<p>ಕಾರವಾರ: ‘ರಾಮನ ಧ್ಯಾನ ಮನಸ್ಸನ್ನು ಆರೋಗ್ಯ ಕಾಪಾಡಿದರೆ, ಯೋಗಾಭ್ಯಾಸ ದೈಹಿಕ ಸ್ವಾಸ್ಥ್ಯ ಉತ್ತಮಗೊಳಿಸುತ್ತದೆ. ರಾಮ ಸ್ಮರಣೆ, ಯೋಗಾಭ್ಯಾಸ ಅನುಸರಣೆ ಜೀವನಕ್ಕೆ ಅತಿ ಅಗತ್ಯ’ ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.</p>.<p>ಮಠದಲ್ಲಿ ನಡೆಯುತ್ತಿರುವ ಸಾರ್ಧ ಪಂಚಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ‘ಯೋಗ ನಡಿಗೆ–ರಾಮನೆಡೆಗೆ’ ಎಂಬ ಧ್ಯೇಯ ವಾಕ್ಯದಡಿ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ನಿತ್ಯ ಜೀವನದಲ್ಲಿ ಪ್ರಭು ರಾಮಚಂದ್ರನ ಆದರ್ಶಗುಣಗಳ ಪಾಲನೆ ಮಾಡಬೇಕು. ಯೋಗಭ್ಯಾಸ, ನಡಿಗೆಯೊಂದಿಗೆ ರಾಮನಾಮ ಜಪ ಪ್ರಜ್ವಲಿಸಿದರೆ ಪ್ರತಿಕ್ಷಣ ಪ್ರತಿನಡಿಗೆಯೂ ರಾಮನೆಡೆಗೆ ಇರಲಿದೆ’ ಎಂದರು.</p>.<p>77 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯ ಎದುರು ಸ್ವಾಮೀಜಿ ನೇತೃತ್ವದಲ್ಲಿ ನೂರಾರು ಭಕ್ತರು ಯೋಗಾಸನ ಮಾಡಿದರು. ಅಂತರಾಷ್ಟ್ರೀಯ ಖ್ಯಾತಿಯ ಯೋಗಗುರು ಮೈಸೂರಿನ ಡಾ.ಕಾರ್ಕಳ ರಾಘವೇಂದ್ರ ಪೈ ಅವರು ಭಕ್ತರಿಗೆ ಯೋಗ ತರಬೇತಿ ನೀಡಿದರು.</p>.<p>ಗಣೇಶ ನಮನ ನಡಿಗೆ, ಪ್ರಾಣ ಚೈತನ್ಯಕ್ರಿಯೆ, ಯೋಗನಡಿಗೆ ಪೈ ಸೂತ್ರ, ಕರ್ಣ ಚೈತನ್ಯ ಮಾಲಾಕ್ರಿಯೆ, ವಿಠ್ಠಲಭಾತಿ, ಪ್ರಾಣಾಯಾಮ, ಸಂಹಿತಾಧ್ಯಾನ, ಯೋಗನಿದ್ರೆ ಸೇರಿದಂತೆ ವಿವಿದ ತಂತ್ರಗಳನ್ನು ಪಾಲನೆ ಮಾಡಿದರು.</p>.<p>ಮಠದ ವ್ಯವಸ್ಥಾಪನ ಸಮಿತಿಯ ದಿನೇಶ ಪೈ, ಪ್ರದೀಪ ಪೈ, ರಾಜೇಶ ನಾಯಕ ಭಟ್ಕಳ, ಡಾ.ಕಾಶಿನಾಥ ಪೈ ಗಂಗೊಳ್ಳಿ, ಇತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರವಾರ: ‘ರಾಮನ ಧ್ಯಾನ ಮನಸ್ಸನ್ನು ಆರೋಗ್ಯ ಕಾಪಾಡಿದರೆ, ಯೋಗಾಭ್ಯಾಸ ದೈಹಿಕ ಸ್ವಾಸ್ಥ್ಯ ಉತ್ತಮಗೊಳಿಸುತ್ತದೆ. ರಾಮ ಸ್ಮರಣೆ, ಯೋಗಾಭ್ಯಾಸ ಅನುಸರಣೆ ಜೀವನಕ್ಕೆ ಅತಿ ಅಗತ್ಯ’ ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.</p>.<p>ಮಠದಲ್ಲಿ ನಡೆಯುತ್ತಿರುವ ಸಾರ್ಧ ಪಂಚಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ‘ಯೋಗ ನಡಿಗೆ–ರಾಮನೆಡೆಗೆ’ ಎಂಬ ಧ್ಯೇಯ ವಾಕ್ಯದಡಿ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ನಿತ್ಯ ಜೀವನದಲ್ಲಿ ಪ್ರಭು ರಾಮಚಂದ್ರನ ಆದರ್ಶಗುಣಗಳ ಪಾಲನೆ ಮಾಡಬೇಕು. ಯೋಗಭ್ಯಾಸ, ನಡಿಗೆಯೊಂದಿಗೆ ರಾಮನಾಮ ಜಪ ಪ್ರಜ್ವಲಿಸಿದರೆ ಪ್ರತಿಕ್ಷಣ ಪ್ರತಿನಡಿಗೆಯೂ ರಾಮನೆಡೆಗೆ ಇರಲಿದೆ’ ಎಂದರು.</p>.<p>77 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯ ಎದುರು ಸ್ವಾಮೀಜಿ ನೇತೃತ್ವದಲ್ಲಿ ನೂರಾರು ಭಕ್ತರು ಯೋಗಾಸನ ಮಾಡಿದರು. ಅಂತರಾಷ್ಟ್ರೀಯ ಖ್ಯಾತಿಯ ಯೋಗಗುರು ಮೈಸೂರಿನ ಡಾ.ಕಾರ್ಕಳ ರಾಘವೇಂದ್ರ ಪೈ ಅವರು ಭಕ್ತರಿಗೆ ಯೋಗ ತರಬೇತಿ ನೀಡಿದರು.</p>.<p>ಗಣೇಶ ನಮನ ನಡಿಗೆ, ಪ್ರಾಣ ಚೈತನ್ಯಕ್ರಿಯೆ, ಯೋಗನಡಿಗೆ ಪೈ ಸೂತ್ರ, ಕರ್ಣ ಚೈತನ್ಯ ಮಾಲಾಕ್ರಿಯೆ, ವಿಠ್ಠಲಭಾತಿ, ಪ್ರಾಣಾಯಾಮ, ಸಂಹಿತಾಧ್ಯಾನ, ಯೋಗನಿದ್ರೆ ಸೇರಿದಂತೆ ವಿವಿದ ತಂತ್ರಗಳನ್ನು ಪಾಲನೆ ಮಾಡಿದರು.</p>.<p>ಮಠದ ವ್ಯವಸ್ಥಾಪನ ಸಮಿತಿಯ ದಿನೇಶ ಪೈ, ಪ್ರದೀಪ ಪೈ, ರಾಜೇಶ ನಾಯಕ ಭಟ್ಕಳ, ಡಾ.ಕಾಶಿನಾಥ ಪೈ ಗಂಗೊಳ್ಳಿ, ಇತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>