ಎತ್ತುಗಳಿಗೆ ಬಾಧಿಸಿದ ಉಣ್ಣೆ ನಿಯಂತ್ರಿಸಲು ಚುಚ್ಚುಮದ್ದು ನೀಡಲಾಗಿತ್ತು. ಗ್ರಾಮದ ರೈತ ಶಿವಕುಮಾರ್ ಎನ್ನುವವರು ತಮ್ಮ ಎತ್ತುಗಳಿಗಾಗಿ ಪಟ್ಟಣದ ಖಾಸಗಿ ಔಷಧ ಅಂಗಡಿಯಲ್ಲಿ ಚುಚ್ಚುಮದ್ದು ಖರೀದಿಸಿದ್ದರು. ಬಾಚಿಗೊಂಡನಹಳ್ಳಿ ಸರ್ಕಾರಿ ಪಶು ಆಸ್ಪತ್ರೆ ವೈದ್ಯರು ಎರಡು ಎತ್ತುಗಳಿಗೆ ಚುಚ್ಚುಮದ್ದು ನೀಡಿದ್ದರು. ಇದಾಗಿ ಕೇವಲ 10 ನಿಮಿಷದಲ್ಲಿ ಎತ್ತುಗಳು ಸಾವನ್ನಪ್ಪಿವೆ. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.