- ಜನ ವಾಹನಗಳ ಸಂಚಾರಕ್ಕೆ ಅಡಚಣೆ ಆಗದಂತೆ ನಗರದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶ. ₹23 ಕೋಟಿ ವೆಚ್ಚದಲ್ಲಿ ಆ ಕೆಲಸ ಆಗುತ್ತಿದೆ
ಎಚ್.ಆರ್.ಗವಿಯಪ್ಪ ಶಾಸಕ
ಮರುಡಾಂಬರೀಕರಣದ ಬಳಿಕ ಎಲ್ಲೆಲ್ಲೆ ರಸ್ತೆ ಉಬ್ಬುಗಳಿದ್ದವೋ ಅಲ್ಲೆಲ್ಲ ಅವುಗಳನ್ನು ಮರು ನಿರ್ಮಿಸಲಾಗುವುದು. ಶಾಸಕರ ಸೂಚನೆಯಂತೆ ಈ ಎಲ್ಲ ಕಾಮಗಾರಿ ನಡೆಯುತ್ತಿದೆ. ವಾರದೊಳಗೆ ಪೂರ್ಣವಾಗಲಿದೆ.