ಗುರುವಾರ, 30 ಅಕ್ಟೋಬರ್ 2025
×
ADVERTISEMENT
ADVERTISEMENT

ಪ್ರಯಾಣಿಸದೆ ಊರು ತಲುಪುವಂತಿದೆ ಶಿಕ್ಷಣ: ಒ.ಎಲ್. ನಾಗಭೂಷಣಸ್ವಾಮಿ ವಿಷಾದ

Published : 29 ಅಕ್ಟೋಬರ್ 2025, 5:42 IST
Last Updated : 29 ಅಕ್ಟೋಬರ್ 2025, 5:42 IST
ಫಾಲೋ ಮಾಡಿ
Comments
ಪ್ರಾಧ್ಯಾಪಕರ ನೇಮಕದ ಬಗ್ಗೆ ಎರಡು ವರ್ಷಗಳಿಂದ ಸರ್ಕಾರಕ್ಕೆ ಮೇಲಿಂದ ಮೇಲೆ ಮನವಿ ಮಾಡಿದರೂ ಯಾವ ಪ್ರಯೋಜನ ಆಗಿಲ್ಲ. ಹೀಗಾಗಿ ವಿಶ್ವವಿದ್ಯಾಲಯಕ್ಕೆ ಮುಂದಿನ ದಿನಗಳಲ್ಲಿ ಬಹಳಷ್ಟು ಅಪಾಯ ಇದೆ
ಪ್ರೊ.ಡಿ.ವಿ.ಪರಮಶಿವಮೂರ್ತಿ ಕುಲಪತಿ
ಭಾಷಾಂತರ ಅಧ್ಯಯನ ವಿಭಾಗ ಅನಾಥ
ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾಷಾಂತರ ಅಧ್ಯಯನ ವಿಭಾಗವು ಇಂದು ಅನಾಥವಾಗುತ್ತಿರುವುದು ನೋವಿನ ವಿಚಾರ. ಸರ್ಕಾರದ ನೀತಿ ನಿಯಮಗಳಿಂದ ಕಸ ಹೊಡೆಯಲು ಸಹ ಕೆಲಸದವರನ್ನು ನೇಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕನ್ನಡ ವಿಶ್ವವಿದ್ಯಾಲಯ ಈಗ ಸಂಶೋಧನೆಗೆ ಮಾತ್ರ ಸೀಮಿತವಾಗಿದೆ. ಇಲ್ಲಿ ಒಮ್ಮೆ 71 ಅಧ್ಯಾಪಕರು ಇದ್ದರು ಈಗ 37 ಜನ ಮಾತ್ರ ಉಳಿದಿದ್ದಾರೆ. ಉಳಿದವರು ನಿವೃತ್ತಿಯಾಗಿದ್ದು ಅತಿಥಿ ಉಪನ್ಯಾಸಕರ ನೇಮಕದ ಅವಕಾಶವಿಲ್ಲ ಎಂದರು. ‘ಆರ್ಥಿಕ ಸಂಕಷ್ಟದಲ್ಲಿದ್ದರೂ ಕೂಡ ಇಂತಹ ಸಾಂಸ್ಕೃತಿಕ ಮತ್ತು ಬೌದ್ಧಿಕ ಕಾರ್ಯಕ್ರಮಗಳು ವಿಶ್ವವಿದ್ಯಾಲಯಕ್ಕೆ ನೆಮ್ಮದಿ ತರುತ್ತಿವೆ. ಕನ್ನಡ ಮನಸುಗಳು ಒಟ್ಟಾಗಿ ಸೇರಿ ಕನ್ನಡ ವಿಶ್ವವಿದ್ಯಾಲಯದ ಏಳಿಗೆಗಾಗಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು’ ಎಂದು ವಿನಂತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT