Photos| ವಿಜಯನಗರದಲ್ಲಿ 'ಮಾಂಡೂಸ್' ಚಂಡಮಾರುತದ ಪ್ರಭಾವ: ಜಡಿ ಮಳೆಗೆ ಜನಜೀವನ ಅಸ್ತವ್ಯಸ್ತ
ಹೊಸಪೇಟೆ (ವಿಜಯನಗರ): ಬಂಗಾಳ ಕೊಲ್ಲಿಗೆ 'ಮಾಂಡೂಸ್' ಚಂಡಮಾರುತ ಅಪ್ಪಳಿಸಿದ್ದು ಅದರ ಪ್ರಭಾವ ಶನಿವಾರ ಜಿಲ್ಲೆಯಲ್ಲೂ ಕಂಡು ಬಂತು.ಶನಿವಾರ ದಿನವಿಡೀ ದಟ್ಟ ಮಂಜು ಆವರಿಸಿಕೊಂಡಿತು. ಸಂಜೆಯಿಂದ ಜಿಟಿಜಿಟಿ ಮಳೆ ಆಗಿರುವುದರಿಂದ ವಾತಾವರಣ ಸಂಪೂರ್ಣ ತಂಪಾಗಿದೆ. ದಟ್ಟ ಮಂಜು, ಮಳೆಗೆ ಚಳಿ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ಜಿಲ್ಲೆಯ ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರು, ಕೂಡ್ಲಿಗಿಯ ಕೆಲವು ಭಾಗಗಳಲ್ಲಿ ಮಳೆಯಾಗಿದೆ.ಪ್ರಜಾವಾಣಿ ಚಿತ್ರಗಳು: ಲವ