<p><strong>ಕಾರವಾರ:</strong> ಇಲ್ಲಿನ ಬೈತಕೋಲದ ಭೂದೇವಿ ಗುಡ್ಡದಲ್ಲಿ ನೌಕಾದಳದಿಂದ ನಿರ್ಮಾಣವಾದ ರಸ್ತೆ ಕಾಮಗಾರಿಯಿಂದ ಭೂಕುಸಿತ ಸಮಸ್ಯೆ ಆರಂಭಗೊಂಡಿದೆ ಎಂದು ಬೈತಕೋಲ– ಅಲಿಗದ್ದಾ ನಿವಾಸಿಗರ ಸಂಘದವರು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರಿಗೆ ದೂರು ನೀಡಿದ್ದಾರೆ.</p>.<p>‘ಭೂದೇವಿ ಗುಡ್ಡದ ತಪ್ಪಲಿನಲ್ಲಿ ಬೈತಕೋಲ ಗ್ರಾಮದ ನೂರಾರು ಕುಟುಂಬಗಳು ವಾಸವಾಗಿವೆ. ಈ ಜನರ ಸುರಕ್ಷತೆಯನ್ನು ಪರಿಗಣಿಸದೆ ನೌಕಾದಳವು ಗುಡ್ಡವನ್ನು ಕೊರೆದು ರಸ್ತೆ ನಿರ್ಮಿಸಿದೆ. ಹೀಗೆ ರಸ್ತೆ ನಿರ್ಮಿಸುವ ಕೆಲಸ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದಂತಿಲ್ಲ. ಇದರಿಂದಲೇ ಭೂಕುಸಿತದ ಘಟನೆಗಳು ಹೆಚ್ಚುತ್ತಿವೆ’ ಎಂದು ದೂರಲಾಗಿದೆ.</p>.<p>‘ಮಳೆಗಾಲದ ಆರಂಭದಲ್ಲಿಯೇ ಗುಡ್ಡದಿಂದ ಅಪಾರ ಪ್ರಮಾಣದ ನೀರು ಮಣ್ಣು ಮತ್ತು ಕಲ್ಲಿನ ರಾಶಿಯ ಸಮೇತ ಬೈತಕೋಲ ಗ್ರಾಮದತ್ತ ನುಗ್ಗಿ ಬಂದಿದೆ. ಗುಡ್ಡದ ಮೇಲೆ ಹಲವೆಡೆ ಭೂಕುಸಿತ ಉಂಟಾಗಿದೆ. ಇದಕ್ಕೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ರಸ್ತೆಯೇ ಪ್ರಮುಖ ಕಾರಣ’ ಎಂದೂ ಆರೋಪಿಸಿದ್ದಾರೆ.</p>.<p>‘ಬೈತಕೋಲ ಗ್ರಾಮಸ್ಥರ ಸುರಕ್ಷತೆಯ ಹಿತದೃಷ್ಟಿಯಿಂದ ಕೂಡಲೆ ಗುಡ್ಡ ಕುಸಿತ ತಡೆಗೆ ತುರ್ತು ಕ್ರಮ ಕೈಗೊಳ್ಳಲು ಜಿಲ್ಲಾಡಳಿತವು ನೌಕಾದಳಕ್ಕೆ ಸೂಚನೆ ನೀಡಬೇಕು. ಮಳೆನೀರು ಗ್ರಾಮಕ್ಕೆ ನುಗ್ಗಿ ಬರುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಲಾಗಿದೆ.</p>.<p>ಸಂಘದ ಅಧ್ಯಕ್ಷ ಪ್ರೀತಮ್ ಮಾಸೂರಕರ್, ಜಂಟಿ ಕಾರ್ಯದರ್ಶಿ ವಿಲ್ಸನ್ ಫರ್ನಾಂಡಿಸ್ ಈ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಇಲ್ಲಿನ ಬೈತಕೋಲದ ಭೂದೇವಿ ಗುಡ್ಡದಲ್ಲಿ ನೌಕಾದಳದಿಂದ ನಿರ್ಮಾಣವಾದ ರಸ್ತೆ ಕಾಮಗಾರಿಯಿಂದ ಭೂಕುಸಿತ ಸಮಸ್ಯೆ ಆರಂಭಗೊಂಡಿದೆ ಎಂದು ಬೈತಕೋಲ– ಅಲಿಗದ್ದಾ ನಿವಾಸಿಗರ ಸಂಘದವರು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರಿಗೆ ದೂರು ನೀಡಿದ್ದಾರೆ.</p>.<p>‘ಭೂದೇವಿ ಗುಡ್ಡದ ತಪ್ಪಲಿನಲ್ಲಿ ಬೈತಕೋಲ ಗ್ರಾಮದ ನೂರಾರು ಕುಟುಂಬಗಳು ವಾಸವಾಗಿವೆ. ಈ ಜನರ ಸುರಕ್ಷತೆಯನ್ನು ಪರಿಗಣಿಸದೆ ನೌಕಾದಳವು ಗುಡ್ಡವನ್ನು ಕೊರೆದು ರಸ್ತೆ ನಿರ್ಮಿಸಿದೆ. ಹೀಗೆ ರಸ್ತೆ ನಿರ್ಮಿಸುವ ಕೆಲಸ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದಂತಿಲ್ಲ. ಇದರಿಂದಲೇ ಭೂಕುಸಿತದ ಘಟನೆಗಳು ಹೆಚ್ಚುತ್ತಿವೆ’ ಎಂದು ದೂರಲಾಗಿದೆ.</p>.<p>‘ಮಳೆಗಾಲದ ಆರಂಭದಲ್ಲಿಯೇ ಗುಡ್ಡದಿಂದ ಅಪಾರ ಪ್ರಮಾಣದ ನೀರು ಮಣ್ಣು ಮತ್ತು ಕಲ್ಲಿನ ರಾಶಿಯ ಸಮೇತ ಬೈತಕೋಲ ಗ್ರಾಮದತ್ತ ನುಗ್ಗಿ ಬಂದಿದೆ. ಗುಡ್ಡದ ಮೇಲೆ ಹಲವೆಡೆ ಭೂಕುಸಿತ ಉಂಟಾಗಿದೆ. ಇದಕ್ಕೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ರಸ್ತೆಯೇ ಪ್ರಮುಖ ಕಾರಣ’ ಎಂದೂ ಆರೋಪಿಸಿದ್ದಾರೆ.</p>.<p>‘ಬೈತಕೋಲ ಗ್ರಾಮಸ್ಥರ ಸುರಕ್ಷತೆಯ ಹಿತದೃಷ್ಟಿಯಿಂದ ಕೂಡಲೆ ಗುಡ್ಡ ಕುಸಿತ ತಡೆಗೆ ತುರ್ತು ಕ್ರಮ ಕೈಗೊಳ್ಳಲು ಜಿಲ್ಲಾಡಳಿತವು ನೌಕಾದಳಕ್ಕೆ ಸೂಚನೆ ನೀಡಬೇಕು. ಮಳೆನೀರು ಗ್ರಾಮಕ್ಕೆ ನುಗ್ಗಿ ಬರುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಲಾಗಿದೆ.</p>.<p>ಸಂಘದ ಅಧ್ಯಕ್ಷ ಪ್ರೀತಮ್ ಮಾಸೂರಕರ್, ಜಂಟಿ ಕಾರ್ಯದರ್ಶಿ ವಿಲ್ಸನ್ ಫರ್ನಾಂಡಿಸ್ ಈ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>