<p><strong>ಶಿರಸಿ:</strong> ತಾಲ್ಲೂಕಿನ ಮತ್ತಿಘಟ್ಟ ಮುಂಡಗನಮನೆ ಸೇವಾ ಸಹಕಾರಿ ಸಂಘದಲ್ಲಿ ಆಯೋಜಿಸಿದ್ದ ಹೆಸ್ಕಾಂ ಸಿಬ್ಬಂದಿ ಹಾಗೂ ವಿದ್ಯುತ್ ಗ್ರಾಹಕರ ಸಮನ್ವಯ ಸಭೆಯಲ್ಲಿ ಹತ್ತಾರು ಸಮಸ್ಯೆಗಳ ಬಗ್ಗೆ ಗ್ರಾಹಕರು ಧ್ವನಿ ಎತ್ತಿ ಹೆಸ್ಕಾಂನ ಗಮನ ಸೆಳೆಯುವ ಕಾರ್ಯ ಮಾಡಿದರು. </p>.<p>ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಗ್ರಾಹಕರು ಕಳೆದ ವರ್ಷ ಯಾವ ಯಾವ ರೀತಿಯಲ್ಲಿ ವಿದ್ಯುತ್ ಸಂಪರ್ಕ ನೀಡುವಲ್ಲಿ ಸಮಸ್ಯೆಗಳಿದ್ದವು, ಅವು ಈಗಲೂ ಮುಂದುವರಿದಿದೆ. ಈ ಸಮಸ್ಯೆಗಳನ್ನು ಹೆಸ್ಕಾಂನವರು ಬಗೆಹರಿಸುವ ಪ್ರಯತ್ನ ಮಾಡಲಿಲ್ಲವೆಂದು<br>ದೂರಿದರು. ಹೆಸ್ಕಾಂನ ಸಂಪಖಂಡ ವಿಭಾಗದ ಸೆಕ್ಷನ್ ಅಧಿಕಾರಿ ಮಂಜುನಾಥ ಮಾತನಾಡಿ, ಈ ಭಾಗದ ವಿದ್ಯುತ್ ನೀಡುವಲ್ಲಿ ಏನೇನು ಸಮಸ್ಯೆಗಳು ಉದ್ಭವವಾಗುತ್ತಿದೆ. ಅದನ್ನು ಹೇಗೆ ಬಗೆಹರಿಸುತ್ತೇವೆ ಎಂದು ವಿವರಿಸಿದರು.</p>.<p>ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಸಂಘವು ಸಹಕಾರಿ ತತ್ವದಂತೆ ನಡೆಯುತ್ತಿದ್ದು, ಸಾಮಾಜಿಕ ಕಳಕಳಿಯು ಈ ತತ್ವಗಳಲ್ಲಿ ಒಂದಾಗಿದೆ. ಹಾಗಾಗಿ ಸಂಘದ ಸದಸ್ಯರ ಪರವಾಗಿ ಕುಂದು ಕೊರತೆ ನಿವಾರಣೆಗೆ ಸಭೆಯನ್ನು ಕರೆಯಲಾಗಿದೆ. ಅಲ್ಲದೇ ಈ ರೀತಿ ಕಳಕಳಿಯಿಂದಲೇ ನಮ್ಮ ಭಾಗದಲ್ಲಿ ಕರ್ತವ್ಯನಿರತರಾದ ಲೈನ್ಮನ್ಗಳಿಗೆ ಪ್ರತಿವರ್ಷವೂ ರೈನ್ಕೋಟ್ಗಳನ್ನು ನೀಡುತ್ತಿದ್ದೇವೆ ಎಂದರು. ಇದೇ ವೇಳೆ ಸಂಘದ ಅವತಿಯಿಂದ ಲೈನ್ಮೆನ್ಗಳಿಗೆ ರೈನ್ಕೋಟ್ಗಳನ್ನು ವಿತರಿಸಲಾಯಿತು. </p>.<p>ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಾಘವೇಂದ್ರ ಹೆಗಡೆ, ಬೆಳೆಸಿರಿ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಶ್ರೀಪಾದ ಪಾಟೀಲ, ಪ್ರಮುಖರಾದ ವಿ.ಆರ್.ಹೆಗಡೆ ಇದ್ದರು. ಸಂಘದ ಮುಖ್ಯಕಾರ್ಯನಿರ್ವಾಹಕ ನಾಗಪತಿ ಭಟ್ ಸ್ವಾಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ತಾಲ್ಲೂಕಿನ ಮತ್ತಿಘಟ್ಟ ಮುಂಡಗನಮನೆ ಸೇವಾ ಸಹಕಾರಿ ಸಂಘದಲ್ಲಿ ಆಯೋಜಿಸಿದ್ದ ಹೆಸ್ಕಾಂ ಸಿಬ್ಬಂದಿ ಹಾಗೂ ವಿದ್ಯುತ್ ಗ್ರಾಹಕರ ಸಮನ್ವಯ ಸಭೆಯಲ್ಲಿ ಹತ್ತಾರು ಸಮಸ್ಯೆಗಳ ಬಗ್ಗೆ ಗ್ರಾಹಕರು ಧ್ವನಿ ಎತ್ತಿ ಹೆಸ್ಕಾಂನ ಗಮನ ಸೆಳೆಯುವ ಕಾರ್ಯ ಮಾಡಿದರು. </p>.<p>ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಗ್ರಾಹಕರು ಕಳೆದ ವರ್ಷ ಯಾವ ಯಾವ ರೀತಿಯಲ್ಲಿ ವಿದ್ಯುತ್ ಸಂಪರ್ಕ ನೀಡುವಲ್ಲಿ ಸಮಸ್ಯೆಗಳಿದ್ದವು, ಅವು ಈಗಲೂ ಮುಂದುವರಿದಿದೆ. ಈ ಸಮಸ್ಯೆಗಳನ್ನು ಹೆಸ್ಕಾಂನವರು ಬಗೆಹರಿಸುವ ಪ್ರಯತ್ನ ಮಾಡಲಿಲ್ಲವೆಂದು<br>ದೂರಿದರು. ಹೆಸ್ಕಾಂನ ಸಂಪಖಂಡ ವಿಭಾಗದ ಸೆಕ್ಷನ್ ಅಧಿಕಾರಿ ಮಂಜುನಾಥ ಮಾತನಾಡಿ, ಈ ಭಾಗದ ವಿದ್ಯುತ್ ನೀಡುವಲ್ಲಿ ಏನೇನು ಸಮಸ್ಯೆಗಳು ಉದ್ಭವವಾಗುತ್ತಿದೆ. ಅದನ್ನು ಹೇಗೆ ಬಗೆಹರಿಸುತ್ತೇವೆ ಎಂದು ವಿವರಿಸಿದರು.</p>.<p>ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಸಂಘವು ಸಹಕಾರಿ ತತ್ವದಂತೆ ನಡೆಯುತ್ತಿದ್ದು, ಸಾಮಾಜಿಕ ಕಳಕಳಿಯು ಈ ತತ್ವಗಳಲ್ಲಿ ಒಂದಾಗಿದೆ. ಹಾಗಾಗಿ ಸಂಘದ ಸದಸ್ಯರ ಪರವಾಗಿ ಕುಂದು ಕೊರತೆ ನಿವಾರಣೆಗೆ ಸಭೆಯನ್ನು ಕರೆಯಲಾಗಿದೆ. ಅಲ್ಲದೇ ಈ ರೀತಿ ಕಳಕಳಿಯಿಂದಲೇ ನಮ್ಮ ಭಾಗದಲ್ಲಿ ಕರ್ತವ್ಯನಿರತರಾದ ಲೈನ್ಮನ್ಗಳಿಗೆ ಪ್ರತಿವರ್ಷವೂ ರೈನ್ಕೋಟ್ಗಳನ್ನು ನೀಡುತ್ತಿದ್ದೇವೆ ಎಂದರು. ಇದೇ ವೇಳೆ ಸಂಘದ ಅವತಿಯಿಂದ ಲೈನ್ಮೆನ್ಗಳಿಗೆ ರೈನ್ಕೋಟ್ಗಳನ್ನು ವಿತರಿಸಲಾಯಿತು. </p>.<p>ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಾಘವೇಂದ್ರ ಹೆಗಡೆ, ಬೆಳೆಸಿರಿ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಶ್ರೀಪಾದ ಪಾಟೀಲ, ಪ್ರಮುಖರಾದ ವಿ.ಆರ್.ಹೆಗಡೆ ಇದ್ದರು. ಸಂಘದ ಮುಖ್ಯಕಾರ್ಯನಿರ್ವಾಹಕ ನಾಗಪತಿ ಭಟ್ ಸ್ವಾಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>