ಗುರುವಾರ, 16 ಅಕ್ಟೋಬರ್ 2025
×
ADVERTISEMENT
ADVERTISEMENT

ಶಿರಸಿ: ಸಹಕಾರ ಕ್ಷೇತ್ರದಲ್ಲಿ ‘ರಾಜಕೀಯ’ ಪ್ರವೇಶ

ರಾಜಕೀಯ ನಾಯಕರ ಪ್ರತಿಷ್ಠೆಗೆ ವೇದಿಕೆಯಾಗಿರುವ ಕೆಡಿಸಿಸಿ ಬ್ಯಾಂಕ್ ಚುನಾವಣೆ
Published : 16 ಅಕ್ಟೋಬರ್ 2025, 4:52 IST
Last Updated : 16 ಅಕ್ಟೋಬರ್ 2025, 4:52 IST
ಫಾಲೋ ಮಾಡಿ
Comments
ರಾಜಕಾರಣದ ಅಡಿಪಾಯವೇ ಸಹಕಾರ ಕ್ಷೇತ್ರ. ಹಾಗಾಗಿ ಸಹಕಾರ ರಂಗದಲ್ಲಿ ರಾಜಕೀಯ ಇಲ್ಲ ಎಂಬುದು ಸುಳ್ಳು. ರಾಜಕಾರಣವಿದೆ ಎಂಬ ಮಾತ್ರಕ್ಕೆ ಸಂಘರ್ಷ ಅನಿವಾರ್ಯವಲ್ಲ
ಶಿವರಾಮ ಹೆಬ್ಬಾರ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ
ಘಟಾನುಘಟಿಗಳು ಒಂದೆಡೆ
ಶಿವರಾಮ ಹೆಬ್ಬಾರ ಬಿಜೆಪಿಗೆ ಅನ್ಯಾಯ ಮಾಡಿದ್ದಾರೆಂಬ ಕಾರಣ ಒಡ್ಡಿ ಬಿಜೆಪಿಗರು ಸಹಕಾರ ಭಾರತಿ ಮೂಲಕ ಕಾಂಗ್ರೆಸ್‍ನ ಮಂಕಾಳ ವೈದ್ಯ ಬಣಕ್ಕೆ ಬೆಂಬಲ ನೀಡಿದ್ದಾರೆ. ಬಿಜೆಪಿ ಬಿಟ್ಟು ಹೊರ ಬಂದಿರುವ ಹೆಬ್ಬಾರ ಅವರು ಕಾಂಗ್ರೆಸ್ ಸೇರ್ಪಡೆಯಾದರೆ ಅಲ್ಲಿ ಶಕ್ತಿ ಕೇಂದ್ರವಾಗುತ್ತಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಹೆಬ್ಬಾರ ವಿರುದ್ಧ ಒಂದಾಗಿದ್ದಾರೆ. ಜಿಲ್ಲೆಯ ಘಟಾನುಘಟಿ ನಾಯಕರು ಹೆಬ್ಬಾರರನ್ನು ಮಣಿಸಲು ಜತೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಹೆಬ್ಬಾರ ಜತೆಗೂಡಿ ನಿರ್ದೇಶಕರಾಗಿ ಆಯ್ಕೆಗೊಂಡ ಕೆಲವು ನಿರ್ದೇಶಕರು ಹೆಬ್ಬಾರರ ಮೇಲೆ ದೂಷಣೆ ಮಾಡಿ ಅವರಿಂದ ದೂರಾಗಿದ್ದಾರೆ. ಆದರೆ ಹೆಬ್ಬಾರ ಅವರು ಬ್ಯಾಂಕ್‍ನಲ್ಲಿ ಮಾಡಿದ ಸಾಧನೆ ಕಾರ್ಯಚಟುವಟಿಕೆ ಪ್ರಗತಿ ಮುಂದಿಟ್ಟು ಮತ್ತೊಮ್ಮೆ ಆಯ್ಕೆಗೊಳ್ಳುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT