ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ | ಜಿಲ್ಲೆಯಾದ್ಯಂತ ಸಂಚರಿಸಲಿದೆ ಸಂವಿಧಾನ ಜಾಗೃತಿ ಸ್ತಬ್ಧಚಿತ್ರ

ವಿಜಯಪುರ, ಇಂಡಿ ಉಪವಿಭಾಗಗಳಿಂದ 27 ದಿನಗಳ ಕಾಲ ವಾಹನ ಸಂಚಾರ
Published 20 ಜನವರಿ 2024, 16:29 IST
Last Updated 20 ಜನವರಿ 2024, 16:29 IST
ಅಕ್ಷರ ಗಾತ್ರ

ವಿಜಯಪುರ: ಸಂವಿಧಾನ ದಿನಾಚರಣೆ ಅಂಗವಾಗಿ ಜ.26 ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಂವಿಧಾನ ಜಾಗೃತಿ ಜಾಥಾದ ಸ್ತಬ್ಧ ಚಿತ್ರ ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್‌ ತಿಳಿಸಿದ್ದಾರೆ. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಾದ್ಯಂತ ಸಂಚರಿಸಲಿರುವ ಸ್ತಬ್ಧಚಿತ್ರ ವಾಹನಕ್ಕೆ ಮಾರ್ಗನಕ್ಷೆ (ರೂಟ್ ಮ್ಯಾಪ್) ಸಿದ್ಧಪಡಿಸಲಾಗಿದ್ದು, ವಾಹನ ಸಂಚರಿಸಲು ಜಿಲ್ಲೆಯ ಎಲ್ಲ ಅಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಾದ್ಯಂತ ಇಂಡಿ ಹಾಗೂ ವಿಜಯಪುರ ವಿಭಾಗದಿಂದ ಎರಡು ಸ್ತಬ್ಧಚಿತ್ರಗಳು 27 ದಿನಗಳ ಕಾಲ ಸಂಚರಿಸಲಿವೆ. ಜಿಲ್ಲೆಯ 13 ತಾಲ್ಲೂಕಿನ 211 ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ, ಪುರಸಭೆ ವ್ಯಾಪ್ತಿಗಳಲ್ಲಿ ಸ್ತಬ್ಧಚಿತ್ರ ಸಂಚರಿಸಲಿವೆ. ಸ್ತಬ್ಧಚಿತ್ರ ವಾಹನಕ್ಕೆ ಸಂಭ್ರಮದಿಂದ ಸ್ವಾಗತ ಕೋರಿ ಎಂದರು.

ವಾಹನ ತಂಗಲಿರುವ ಸ್ಥಳದಲ್ಲಿ ಗ್ರಾ.ಪಂ ಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಾಲಾ ಮಕ್ಕಳಿಗೆ ಸಂವಿಧಾನಕ್ಕೆ ಸಂಬಂಧಿಸಿದ ಕ್ವಿಜ್, ಚಿತ್ರಕಲೆ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಸ್ಥಳಿಯ ಸಾಹಿತಿ, ಉಪನ್ಯಾಸಕರು, ತಜ್ಞರಿಂದ ಸಂವಿಧಾನ ಕುರಿತು ಉಪನ್ಯಾಸ, ಸ್ಥಳೀಯ ಕಲಾವಿದರಿಂದ ವಿವಿಧ ಕಲೆಗಳ ಪ್ರದರ್ಶನ ಹಮ್ಮಿಕೊಳ್ಳಬೇಕು. ಸ್ತಬ್ಧಚಿತ್ರ ವಾಹನ ಸಂಚಾರಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಕೈಗೊಳ್ಳಬೇಕು. ತಹಶೀಲ್ದಾರ್‌ರು ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ, ರಾಜಶೇಖರ ಡಂಬಳ, ಇಂಡಿ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ, ವಿನಯಕುಮಾರ ಪಾಟೀಲ, ಪುಂಡಲಿಕ ಮಾನವರ, ಈರಣ್ಣ ಆಶಾಪೂರ, ನಿಂಗಪ್ಪ ಗೋಠೆ, ವಿಜಯಪುರ ತಹಶೀಲ್ದಾರ್‌ ಕವಿತಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. 

ವಿಜಯಪುರ ಉಪವಿಭಾಗದಿಂದ ಸಂಚರಿಸಲಿರುವ ಮಾರ್ಗ

ವಿಜಯಪುರ ನಗರದಿಂದ ಆರಂಭಗೊಂಡು ಐನಾಪುರ ಮದಭಾವಿ ಹೊನ್ನುಟಗಿ ಹೆಗಡಿಹಾಳ ಕುಮಟಗಿ ಹಡಗಲಿ ಶಿವಣಗಿ ಆಹೇರಿ ಜಂಬಗಿ ನಾಗಠಾಣ ಅಲಿಯಾಬಾದ ಗುಣಕಿ ತಿಡಗುಂದಿ ಮಖಣಾಪುರ ಕನ್ನೂರ ಹಿಟ್ನಳ್ಳಿ ಜುಮನಾಳ ತೊರವಿ ಬರಟಗಿ ಜಾಲಗೇರಿ ಲೋಹಗಾಂವ ಸಿದ್ದಾಪುರದ ಟಕ್ಕಳಕಿ ಘೋಣಸಗಿ ಕನಮಡಿ ಬಿಜ್ಜರಗಿ ಬಾಬಾನಗರ ಹೊನವಾಡ ಕೊಟ್ಯಾಳ ತಲುಪಲಿದೆ. ನಂತರ ತಿಕೋಟಾ ಹೊನಗನಹಳ್ಳಿ ಕಾರಜೋಳ ಕಾಖಂಡಕಿ ಬಬಲೇಶ್ವರ ನಿಡೋಣಿ ಕುಮಠೆ ಅರ್ಜುಣಗಿ ಹಲಗಣಿ ಕಂಬಾಗಿ ಬೋಳಚಿಕ್ಕಲಕಿ ಗುಣದಾಳ ಹೋಸೂರ ದೇವರಗೆನ್ನೂರ ಜೈನಾಪುರ ಮಮದಾಪುರ ಸಾರವಾಡ ಮುಳವಾಡ ತಳೇವಾಡ ಮಸೂತಿ ಮಲಘಾಣ ರೋಣಿಹಾಳ ಕೊಲ್ಹಾರ ಹಣಮಾಪುರ ಸಿದ್ದನಾಥ ಆರ್.ಸಿ. ಅರಷಣಗಿ ತೆಲಗಿ ಕೂಡಗಿ ಮುತ್ತಗಿ ಯರನಾಳ ಮನಗೂಳಿ ಉಕ್ಕಲಿ ಡೋಣೂರ ಮಸಬಿನಾಳ ಬಸವನಬಾಗೇವಾಡಿ ಇಂಗಳೇಶ್ವರ ದಿಂಡವಾರ ವಡವಡಗಿ ಕೆ.ಸಾಲವಾಡಗಿ ಬ್ಯಾಕೋಡ ಹೂವಿನಹಿಪ್ಪರಗಿ ಹುಣಶ್ಯಾಳ ಪಿಬಿ ನರಸಲಗಿ ಮಣೂರ ಕಣಕಾಳ ರೂಡಗಿ ಬಸರಕೋಡ ಢವಳಗಿ ಮಡಿಕೇಶ್ವರ ಹಾಗೂ ಇಂಗಳಗೇರಿ ಗ್ರಾಮಗಳಲ್ಲಿ ಸಂಚರಿಸಲಿದೆ.

ಇಂಡಿ ಉಪವಿಭಾಗದಿಂದ ಸಂಚರಿಸಲಿರುವ ಮಾರ್ಗ

ಇಂಡಿಯಿಂದ ಪ್ರಾರಂಭವಾಗಿ ಚಿಕ್ಕಬೇವನೂರ ಅಂಜುಟಗಿ ಬಳ್ಳೊಳ್ಳಿ ಝಳಕಿ ಹಲಸಂಗಿ ಧೂಳಖೇಡ ಲೋಣಿ ಕೆರೂರ ಹತ್ತಳ್ಳಿ ಉಮರಜ ರೇವತಗಾಂವ ನಿವರಗಿ ಚಡಚಣ ಬರಡೋಲ ದೇವರನಿಂಬರಗಿ ಜಿಗಜಿವಣಗಿ ನಂದರಗಿ ಇಂಚಗೇರಿ ಕಪನಿಂಬರಗಿ ಹಡಲಸಂಗ ಕೋಳುರಗಿ ಹೊರ್ತಿ ಬಸನಾಳ ತಾಂಬಾ ಬೆನಕನಹಳ್ಳಿ ಅಥರ್ಗಾ. ತೆನ್ನಿಹಳ್ಳಿ ಶಿರಶ್ಯಾಡ ಸಂಗೋಗಿ ಕುಂಟೋಜಿ ಮುದ್ದೇಬಿಹಾಳ ಬಿದರಕುಂದಿ ಕವಡಿಮಟ್ಟಿ ಹಿರೇಮುರಾಳ ಅಡವಿಸೋಮನಾಳ ನಾಗರಬೆಟ್ಟ ನಾಗರಬೇನಾಳ ಬಿಜ್ಜೂರ ರಕ್ಕಸಗಿ ಆಲೂರ ತಂಗಡಗಿ ಕೋಳೂರ ಹಡಲಗೇರಿ ಯರಝರಿ ಕಾಳಗಿ ಹುಲ್ಲೂರ ಇಟಗಿ ಹೆಬ್ಬಾಳ ಬೀರಲದಿನ್ನಿ ಗೊಳಸಂಗಿ ವಂದಾಲ ಚಿಮ್ಮಲಗಿ ಗಣಿ ಬೇನಾಳ ಆಲಮಟ್ಟಿ ಯಲಗೂರ ಬಳಬಟ್ಟಿ ನಿಡಗುಂದಿ ಮಸಳಿ ಬಿ.ಕೆ. ಅರ್ಜುಣಗಿ ನಾದ ಸಾಲೋಟಗಿ ರೂಗಿ ತಡವಲಗಾ ನಿಂಬಾಳ ಕೆ.ಡಿ. ಹಂಜಗಿ ಚವಡಿಹಾಳ ಬಬಲಾದ ಭತಗುಣಕಿ ಹಿಂಗಣಿ ಅಹಿರಸಂಗ ಲಚ್ಯಾಣ ಪಡನೂರ ಅಗರಖೇಡ ಗುಬ್ಬೇವಾಡ ಹಿರೇಬೇವನೂರ ಆಲೂರ ಇಂಗಳಗಿ ಲಾಲಸಂಗಿ ಖೇಡಗಿ ಮಿರಗಿ ರಾಮನಹಳ್ಳಿ ಬಳಗಾನೂರ ಕೋರಹಳ್ಳಿ ಆಲಮೇಲ ಕಡಣಿ ದೇವಣಗಾಂವ ಬಮ್ಮನಹಳ್ಳಿ ದೇವರನಾವದಗಿ ಮಲಘಾಣ ಕಕ್ಕಳಮೇಲಿ ಬಗಲೂರ ಮೋರಟಗಿ ಗುತ್ತರಗಿ ಗಬಸಾವಳಗಿ ಯರಗಲ್ಲ ಬಿ.ಕೆ. ನಾಗಾವಿ ಬಿ.ಕೆ. ಸುಂಗಠಾಣ ಯಂಕಂಚಿ ಗೊಲಗೇರಿ ಹೊನ್ನಲ್ಳಿ ಹಂದಿಗನೂರ ಗುಬ್ಬೇವಾಡ ಬ್ಯಾಕೋಡ ರಾಂಪೂರ ಪಿಎ ಚಾಂದಕವಠೆ ಹಿಕ್ಕನಗುತ್ತಿ. ಚಟ್ಟರಕಿ ಬಂದಾಳ ಕನ್ನೊಳ್ಳಿ ಕೊಕಟನೂರ ಸಿಂದಗಿ ದೇವರಹಿಪ್ಪರಗಿ ಮುಳಸಾವಳಗಿ ಹಿಟ್ನಳ್ಳಿ ಚಿಕ್ಕರೂಗಿ ಹರನಾಳ ಮಾರ್ಕಬ್ಬಿನಹಳ್ಳಿ ಸಾತಿಹಾಳ ಯಾಳವಾರ ಮಣ್ಣೂರ ಜಾಲವಾದ ಕೊಂಡಗೂಳಿ ಕೆರುಟಗಿ ಯಲಗೋಡ ಹುಣಶ್ಯಾಳ ಕಳಕೇರಿ ಬೆಕಿನಾಳ ಅಸ್ಕಿ ಭಂಟನೂರ ಕೋಡಗಾನೂರ ಬಸಾಲವಾಡಗಿ ತುಂಬಗಿ ಬೊಮ್ಮನಹಳ್ಳಿ ತಾಳಿಕೋಟೆ ಹಿರೂರ ಸಾಸನೂರ ಕೋಣ್ಣೂರ ಮಿಣಜಗಿ ಬಾವೂರ ಹಾಗೂ ಮೂಕಿಹಾಳ ಗ್ರಾಮಗಳಲ್ಲಿ ಸಂಚರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT