ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶ್ರೀಗಳ ಪೂರ್ವಾಶ್ರಮದ ತಮ್ಮ ವಿಷಪ್ರಾಶನದ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.ಆ ಭಾಗದಶಾಸಕನಾಗಿ, ವಿಧಾನಪರಿಷತ್ತಿನವಿರೋಧ ಪಕ್ಷದ ನಾಯಕನಾಗಿ ಸೂಕ್ತ ಮತ್ತು ಪಾರದರ್ಶಕ ತನಿಖೆ ಕೈಗೊಳ್ಳುವಂತೆ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೇನೆ. ಶ್ರೀಗಳ ಸಾವಿಗೆ ಇನ್ನೆರಡು, ಮೂರು ದಿನಗಳಲ್ಲಿ ಕಾರಣ ತಿಳಿದುಬರಬಹುದು’ ಎಂದು ಹೇಳಿದರು.