. ರಸ್ತೆ ಸುಧಾರಣೆ ಕಾಮಗಾರಿ ನಡೆಯದ ಕುರಿತು ಮಾಹಿತಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಲಾಯಿತಾದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT