<p><strong>ಶಿರಸಿ</strong>: ಬೇಡ್ತಿ–ವರದಾ ಹಾಗೂ ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆ ವಿರೋಧಿಸಿ ನಗರದಲ್ಲಿ ಜನವರಿ 11ರಂದು ನಡೆಯಲಿರುವ ಬೃಹತ್ ಜನ ಸಮಾವೇಶ ಯಶಸ್ಸಾಗಿಸಲು ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕರೆ ನೀಡಿದರು. </p>.<p>ತಾಲ್ಲೂಕಿನ ಸ್ವರ್ಣವಲ್ಲೀ ಮಠದಲ್ಲಿ ಗುರುವಾರ ಜರುಗಿದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. </p>.<p>ಡಿ.2ನೇ ವಾರದಲ್ಲಿ ಬೆಂಗಳೂರಲ್ಲಿ ಪಶ್ಚಿಮ ಘಟ್ಟದ ಸಂರಕ್ಷಣೆ ಕುರಿತ ಸಭೆ ನಡೆಯಲಿದ್ದು, ಅದನ್ನು ಪ್ರಭಲವಾಗಿ ನಡೆಸುವ ಅಗತ್ಯವಿದೆ. ಜತೆಗೆ ಶಿರಸಿಯಲ್ಲಿ ಡಿ.3ನೇ ವಾರ ವಿವಿಧ ಸಮುದಾಯಗಳ ಪ್ರಮುಖರ ಸಭೆ ಏರ್ಪಡಿಸಬೇಕಿದೆ’ ಎಂದು ತಿಳಿಸಿದರು.</p>.<p>ಸಭೆಯಲ್ಲಿ ಬೇಡ್ತಿ, ಶಾಲ್ಮಲಾ, ಅಘನಾಶಿನಿ ನದಿ ಕಾವಲು ಸಮಿತಿ ರಚನೆ, ಬೇಡ್ತಿ-ಅಘನಾಶಿನಿ ಸಂರಕ್ಷಿತ ಪ್ರದೇಶ ಆದೇಶ ಉಲ್ಲಂಘನೆಗೆ ವಿರೋಧಿಸಿ ಮನವಿ ಸಲ್ಲಿಕೆ, ಕುಮಟಾದಲ್ಲಿ ಕರಾವಳಿ ಅಘನಾಶಿನಿ ತೀರದ ಮೀನುಗಾರರು, ರೈತರು, ಮುಖಂಡರ ಸಭೆ ಆಯೋಜಿಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.</p>.<p>ಬೇಡ್ತಿ ಜನಾಂದೋಲನ ಸಭೆಗೆ ಜಿಲ್ಲೆಯ ಎಲ್ಲ ಮಠಾಧೀಶರನ್ನು ಆಹ್ವಾನಿಸಬೇಕು. ಬೇಡ್ತಿ ಅಘನಾಶಿನಿ ಕಣಿವೆ ಉಳಿಸುವ ನಿರ್ಣಯವನ್ನು ಎಲ್ಲ ಪಂಚಾಯಿತಿಗಳು, ಸಹಕಾರ ಸಂಘ ಸಂಸ್ಥೆಗಳು ಕೈಗೊಳ್ಳಬೇಕು ಎಂದು ಮನವಿ ಮಾಡಲಾಯಿತು. </p>.<p>ಬೇಡ್ತಿ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಹೋರಾಟದ ಚಟುವಟಿಕೆ ಹಾಗೂ ಸ್ವರೂಪ ಪ್ರಕಟಿಸಿ, ‘ಬೇಡ್ತಿ ನಿಯೋಗದಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿದ್ದು, ದೆಹಲಿಯ ಜಲಶಕ್ತಿ ಹಾಗೂ ಅರಣ್ಯ ಸಚಿವರನ್ನು ಭೇಟಿ ಮಾಡಬೇಕು’ ಎಂದು. </p>.<p>ರಮಾಕಾಂತ ಮಂಡೇಮನೆ, ಗೋಪಾಲಕೃಷ್ಣ ತಂಗಾರ್ಮನೆ, ನರಸಿಂಹ ಸಾತೊಡ್ಡಿ, ಆರ್.ಎಸ್.ಹೆಗಡೆ ಭೈರುಂಬೆ, ಶ್ರೀಪಾದ ಶಿರನಾಲಾ, ಜಿ.ವಿ.ಹೆಗಡೆ ಗೊಡ್ವೆಮನೆ, ಸುರೇಶ ಹಕ್ಕೀಮನೆ, ವಿಶ್ವನಾಥ ಶೀಗೇಹಳ್ಳಿ, ವಿ.ಎಲ್.ಹೆಗಡೆ, ರತ್ನಾಕರ ಬಾಡಲಕೊಪ್ಪ ಮಾತನಾಡಿದರು. ಅಘನಾಶಿನಿ ಕಣಿವೆಯ ಸಾಮಾಜಿಕ ಕಾರ್ಯಕರ್ತ ಎನ್.ವಿ.ಹೆಗಡೆ ಇದ್ದರು. </p>.<div><blockquote>ನದಿ ಜೋಡಣೆ ವಿರೋಧಿಸಿ ರಾಜ್ಯ ಕೇಂದ್ರ ಸರ್ಕಾರಗಳ ಗಮನ ಸೆಳೆಯುವಲ್ಲಿ ಹೋರಾಟ ಸಮಿತಿ ಜತೆ ಜನಪ್ರತಿನಿಧಿಗಳು ಸಹಕಾರ ನೀಡಬೇಕು </blockquote><span class="attribution">ಅನಂತ ಅಶೀಸರ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ</span></div>.<p> <strong>ಸೀಮಾಧ್ಯಕ್ಷರು ಸಕ್ರಿಯರಾಗಿ: ವಿಘ್ನೇಶ್ವರ ಹೆಗಡೆ </strong></p><p> ಸಭೆಯ ವೇಳೆ ಸ್ವರ್ಣವಲ್ಲೀ ಮಠದ ಕಾರ್ಯಾಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ ಮಾತನಾಡಿ ‘ಸ್ವರ್ಣವಲ್ಲೀ ಸೀಮೆಗಳ ಅಧ್ಯಕ್ಷರು ಹಾಗೂ ಮಠದ ಪದಾಧಿಕಾರಿಗಳು ಬೇಡ್ತಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು’ ಎಂದು ಸೂಚಿಸಿದರು. ಈ ವೇಳೆ ಪರಿಸರ ಜೀವ ವಿಜ್ಞಾನಿ ಕೇಶವ ಕೊರ್ಸೆ ಅವರು ಶಿರಸಿಯಲ್ಲಿ ಈಚೆಗೆ ನಡೆದ ವಿಜ್ಞಾನಿಗಳ ವಿಚಾರ ಸಂಕಿರಣದ ಫಲಶೃತಿ ವರದಿ ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ಬೇಡ್ತಿ–ವರದಾ ಹಾಗೂ ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆ ವಿರೋಧಿಸಿ ನಗರದಲ್ಲಿ ಜನವರಿ 11ರಂದು ನಡೆಯಲಿರುವ ಬೃಹತ್ ಜನ ಸಮಾವೇಶ ಯಶಸ್ಸಾಗಿಸಲು ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕರೆ ನೀಡಿದರು. </p>.<p>ತಾಲ್ಲೂಕಿನ ಸ್ವರ್ಣವಲ್ಲೀ ಮಠದಲ್ಲಿ ಗುರುವಾರ ಜರುಗಿದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. </p>.<p>ಡಿ.2ನೇ ವಾರದಲ್ಲಿ ಬೆಂಗಳೂರಲ್ಲಿ ಪಶ್ಚಿಮ ಘಟ್ಟದ ಸಂರಕ್ಷಣೆ ಕುರಿತ ಸಭೆ ನಡೆಯಲಿದ್ದು, ಅದನ್ನು ಪ್ರಭಲವಾಗಿ ನಡೆಸುವ ಅಗತ್ಯವಿದೆ. ಜತೆಗೆ ಶಿರಸಿಯಲ್ಲಿ ಡಿ.3ನೇ ವಾರ ವಿವಿಧ ಸಮುದಾಯಗಳ ಪ್ರಮುಖರ ಸಭೆ ಏರ್ಪಡಿಸಬೇಕಿದೆ’ ಎಂದು ತಿಳಿಸಿದರು.</p>.<p>ಸಭೆಯಲ್ಲಿ ಬೇಡ್ತಿ, ಶಾಲ್ಮಲಾ, ಅಘನಾಶಿನಿ ನದಿ ಕಾವಲು ಸಮಿತಿ ರಚನೆ, ಬೇಡ್ತಿ-ಅಘನಾಶಿನಿ ಸಂರಕ್ಷಿತ ಪ್ರದೇಶ ಆದೇಶ ಉಲ್ಲಂಘನೆಗೆ ವಿರೋಧಿಸಿ ಮನವಿ ಸಲ್ಲಿಕೆ, ಕುಮಟಾದಲ್ಲಿ ಕರಾವಳಿ ಅಘನಾಶಿನಿ ತೀರದ ಮೀನುಗಾರರು, ರೈತರು, ಮುಖಂಡರ ಸಭೆ ಆಯೋಜಿಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.</p>.<p>ಬೇಡ್ತಿ ಜನಾಂದೋಲನ ಸಭೆಗೆ ಜಿಲ್ಲೆಯ ಎಲ್ಲ ಮಠಾಧೀಶರನ್ನು ಆಹ್ವಾನಿಸಬೇಕು. ಬೇಡ್ತಿ ಅಘನಾಶಿನಿ ಕಣಿವೆ ಉಳಿಸುವ ನಿರ್ಣಯವನ್ನು ಎಲ್ಲ ಪಂಚಾಯಿತಿಗಳು, ಸಹಕಾರ ಸಂಘ ಸಂಸ್ಥೆಗಳು ಕೈಗೊಳ್ಳಬೇಕು ಎಂದು ಮನವಿ ಮಾಡಲಾಯಿತು. </p>.<p>ಬೇಡ್ತಿ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಹೋರಾಟದ ಚಟುವಟಿಕೆ ಹಾಗೂ ಸ್ವರೂಪ ಪ್ರಕಟಿಸಿ, ‘ಬೇಡ್ತಿ ನಿಯೋಗದಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿದ್ದು, ದೆಹಲಿಯ ಜಲಶಕ್ತಿ ಹಾಗೂ ಅರಣ್ಯ ಸಚಿವರನ್ನು ಭೇಟಿ ಮಾಡಬೇಕು’ ಎಂದು. </p>.<p>ರಮಾಕಾಂತ ಮಂಡೇಮನೆ, ಗೋಪಾಲಕೃಷ್ಣ ತಂಗಾರ್ಮನೆ, ನರಸಿಂಹ ಸಾತೊಡ್ಡಿ, ಆರ್.ಎಸ್.ಹೆಗಡೆ ಭೈರುಂಬೆ, ಶ್ರೀಪಾದ ಶಿರನಾಲಾ, ಜಿ.ವಿ.ಹೆಗಡೆ ಗೊಡ್ವೆಮನೆ, ಸುರೇಶ ಹಕ್ಕೀಮನೆ, ವಿಶ್ವನಾಥ ಶೀಗೇಹಳ್ಳಿ, ವಿ.ಎಲ್.ಹೆಗಡೆ, ರತ್ನಾಕರ ಬಾಡಲಕೊಪ್ಪ ಮಾತನಾಡಿದರು. ಅಘನಾಶಿನಿ ಕಣಿವೆಯ ಸಾಮಾಜಿಕ ಕಾರ್ಯಕರ್ತ ಎನ್.ವಿ.ಹೆಗಡೆ ಇದ್ದರು. </p>.<div><blockquote>ನದಿ ಜೋಡಣೆ ವಿರೋಧಿಸಿ ರಾಜ್ಯ ಕೇಂದ್ರ ಸರ್ಕಾರಗಳ ಗಮನ ಸೆಳೆಯುವಲ್ಲಿ ಹೋರಾಟ ಸಮಿತಿ ಜತೆ ಜನಪ್ರತಿನಿಧಿಗಳು ಸಹಕಾರ ನೀಡಬೇಕು </blockquote><span class="attribution">ಅನಂತ ಅಶೀಸರ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ</span></div>.<p> <strong>ಸೀಮಾಧ್ಯಕ್ಷರು ಸಕ್ರಿಯರಾಗಿ: ವಿಘ್ನೇಶ್ವರ ಹೆಗಡೆ </strong></p><p> ಸಭೆಯ ವೇಳೆ ಸ್ವರ್ಣವಲ್ಲೀ ಮಠದ ಕಾರ್ಯಾಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ ಮಾತನಾಡಿ ‘ಸ್ವರ್ಣವಲ್ಲೀ ಸೀಮೆಗಳ ಅಧ್ಯಕ್ಷರು ಹಾಗೂ ಮಠದ ಪದಾಧಿಕಾರಿಗಳು ಬೇಡ್ತಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು’ ಎಂದು ಸೂಚಿಸಿದರು. ಈ ವೇಳೆ ಪರಿಸರ ಜೀವ ವಿಜ್ಞಾನಿ ಕೇಶವ ಕೊರ್ಸೆ ಅವರು ಶಿರಸಿಯಲ್ಲಿ ಈಚೆಗೆ ನಡೆದ ವಿಜ್ಞಾನಿಗಳ ವಿಚಾರ ಸಂಕಿರಣದ ಫಲಶೃತಿ ವರದಿ ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>