<p><strong>ಗೋಕರ್ಣ</strong>: ‘ಸಂಘ ಅನೇಕ ಟೀಕೆಗಳನ್ನು ಅನುಭವಿಸಿದೆ. ಅಪಹಾಸ್ಯಕ್ಕೆ ಗುರಿಯಾಗಿದೆ. ಸಂಘರ್ಷ ಎದುರಿಸಿದೆ. ಇದ್ಯಾವುದಕ್ಕೂ ಜಗ್ಗದೇ ಎಲ್ಲವನ್ನೂ ದಾಟಿಕೊಂಡು ಬಂದಿದೆ. ಇಂದು 100 ವರ್ಷದ ಸಂಭ್ರಮದಲ್ಲಿದೆ’ ಎಂದು ಆರ್.ಎಸ್.ಎಸ್. ಪ್ರಮುಖ ಶಂಕರಾನಂದ ನುಡಿದರು.</p>.<p>ಗೋಕರ್ಣ ಆರ್.ಎಸ್.ಎಸ್ ಶಾಖೆ ಭಾನುವಾರ ಆಯೋಜಿಸಿದ್ದ ಪಥಸಂಚಲನದ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.</p>.<p>‘ಶಕ್ತಿ ಬಂದಾಗ ಸಂಸ್ಕಾರವಿಲ್ಲದಿದ್ದರೆ ಅದು ಅಹಂಕಾರವಾಗತ್ತೆ. ಆದರೆ ಸಂಘ ಮತ್ತು ಅಹಂಕಾರ ತದ್ವಿರುದ್ಧ ಶಬ್ದ. ಸಂಘಕ್ಕೆ ಶಕ್ತಿ ಬಂದಿದೆ. ಎಲ್ಲಿಯೂ ಅಹಂಕಾರ ತೋರಿಸಿಲ್ಲ. ಲಕ್ಷಾಂತರ ಸೇವಾ ಕಾರ್ಯಗಳಲ್ಲಿ ಭಾಗಿಯಾಗಿದೆ’ ಎಂದರು.</p>.<p>ಮಾದನಗೇರಿಯ ಗುರುಸ್ವಾಮಿ ರಮೇಶ ಈರಯ್ಯ ನಾಯ್ಕ ಮಾತನಾಡಿ, ‘ಸಂಘದ ಶಕ್ತಿ ಹೆಮ್ಮರವಾಗಿ ಬೆಳೆಯಲಿ. ಪ್ರತಿಯೊಂದು ಮನೆಯಲ್ಲಿಯೂ ದೇಶಭಕ್ತರು ಹುಟ್ಟಲಿ’ ಎಂದು ಹಾರೈಸಿದರು. ಸಂಘವಾಲಕ ಗೋವಿಂದ ಕೆಸನಮನೆ ಇದ್ದರು. ತಾಲ್ಲೂಕು ಕಾರ್ಯವಾಹ ಗಣಪತಿ ಅಡಿ ಸ್ವಾಗತಿಸಿದರು.</p>.<p>ಪಥ ಸಂಚಲನ ಸಾಗುವ ದಾರಿಯುದ್ದಕ್ಕೂ ತಳಿರು ತೋರಣಗಳಿಂದ, ಕೇಸರಿ ಬಂಟಿಂಗ್ಸ್ಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು ಮನೆಯ ಮುಂದೆ ರಂಗೋಲಿ ಬಿಡಿಸಿ, ಗಣವೇಷಧಾರಿಗಳಿಗೆ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕರ್ಣ</strong>: ‘ಸಂಘ ಅನೇಕ ಟೀಕೆಗಳನ್ನು ಅನುಭವಿಸಿದೆ. ಅಪಹಾಸ್ಯಕ್ಕೆ ಗುರಿಯಾಗಿದೆ. ಸಂಘರ್ಷ ಎದುರಿಸಿದೆ. ಇದ್ಯಾವುದಕ್ಕೂ ಜಗ್ಗದೇ ಎಲ್ಲವನ್ನೂ ದಾಟಿಕೊಂಡು ಬಂದಿದೆ. ಇಂದು 100 ವರ್ಷದ ಸಂಭ್ರಮದಲ್ಲಿದೆ’ ಎಂದು ಆರ್.ಎಸ್.ಎಸ್. ಪ್ರಮುಖ ಶಂಕರಾನಂದ ನುಡಿದರು.</p>.<p>ಗೋಕರ್ಣ ಆರ್.ಎಸ್.ಎಸ್ ಶಾಖೆ ಭಾನುವಾರ ಆಯೋಜಿಸಿದ್ದ ಪಥಸಂಚಲನದ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.</p>.<p>‘ಶಕ್ತಿ ಬಂದಾಗ ಸಂಸ್ಕಾರವಿಲ್ಲದಿದ್ದರೆ ಅದು ಅಹಂಕಾರವಾಗತ್ತೆ. ಆದರೆ ಸಂಘ ಮತ್ತು ಅಹಂಕಾರ ತದ್ವಿರುದ್ಧ ಶಬ್ದ. ಸಂಘಕ್ಕೆ ಶಕ್ತಿ ಬಂದಿದೆ. ಎಲ್ಲಿಯೂ ಅಹಂಕಾರ ತೋರಿಸಿಲ್ಲ. ಲಕ್ಷಾಂತರ ಸೇವಾ ಕಾರ್ಯಗಳಲ್ಲಿ ಭಾಗಿಯಾಗಿದೆ’ ಎಂದರು.</p>.<p>ಮಾದನಗೇರಿಯ ಗುರುಸ್ವಾಮಿ ರಮೇಶ ಈರಯ್ಯ ನಾಯ್ಕ ಮಾತನಾಡಿ, ‘ಸಂಘದ ಶಕ್ತಿ ಹೆಮ್ಮರವಾಗಿ ಬೆಳೆಯಲಿ. ಪ್ರತಿಯೊಂದು ಮನೆಯಲ್ಲಿಯೂ ದೇಶಭಕ್ತರು ಹುಟ್ಟಲಿ’ ಎಂದು ಹಾರೈಸಿದರು. ಸಂಘವಾಲಕ ಗೋವಿಂದ ಕೆಸನಮನೆ ಇದ್ದರು. ತಾಲ್ಲೂಕು ಕಾರ್ಯವಾಹ ಗಣಪತಿ ಅಡಿ ಸ್ವಾಗತಿಸಿದರು.</p>.<p>ಪಥ ಸಂಚಲನ ಸಾಗುವ ದಾರಿಯುದ್ದಕ್ಕೂ ತಳಿರು ತೋರಣಗಳಿಂದ, ಕೇಸರಿ ಬಂಟಿಂಗ್ಸ್ಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು ಮನೆಯ ಮುಂದೆ ರಂಗೋಲಿ ಬಿಡಿಸಿ, ಗಣವೇಷಧಾರಿಗಳಿಗೆ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>