'ಈಗಾಗಲೇ ದುರ್ನಾತ ಬೀರುವ ಬಾವಿಗಳ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಯಾವ ಕಾರಣಕ್ಕೆ ಹೀಗಾಗಿದೆ ಎಂಬುದು ತಿಳಿದ ನಂತರ ಯಾವ ರೀತಿಯಲ್ಲಿ ಬಾವಿ ಶುದ್ಧೀಕರಿಸಬೇಕು ಎಂಬುದನ್ನು ನೋಡಬೇಕು. ಆವರೆಗೆ ನಗರಾಡಳಿತ ನೀಡುವ ನೀರನ್ನೇ ಬಳಸುತ್ತೇವೆ' ಎನ್ನುತ್ತಾರೆ ಪ್ರಗತಿಗರ ಅಭಿವೃದ್ಧಿ ಸಮಿತಿಯ ಎಂ.ಎಂ.ಭಟ್.
ಪ್ರಗತಿ ನಗರದಲ್ಲಿರುವ ಬಾವಿ
'ನಗರದ ನೀರು ಸರಬರಾಜಿನ ಜಲಮೂಲವಾದ ಕೆಂಗ್ರೆ ಹಾಗೂ ಮಾರಿಗದ್ದೆಗಳಲ್ಲಿ ನೀರು ತೀವ್ರ ಇಳಿಮುಖವಾಗಿದೆ. ಮಾರ್ಚ್ ಮೂರನೇ ವಾರದಲ್ಲಿ ರಾಜ್ಯ ಪ್ರಸಿದ್ಧ ಮಾರಿಕಾಂಬಾ ಜಾತ್ರೆಯಿದ್ದು, ಲಕ್ಷಾಂತರ ಭಕ್ತರು, ಪ್ರವಾಸಿಗರು ನಗರಕ್ಕೆ ಬರುತ್ತಾರೆ. ಈ ಸಂದರ್ಭದಲ್ಲಿ ಈಗಿರುವ ನೀರಿನ ಪ್ರಮಾಣ ಸಾಲುವುದಿಲ್ಲ. ಆಗ ನಗರಸಭೆ ವತಿಯಿಂದ ನೀರು ಕಡಿತ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಮತ್ತಷ್ಟು ಸಮಸ್ಯೆಯಾಗುತ್ತದೆ' ಎಂಬುದು ಇಲ್ಲಿನ ನಿವಾಸಿ ನಾಗರಾಜ ಹೆಗಡೆ.
ಪ್ರಗತಿ ನಗರದಲ್ಲಿ ಬಾವಿಗಳ ನೀರು ಹಾಳಾಗಿರುವ ಕುರಿತು ಸ್ಥಳಿಕರು ಈವರೆಗೂ ಗಮನಕ್ಕೆ ತಂದಿಲ್ಲ. ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.