‘ವೇಣುಗೋಪಾಲ ದೇವಸ್ಥಾನ ಜೀರ್ಣೊದ್ಧಾರ ಮಾಡಬೇಕು ಎನ್ನುವುದು ನಮ್ಮ ತಂದೆಯವರ ಮಹದಾಸೆ ಆಗಿತ್ತು. ಅದರ ಅಭಿವೃದ್ಧಿ ಕಾರ್ಯ ನಡೆಯುತ್ತಿರುವಾಗಲೇ ನಮ್ಮ ತಂದೆ ಅಕಾಲಿಕವಾಗಿ ನಿಧನರಾದರು. ಅವರು ಅಂದುಕೊಂಡಂತೆ ಇದನ್ನು ಅಭಿವೃದ್ಧಿಪಡಿಸಲಾಗುವುದು. ಮೂರು ದಿನ ನಿರಂತರವಾಗಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಜರುಗಲಿವೆ. ಆ. 11ರಂದು ನವಗ್ರಹ, ವೆಂಕಟರಮಣ, ರಾಮ– ಲಕ್ಷ್ಮಣ, ಸೀತೆ ಕಾರ್ತಿಕ, ಶಿವ, ಪಾರ್ವತಿ ವಿಗ್ರಹ ಪ್ರತಿಷ್ಠಾಪಿಸಲಾಗುವುದು’ ಎಂದು ಹೇಳಿದರು.