ಮನೆ, ಗುಡಿಸಲು, ವಠಾರ, ಬಹುಮಹಡಿ ಕಟ್ಟಡ, ಉದ್ಯಾನ, ಅಕ್ಕಿ ಗಿರಣಿ, ಉಗ್ರಾಣ ಹೀಗೆ ಎಲ್ಲೇ ಹಾವುಗಳು ಬಂದಿವೆ ಎಂದು ಸುದ್ದಿ ಕಿವಿಗೆ ಬಿದ್ದರೆ ತಕ್ಷಣವೇ ಅಲ್ಲಿಗೆ ಹೋಗಿ ರಕ್ಷಿಸುತ್ತಾರೆ.
‘ಹಾವು ಬಂದರೆ ಭಯಪಡಬೇಡಿ. ಅವುಗಳಿಗೂ ನಮ್ಮಂತೆಯೇ ಜೀವ ಭಯ ಇರುತ್ತದೆ. ಗಾಬರಿಯಲ್ಲಿ ಅವುಗಳನ್ನು ಸಾಯಿಸುವುದು ತಪ್ಪು’ ಎಂಬ ಉಪದೇಶವೂ ನೀಡಿ, ತಿಳಿವಳಿಕೆ ಮೂಡಿಸುತ್ತಾರೆ.