<p><strong>ಹೊನ್ನಾವರ</strong>: ಕೋವಿಡ್ ಎರಡನೇ ಅಲೆ ಸೃಷ್ಟಿಸಿರುವ ಸಂಕಷ್ಟದ ಸರಮಾಲೆಯ ನಡುವೆಯೇ ಮಳೆಗಾಲ ಕೂಡ ಸಮೀಪಿಸುತ್ತಿದೆ. ಇದರಿಂದ ಜನರು ಆತಂಕದಲ್ಲೇ ಮುಂಗಾರು ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ.</p>.<p>ಮನೆ, ಅಂಗಡಿ, ದನದ ಕೊಟ್ಟಿಗೆ ಹೀಗೆ ವಿವಿಧ ರೀತಿಯ ಕಟ್ಟಡಗಳನ್ನು ರಿಪೇರಿ ಮಾಡುವ ಕೆಲಸ ಹಲವರದ್ದಾಗಿದೆ. ಹೊಸ ಮನೆ ಹಾಗೂ ಉಳಿದ ಕಟ್ಟಡಗಳನ್ನು ಪೂರ್ಣಗೊಳಿಸಲು ಕೆಲವರು ಹೆಣಗಾಡುತ್ತಿದ್ದಾರೆ. ಕೊಬ್ಬರಿ ತಯಾರಿಸುವುದು, ಹೊಲ-ಗದ್ದೆಗಳಿಗೆ ತರಗೆಲೆಗಳ ಗೊಬ್ಬರ ಹಾಕುವುದು, ಅಡಿಕೆ ಮಿಳ್ಳೆ ಉದುರದಂತೆ ಮದ್ದು ಸಿಂಪಡಣೆ ಮೊದಲಾದ ಕೆಲಸಗಳನ್ನು ತುರ್ತಾಗಿ ಪೂರ್ಣಗೊಳಿಸುವ ಧಾವಂತದಲ್ಲಿದ್ದಾರೆ.</p>.<p>ಲಾಕ್ಡೌನ್ ಕಾರಣದಿಂದ ವಾಹನಗಳ ಸಂಚಾರಕ್ಕೆ ನಿಯಂತ್ರಣ ಹೇರಲಾಗಿದೆ. ಇದರಿಂದ ಕೆಲವೆಡೆ ಕೂಲಿಕಾರರು ಕೆಲಸ ಕಳೆದುಕೊಂಡಿದ್ದರೆ, ಇನ್ನು ಕೆಲವೆಡೆ ಕೂಲಿಕಾರರ ಕೃತಕ ಅಭಾವ ಸೃಷ್ಟಿಯಾಗಿದೆ.</p>.<p>ಬೆಂಗಳೂರು, ಗೋವಾ ಮತ್ತಿತರ ಸ್ಥಳಗಳಲ್ಲಿ ಕೆಲಸದಲ್ಲಿದ್ದ ಅನೇಕರು ಮನೆಗೆ ವಾಪಸಾಗಿದ್ದಾರೆ. ಮದುವೆ ಮತ್ತಿತರ ಸಮಾರಂಭಗಳಿಗೆ ಆಮಂತ್ರಣವಿದ್ದರೂ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೆಲವು ಮನೆಗಳಲ್ಲಿ ಅಣ್ಣ– ತಮ್ಮಂದಿರು ಹಾಗೂ ಇತರ ಸದಸ್ಯರು ಸೇರಿಕೊಂಡು ಮನೆ, ತೋಟದ ಕೆಲಸ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ.</p>.<p>‘ಮಳೆಗಾಲದ ಪೂರ್ವದಲ್ಲಿ ಹಿಂದೆಲ್ಲ ನಮಗೆ ಪುರುಸೊತ್ತೇ ಇರುತ್ತಿರಲಿಲ್ಲ. ಈ ಬಾರಿ ಕೆಲಸದ ಒತ್ತಡ ಅಷ್ಟೊಂದಿಲ್ಲ. ಕೂಲಿ ಹಣ ಇಂತಿಷ್ಟೇ ಬೇಕು ಎಂದು ಪಟ್ಟುಹಿಡಿಯುವಂತಿಲ್ಲ. ಕೋವಿಡ್ ಭಯದ ನಡುವೆ ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಹೆರಾವಲಿ ಗ್ರಾಮದ ದನದ ಕೊಟ್ಟಿಗೆಯೊಂದಕ್ಕೆ ಸೋಗೆ ಹೊದಿಕೆ ಮಾಡುತ್ತಿದ್ದ ಸುಬ್ರಹ್ಮಣ್ಯ ನಾಯ್ಕ ಹೇಳಿದರು.</p>.<p>ಮಹಿಳೆಯರು ಅಡುಗೆ ಕೆಲಸದ ಜೊತೆಗೆ ಹಪ್ಪಳ– ಸಂಡಿಗೆ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಶಾಲಾ– ಕಾಲೇಜುಗಳು ಮುಚ್ಚಿರುವುದರಿಂದ ಮನೆಯಲ್ಲೇ ಇರುವ ಮಕ್ಕಳು ಇವರ ಸಹಾಯಕ್ಕೆ ನಿಂತಿರುವುದನ್ನು ಕೆಲವು ಮನೆಗಳಲ್ಲಿ ಕಾಣಬಹುದಾಗಿದೆ.</p>.<p>ಹಲಸು, ಮಾವು ಮೊದಲಾದ ಹಣ್ಣಿನ ಬೆಳೆಗಳು ಈ ಬಾರಿ ಬೆಳೆಯಲು ತಡವಾಗಿದೆ. ಈಗಷ್ಟೇ ಈ ಹಣ್ಣುಗಳು ಕೊಯ್ಲಿಗೆ ಸಿಗುತ್ತಿವೆ. ಆಗಾಗ ಮೋಡ ಕವಿಯುತ್ತಿರುವುದರಿಂದ ಮಳೆಗಾಲಕ್ಕಾಗಿ ಈ ಹಣ್ಣುಗಳ ಉತ್ಪನ್ನಗಳನ್ನು ತಯಾರಿಸುವ ಕೆಲಸಕ್ಕೆ ವೇಗ ಸಿಕ್ಕಿದೆ. ಹಳ್ಳಿಗಳಲ್ಲಿ ಅಕ್ಕಪಕ್ಕದ ಮನೆಯವರು ಹಾಗೂ ನೆಂಟರಿಷ್ಟರ ಸಹಕಾರದೊಂದಿಗೆ ನಡೆಯುತ್ತಿದ್ದ ಇಂಥ ಹಲವು ಮುಂಗಾರು ಪೂರ್ವ ಹಂಗಾಮಿನ ಕೆಲಸಗಳಿಗೆ ಕೋವಿಡ್ ಪೆಟ್ಟು ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾವರ</strong>: ಕೋವಿಡ್ ಎರಡನೇ ಅಲೆ ಸೃಷ್ಟಿಸಿರುವ ಸಂಕಷ್ಟದ ಸರಮಾಲೆಯ ನಡುವೆಯೇ ಮಳೆಗಾಲ ಕೂಡ ಸಮೀಪಿಸುತ್ತಿದೆ. ಇದರಿಂದ ಜನರು ಆತಂಕದಲ್ಲೇ ಮುಂಗಾರು ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ.</p>.<p>ಮನೆ, ಅಂಗಡಿ, ದನದ ಕೊಟ್ಟಿಗೆ ಹೀಗೆ ವಿವಿಧ ರೀತಿಯ ಕಟ್ಟಡಗಳನ್ನು ರಿಪೇರಿ ಮಾಡುವ ಕೆಲಸ ಹಲವರದ್ದಾಗಿದೆ. ಹೊಸ ಮನೆ ಹಾಗೂ ಉಳಿದ ಕಟ್ಟಡಗಳನ್ನು ಪೂರ್ಣಗೊಳಿಸಲು ಕೆಲವರು ಹೆಣಗಾಡುತ್ತಿದ್ದಾರೆ. ಕೊಬ್ಬರಿ ತಯಾರಿಸುವುದು, ಹೊಲ-ಗದ್ದೆಗಳಿಗೆ ತರಗೆಲೆಗಳ ಗೊಬ್ಬರ ಹಾಕುವುದು, ಅಡಿಕೆ ಮಿಳ್ಳೆ ಉದುರದಂತೆ ಮದ್ದು ಸಿಂಪಡಣೆ ಮೊದಲಾದ ಕೆಲಸಗಳನ್ನು ತುರ್ತಾಗಿ ಪೂರ್ಣಗೊಳಿಸುವ ಧಾವಂತದಲ್ಲಿದ್ದಾರೆ.</p>.<p>ಲಾಕ್ಡೌನ್ ಕಾರಣದಿಂದ ವಾಹನಗಳ ಸಂಚಾರಕ್ಕೆ ನಿಯಂತ್ರಣ ಹೇರಲಾಗಿದೆ. ಇದರಿಂದ ಕೆಲವೆಡೆ ಕೂಲಿಕಾರರು ಕೆಲಸ ಕಳೆದುಕೊಂಡಿದ್ದರೆ, ಇನ್ನು ಕೆಲವೆಡೆ ಕೂಲಿಕಾರರ ಕೃತಕ ಅಭಾವ ಸೃಷ್ಟಿಯಾಗಿದೆ.</p>.<p>ಬೆಂಗಳೂರು, ಗೋವಾ ಮತ್ತಿತರ ಸ್ಥಳಗಳಲ್ಲಿ ಕೆಲಸದಲ್ಲಿದ್ದ ಅನೇಕರು ಮನೆಗೆ ವಾಪಸಾಗಿದ್ದಾರೆ. ಮದುವೆ ಮತ್ತಿತರ ಸಮಾರಂಭಗಳಿಗೆ ಆಮಂತ್ರಣವಿದ್ದರೂ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೆಲವು ಮನೆಗಳಲ್ಲಿ ಅಣ್ಣ– ತಮ್ಮಂದಿರು ಹಾಗೂ ಇತರ ಸದಸ್ಯರು ಸೇರಿಕೊಂಡು ಮನೆ, ತೋಟದ ಕೆಲಸ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ.</p>.<p>‘ಮಳೆಗಾಲದ ಪೂರ್ವದಲ್ಲಿ ಹಿಂದೆಲ್ಲ ನಮಗೆ ಪುರುಸೊತ್ತೇ ಇರುತ್ತಿರಲಿಲ್ಲ. ಈ ಬಾರಿ ಕೆಲಸದ ಒತ್ತಡ ಅಷ್ಟೊಂದಿಲ್ಲ. ಕೂಲಿ ಹಣ ಇಂತಿಷ್ಟೇ ಬೇಕು ಎಂದು ಪಟ್ಟುಹಿಡಿಯುವಂತಿಲ್ಲ. ಕೋವಿಡ್ ಭಯದ ನಡುವೆ ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಹೆರಾವಲಿ ಗ್ರಾಮದ ದನದ ಕೊಟ್ಟಿಗೆಯೊಂದಕ್ಕೆ ಸೋಗೆ ಹೊದಿಕೆ ಮಾಡುತ್ತಿದ್ದ ಸುಬ್ರಹ್ಮಣ್ಯ ನಾಯ್ಕ ಹೇಳಿದರು.</p>.<p>ಮಹಿಳೆಯರು ಅಡುಗೆ ಕೆಲಸದ ಜೊತೆಗೆ ಹಪ್ಪಳ– ಸಂಡಿಗೆ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಶಾಲಾ– ಕಾಲೇಜುಗಳು ಮುಚ್ಚಿರುವುದರಿಂದ ಮನೆಯಲ್ಲೇ ಇರುವ ಮಕ್ಕಳು ಇವರ ಸಹಾಯಕ್ಕೆ ನಿಂತಿರುವುದನ್ನು ಕೆಲವು ಮನೆಗಳಲ್ಲಿ ಕಾಣಬಹುದಾಗಿದೆ.</p>.<p>ಹಲಸು, ಮಾವು ಮೊದಲಾದ ಹಣ್ಣಿನ ಬೆಳೆಗಳು ಈ ಬಾರಿ ಬೆಳೆಯಲು ತಡವಾಗಿದೆ. ಈಗಷ್ಟೇ ಈ ಹಣ್ಣುಗಳು ಕೊಯ್ಲಿಗೆ ಸಿಗುತ್ತಿವೆ. ಆಗಾಗ ಮೋಡ ಕವಿಯುತ್ತಿರುವುದರಿಂದ ಮಳೆಗಾಲಕ್ಕಾಗಿ ಈ ಹಣ್ಣುಗಳ ಉತ್ಪನ್ನಗಳನ್ನು ತಯಾರಿಸುವ ಕೆಲಸಕ್ಕೆ ವೇಗ ಸಿಕ್ಕಿದೆ. ಹಳ್ಳಿಗಳಲ್ಲಿ ಅಕ್ಕಪಕ್ಕದ ಮನೆಯವರು ಹಾಗೂ ನೆಂಟರಿಷ್ಟರ ಸಹಕಾರದೊಂದಿಗೆ ನಡೆಯುತ್ತಿದ್ದ ಇಂಥ ಹಲವು ಮುಂಗಾರು ಪೂರ್ವ ಹಂಗಾಮಿನ ಕೆಲಸಗಳಿಗೆ ಕೋವಿಡ್ ಪೆಟ್ಟು ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>