ಸರಿಯಾದ ನಿರ್ವಹಣೆ ಇಲ್ಲದ ಕಾರಣ ಘಟಕ ಸ್ಥಗಿತವಾಗಿ ಇಷ್ಟು ವರ್ಷ ಕಳೆದರೂ ಅದರ ದುಷ್ಪರಿಣಾಮ ನಿಂತಿಲ್ಲ. ಈ ಪ್ರದೇಶ ಬದುಕಲು ಯೋಗ್ಯ ವಾತಾವರಣ ಹೊಂದಿಲ್ಲ. ನಗರಸಭೆಯವರು ಕಸದ ರಾಶಿ ತೆರವು ಮಾಡಿ ಬದುಕಲು ಅವಕಾಶ ನೀಡಬೇಕು
ನಿರ್ಮಲಾ ನಾಯ್ಕ ಸ್ಥಳೀಯ ನಿವಾಸಿ
ಹಳೆಯ ಘಟಕದಲ್ಲಿ ತುಂಬಿರುವ ಕಸ ಮಣ್ಣು ತೆಗೆದು ಜಾಗ ಸಮತಟ್ಟಿಗೆ ಟೆಂಡರ್ ಕರೆಯಲು ಜಿಲ್ಲಾಮಟ್ಟದಲ್ಲಿ ಸಿದ್ಧತೆ ನಡೆದಿದೆ. ಟೆಂಡರ್ ಪ್ರಕ್ರಿಯೆ ನಡೆದು ಯಾರಾದರೂ ಆಸಕ್ತಿ ವಹಿಸಿದರೆ ಎರಡು ತಿಂಗಳಲ್ಲಿ ಘಟಕ ಸ್ವಚ್ಛವಾಗಲಿದೆ