<p><strong>ಹೊಸಪೇಟೆ (ವಿಜಯನಗರ):</strong> ‘ಹಿಂದುಳಿದ ವರ್ಗದವರ ಚಾಂಪಿಯನ್’ ಎಂದು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದಿಗರ ವಿಶ್ವಾಸವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಅದರ ಪರಿಣಾಮವನ್ನು ಅವರು ಮುಂದೆ ಎದುರಿಸಬೇಕಾಗುತ್ತದೆ’ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.</p>.<p>ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಳಮೀಸಲಾತಿಗಾಗಿ ಹೋರಾಡಿದ್ದು ಮಾದಿಗರು ಮತ್ತು ಅದರ ಉಪಪಂಗಡದವರು ಮಾತ್ರ. ನಿಜವಾಗಿಯೂ ಹೆಚ್ಚು ಅನ್ಯಾಯವಾಗಿರುವ ಕಾರಣಕ್ಕೇ ನಾವು ಹೋರಾಡಿದ್ದೇವೆ. ಇನ್ನಷ್ಟು ವಿಳಂಬ ತಂತ್ರವನ್ನು ಸಹಿಸಲು ಸಾಧ್ಯವಿಲ್ಲ ಎಂದರು.</p>.<p>‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸದೆ ಐದು ವರ್ಷವಾಗುತ್ತ ಬಂತು. ಮೀಸಲಾತಿ ನೆಪವೇ ಇದಕ್ಕೆ ಕಾರಣ. ನೀವು ಏನು ಬೇಕಾದರೂ ಮಾಡಿಕೊಳ್ಳಿ, ಮಾದಿಗರಿಗೆ ತಕ್ಷಣ ಶೇ 6ರಷ್ಟು ಒಳಮೀಸಲಾತಿ ಕೊಡಿ, ಈ ಮೀಸಲಾತಿ ದೊರೆತರೆ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವೂ ಉಚಿತವಾಗಿ ಲಭಿಸುವಂತಾಗುತ್ತದೆ’ ಎಂದರು.</p>.<p>ಮುಖಂಡರಾದ ಎಂ.ಸಿ.ವೀರಸ್ವಾಮಿ, ಬಲ್ಲಾಹುಣ್ಸಿ ರಾಮಣ್ಣ, ಶೇಷು, ಸಿ.ಆರ್.ಭರತ್ಕುಮಾರ್, ಪೂಜಪ್ಪ, ಮಂಜುನಾಥ, ಬಸವರಾಜ, ಎಸ್.ಸೆಲ್ವಂ, ಶ್ರೀನಿವಾಸ, ಶೇಕ್ಷಾವಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ‘ಹಿಂದುಳಿದ ವರ್ಗದವರ ಚಾಂಪಿಯನ್’ ಎಂದು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದಿಗರ ವಿಶ್ವಾಸವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಅದರ ಪರಿಣಾಮವನ್ನು ಅವರು ಮುಂದೆ ಎದುರಿಸಬೇಕಾಗುತ್ತದೆ’ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.</p>.<p>ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಳಮೀಸಲಾತಿಗಾಗಿ ಹೋರಾಡಿದ್ದು ಮಾದಿಗರು ಮತ್ತು ಅದರ ಉಪಪಂಗಡದವರು ಮಾತ್ರ. ನಿಜವಾಗಿಯೂ ಹೆಚ್ಚು ಅನ್ಯಾಯವಾಗಿರುವ ಕಾರಣಕ್ಕೇ ನಾವು ಹೋರಾಡಿದ್ದೇವೆ. ಇನ್ನಷ್ಟು ವಿಳಂಬ ತಂತ್ರವನ್ನು ಸಹಿಸಲು ಸಾಧ್ಯವಿಲ್ಲ ಎಂದರು.</p>.<p>‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸದೆ ಐದು ವರ್ಷವಾಗುತ್ತ ಬಂತು. ಮೀಸಲಾತಿ ನೆಪವೇ ಇದಕ್ಕೆ ಕಾರಣ. ನೀವು ಏನು ಬೇಕಾದರೂ ಮಾಡಿಕೊಳ್ಳಿ, ಮಾದಿಗರಿಗೆ ತಕ್ಷಣ ಶೇ 6ರಷ್ಟು ಒಳಮೀಸಲಾತಿ ಕೊಡಿ, ಈ ಮೀಸಲಾತಿ ದೊರೆತರೆ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವೂ ಉಚಿತವಾಗಿ ಲಭಿಸುವಂತಾಗುತ್ತದೆ’ ಎಂದರು.</p>.<p>ಮುಖಂಡರಾದ ಎಂ.ಸಿ.ವೀರಸ್ವಾಮಿ, ಬಲ್ಲಾಹುಣ್ಸಿ ರಾಮಣ್ಣ, ಶೇಷು, ಸಿ.ಆರ್.ಭರತ್ಕುಮಾರ್, ಪೂಜಪ್ಪ, ಮಂಜುನಾಥ, ಬಸವರಾಜ, ಎಸ್.ಸೆಲ್ವಂ, ಶ್ರೀನಿವಾಸ, ಶೇಕ್ಷಾವಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>