ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮೈಲಾರ: ಆದಾಯ ಜೋರು, ಸಮಸ್ಯೆ ನೂರಾರು

Published : 23 ಡಿಸೆಂಬರ್ 2024, 7:03 IST
Last Updated : 23 ಡಿಸೆಂಬರ್ 2024, 7:03 IST
ಫಾಲೋ ಮಾಡಿ
Comments
ಮೈಲಾರಲಿಂಗೇಶ್ವರ ಸ್ವಾಮಿ ದರ್ಶನಕ್ಕೆ ಭಕ್ತರ ನೂಕುನುಗ್ಗಲು
ಮೈಲಾರಲಿಂಗೇಶ್ವರ ಸ್ವಾಮಿ ದರ್ಶನಕ್ಕೆ ಭಕ್ತರ ನೂಕುನುಗ್ಗಲು
ದೇವಸ್ಥಾನ ಮುಂಭಾಗ ಇಕ್ಕಟ್ಟಾದ ರಸ್ತೆಯಲ್ಲೇ ವ್ಯಾಪಾರ ಚಟುವಟಿಕೆ
ದೇವಸ್ಥಾನ ಮುಂಭಾಗ ಇಕ್ಕಟ್ಟಾದ ರಸ್ತೆಯಲ್ಲೇ ವ್ಯಾಪಾರ ಚಟುವಟಿಕೆ
ಮೈಲಾರ ಸುಕ್ಷೇತ್ರದಲ್ಲಿ ಪಾರ್ಕಿಂಗ್ ಅವ್ಯವಸ್ಥೆ
ಮೈಲಾರ ಸುಕ್ಷೇತ್ರದಲ್ಲಿ ಪಾರ್ಕಿಂಗ್ ಅವ್ಯವಸ್ಥೆ
ಮೈಲಾರದಲ್ಲಿ ವಾಹನ ಪಾರ್ಕಿಂಗ್ ನೈರ್ಮಲ್ಯ ಸಮಸ್ಯೆಯಿಂದ ಸ್ಥಳೀಯರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇಲ್ಲಿನ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ಯೋಜನೆ ರೂಪಿಸಬೇಕು
ಎಂ.ಬಿ. ಕೋರಿ ಮೈಲಾರ ನಿವಾಸಿ
ಐತಿಹಾಸಿಕ ಸುಕ್ಷೇತ್ರವನ್ನು ಸರ್ಕಾರ ನಿರ್ಲಕ್ಷಿಸಿರುವುದು ಸರಿಯಲ್ಲ. ಅಭಿವೃದ್ಧಿ ಪ್ರಾಧಿಕಾರ ರಚಿಸಿ ಪ್ರತಿವರ್ಷವೂ ಬಜೆಟ್ ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು. ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಬೇಕು
ಈಟಿ ಲಿಂಗರಾಜ ಭಕ್ತರು ಹೂವಿನಹಡಗಲಿ
ಮೈಲಾರಲಿಂಗನ ಪರಂಪರೆ ವಿಶಿಷ್ಟವಾಗಿದೆ. ಈ ಸುಕ್ಷೇತ್ರವನ್ನು ಸರ್ಕಾರ ಮಾದರಿಯಾಗಿ ಅಭಿವೃದ್ಧಿಪಡಿಸದೇ ಜಾತ್ರೆ ಆಚರಣೆಗೆ ಸೀಮಿತವಾಗಿದೆ. ದಿನಂಪ್ರತಿ ಬರುವ ಭಕ್ತರಿಗೆ ಅನಾನುಕೂಲವಾಗಿದೆ
ಪುಟ್ಟಪ್ಪ ತಂಬೂರಿ ಮೈಲಾರ ನಿವಾಸಿ
ಘೋಷಣೆಗೆ ಸೀಮಿತವಾದ ‘ಪ್ರಾಧಿಕಾರ’
2017ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದ ಮೈಲಾರಲಿಂಗೇಶ್ವರ ಹಾಗೂ ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರ ಬರೀ ಘೋಷಣೆಗೆ ಸೀಮಿತವಾದಂತಾಗಿದೆ. ಕೆಲವರು ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ಪ್ರಕ್ರಿಯೆಗೆ ತಡೆ ಬಿದ್ದಿದೆ. ಉತ್ತರ ಕರ್ನಾಟದ ಕಾಗಿನೆಲೆ ಸವದತ್ತಿ ಹುಲಿಗೆ ಸುಕ್ಷೇತ್ರಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ ಅಭಿವೃದ್ಧಿಗೆ ಒತ್ತು ನೀಡಿರುವ ಸರ್ಕಾರ ಮೈಲಾರ ಕ್ಷೇತ್ರವನ್ನು ನಿರ್ಲಕ್ಷಿಸಿದೆ ಎಂಬ ಮಾತು ಕೇಳಿ ಬರುತ್ತಿದೆ. ಮೈಲಾರ ಮತ್ತು ದೇವರಗುಡ್ಡ ಪ್ರತ್ಯೇಕ ಜಿಲ್ಲೆಗಳ ದೇಗುಲಗಳಾಗಿರುವುದರಿಂದ ಈ ಪ್ರಸ್ತಾವ ಕೈ ಬಿಟ್ಟು ಮೈಲಾರ-ಕುರುವತ್ತಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂಬುದು ಭಕ್ತರ ಒತ್ತಾಸೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT