ಹೊಸಪೇಟೆ (ವಿಜಯನಗರ): ವಿಶ್ವಪ್ರಸಿದ್ಧ ಹಂಪಿ ಕೃಷ್ಣ ಬಜಾರ ಸಮೀಪದ ಬಾಳೆ ತೋಟದಲ್ಲಿ ಶನಿವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ.
ತೋಟಕ್ಕೆ ಹೊಂದಿಕೊಂಡಂತೆ ಕುರುಚಲು ಕಾಡು ಇದೆ. ಇಡೀ ಪರಿಸರ ಒಣಗಿ ಹೋಗಿತ್ತು. ಅದರಿಂದ ತೋಟಕ್ಕೆ ಬೆಂಕಿ ಆವರಿಸಿಕೊಂಡಿದೆ. ಬೆಂಕಿ ಕಂಡು ಸ್ಥಳೀಯರೇ ನೀರು ಎರಚಿ ನಂದಿಸಿದರು. ಇದರಿಂದಾಗಿ ತೋಟದ ಇತರೆ ಭಾಗಕ್ಕೆ ಬೆಂಕಿ ವ್ಯಾಪಿಸಿಕೊಳ್ಳಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.