<p><strong>ಕೊಟ್ಟೂರು:</strong> ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ ಗೋಪುರಕ್ಕೆ ನೂತನವಾಗಿ ಸಿದ್ಧಗೊಂಡಿರುವ 9.6 ಅಡಿ ಎತ್ತರದ ತಾಮ್ರದ ಕಳಸಕ್ಕೆ ಬಂಗಾರದ ಲೇಪನ ಮಾಡಿಸಿ ನಂತರ ಕಳಸಾರೋಹಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.</p>.<p>ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ಮಾತನಾಡಿದ ಅವರು, ‘ಶೀಘ್ರದಲ್ಲಿಯೇ ಭಕ್ತರಿಂದ 1 ಕೆ.ಜಿ. ಬಂಗಾರ ಸಂಗ್ರಹಿಸಿ ಕಳಸದ ಲೇಪನ ಮಾಡಿಸಲು ಸಿದ್ಧತೆ ಕೈಗೊಳ್ಳಲಾಗುವುದು’ ಎಂದರು.</p>.<p>ನಂತರ ತಾಲ್ಲೂಕಿನ ಚಿರಿಬಿ ಗ್ರಾಮದ ಹೊರವಲಯದಲ್ಲಿರುವ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವನ್ನು ಹದ್ದುಬಸ್ತು ಮಾಡಿ, ಬರುವ ಭಕ್ತರಿಗೆ ಮೂಲ ಸೌಕರ್ಯ ಹಾಗೂ ಅಮಾವಾಸ್ಯೆಯಂದು ಪ್ರಸಾದ ವ್ಯವಸ್ಥೆ ಕಲ್ಪಿಸುವಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಅವರಿಗೆ ಸೂಚಿಸಿದರು.</p>.<p>‘ಮೂಗಬಸವೇಶ್ವರ ದೇವಸ್ಥಾನವು ಧಾರ್ಮಿಕ ಇಲಾಖೆಯ ಅಧೀನದಲ್ಲಿರುವುದರಿಂದ ರಥೋತ್ಸವದ ಬಗ್ಗೆ ರಾಂಪುರ ಹಾಗೂ ಚಿರಿಬಿ ಗ್ರಾಮಸ್ಥರು ಹಸ್ತಕ್ಷೇಪ ಮಾಡುವಂತಿಲ್ಲ’ ಎಂದರು.</p>.<p>ಎರಡು ಗ್ರಾಮಸ್ಥರು ಸಹಕರಿಸಿದರೆ ಈ ವರ್ಷ ರಥೋತ್ಸವ ಜರುಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.</p>.<p>ಮುಖಂಡರಾದ ಬಿ.ಸಿ. ಮೂಗಪ್ಪ, ಎಂ.ಎಂ.ಜೆ. ಮೂಗಣ್ಣ, ಎಂ.ಎಂ.ಜೆ. ಸ್ವತಂತ್ರ, ಚಿರಿಬಿ ವೀರಯ್ಯ, ಗಂಗಾಧರ್, ನಾಗಭೂಷಣ್, ಅಂಗಡಿ ಮಂಜುನಾಥ್, ರಾಂಪುರ ಭರಮಪ್ಪ, ಬಸವನಗೌಡ, ಮದ್ಯಾನಪ್ಪ, ನಾಗಭೂಷಣ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಟ್ಟೂರು:</strong> ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ ಗೋಪುರಕ್ಕೆ ನೂತನವಾಗಿ ಸಿದ್ಧಗೊಂಡಿರುವ 9.6 ಅಡಿ ಎತ್ತರದ ತಾಮ್ರದ ಕಳಸಕ್ಕೆ ಬಂಗಾರದ ಲೇಪನ ಮಾಡಿಸಿ ನಂತರ ಕಳಸಾರೋಹಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.</p>.<p>ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ಮಾತನಾಡಿದ ಅವರು, ‘ಶೀಘ್ರದಲ್ಲಿಯೇ ಭಕ್ತರಿಂದ 1 ಕೆ.ಜಿ. ಬಂಗಾರ ಸಂಗ್ರಹಿಸಿ ಕಳಸದ ಲೇಪನ ಮಾಡಿಸಲು ಸಿದ್ಧತೆ ಕೈಗೊಳ್ಳಲಾಗುವುದು’ ಎಂದರು.</p>.<p>ನಂತರ ತಾಲ್ಲೂಕಿನ ಚಿರಿಬಿ ಗ್ರಾಮದ ಹೊರವಲಯದಲ್ಲಿರುವ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವನ್ನು ಹದ್ದುಬಸ್ತು ಮಾಡಿ, ಬರುವ ಭಕ್ತರಿಗೆ ಮೂಲ ಸೌಕರ್ಯ ಹಾಗೂ ಅಮಾವಾಸ್ಯೆಯಂದು ಪ್ರಸಾದ ವ್ಯವಸ್ಥೆ ಕಲ್ಪಿಸುವಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಅವರಿಗೆ ಸೂಚಿಸಿದರು.</p>.<p>‘ಮೂಗಬಸವೇಶ್ವರ ದೇವಸ್ಥಾನವು ಧಾರ್ಮಿಕ ಇಲಾಖೆಯ ಅಧೀನದಲ್ಲಿರುವುದರಿಂದ ರಥೋತ್ಸವದ ಬಗ್ಗೆ ರಾಂಪುರ ಹಾಗೂ ಚಿರಿಬಿ ಗ್ರಾಮಸ್ಥರು ಹಸ್ತಕ್ಷೇಪ ಮಾಡುವಂತಿಲ್ಲ’ ಎಂದರು.</p>.<p>ಎರಡು ಗ್ರಾಮಸ್ಥರು ಸಹಕರಿಸಿದರೆ ಈ ವರ್ಷ ರಥೋತ್ಸವ ಜರುಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.</p>.<p>ಮುಖಂಡರಾದ ಬಿ.ಸಿ. ಮೂಗಪ್ಪ, ಎಂ.ಎಂ.ಜೆ. ಮೂಗಣ್ಣ, ಎಂ.ಎಂ.ಜೆ. ಸ್ವತಂತ್ರ, ಚಿರಿಬಿ ವೀರಯ್ಯ, ಗಂಗಾಧರ್, ನಾಗಭೂಷಣ್, ಅಂಗಡಿ ಮಂಜುನಾಥ್, ರಾಂಪುರ ಭರಮಪ್ಪ, ಬಸವನಗೌಡ, ಮದ್ಯಾನಪ್ಪ, ನಾಗಭೂಷಣ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>