ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೊಲೀಸ್ ಇಲಾಖೆಯ 12, ಅರಣ್ಯ ಇಲಾಖೆಯ ಐವರು ಹಾಗೂ ಇತರ ಇಲಾಖೆಗಳ ನಾಲ್ವರು ಅಧಿಕಾರಿಗಳು, ಸಿಬ್ಬಂದಿ ಭಾನುವಾರ ಬೆಳಿಗ್ಗೆ 9.30ಕ್ಕೆ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ಗೆ ತೆರಳಿದ್ದರು. ಸಂಜೆಯವರೆಗೆ ಮುಂದುವರಿದಿದ್ದ ಈ ಕಾರ್ಯಾಚರಣೆಯ ವೇಳೆ ಚಿರತೆಯೊಂದು ಕಾಣಿಸಿಕೊಂಡ ಪರಿಣಾಮ ಡಿವೈಎಸ್ಪಿ ಶಂಕರ್ ಮಾರಿಹಾಳ ಹಾಗೂ ಇನ್ನೊಬ್ಬ ಅಧಿಕಾರಿ ತಂಡದಿಂದ ಬೇರ್ಪಟ್ಟಿದ್ದರು’ ಎಂದು ವಿವರಿಸಿದರು.