‘ಸರ್ಕಾರವು ಬೀದಿ ಬದಿ ವ್ಯಾಪಾರಿಗಳು, ಆಟೊ, ಕ್ಯಾಬ್ ಚಾಲಕರಿಗೆ ಆರ್ಥಿಕ ನೆರವು ನೀಡಿದೆ. ಆದರೆ, ಅವರಿಗೆ ರಾಜ್ಯದಲ್ಲಿರುವ ನೂರಾರು ಗೈಡ್ಗಳೇಕೆ ಕಾಣಿಸುತ್ತಿಲ್ಲ? ಪ್ರವಾಸೋದ್ಯಮ ಬೆಳವಣಿಗೆಯಲ್ಲಿ ಗೈಡ್ಗಳ ಪಾತ್ರವೂ ಮುಖ್ಯ. ಆದರೆ, ಸರ್ಕಾರ ನಮ್ಮನ್ನು ಪರಿಗಣಿಸಿಯೇ ಇಲ್ಲ’ ಎಂದು ಗೈಡ್ ಹುಸೇನ್ ಅಳಲು ತೋಡಿಕೊಂಡಿದ್ದಾರೆ.