<p><strong>ವಿಜಯಪುರ</strong>: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಗುರುವಾರ ಕರ್ನಾಟಕ ರಾಜ್ಯ ಬೀಜ ನಿಗಮದ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಭೇಟಿ ನೀಡಿ, ಬೆಂಬಲ ವ್ಯಕ್ತಪಡಿಸಿದರು.</p>.<p>‘ಸದನದಲ್ಲೇ ಜಿಲ್ಲೆಯ ಶಾಸಕರೊಬ್ಬರು ಪಿಪಿಪಿ ಮಾಡುವುದಾದರೆ ನಾನು ₹500 ಕೋಟಿ ಹೂಡಿಕೆ ಮಾಡುತ್ತೇನೆ ಎಂದಿದ್ದಾರೆ. ಈಗಾಗಲೇ ದುಡ್ಡು ಮಾಡಿಕೊಂಡಿರುವ ಅವರು ಇನ್ನಷ್ಟು ದುಡ್ಡು ಮಾಡಬೇಕೆಂದು ಬಯಸಿದ್ದಾರೆ’ ಎಂದು ವಿಜುಗೌಡ ಪಾಟೀಲ ಆರೋಪಿಸಿದರು.</p>.<p>‘ಈಗಾಗಲೇ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಿದರೆ ಇವರಿಗೇನು ತ್ರಾಸಿದೆ. ಇದು ಸಣ್ಣ ಮಕ್ಕಳಿಗೂ ಅರ್ಥವಾಗುವಂತಹದ್ದು. ಹಿಂದೆಯೇ ಎಚ್.ಡಿ. ಕುಮಾರಸ್ವಾಮಿಯವರು ಬಂದು ವೈದ್ಯಕೀಯ ಕಾಲೇಜಿಗಾಗಿ ಸ್ಥಳ ವೀಕ್ಷಣೆ ಮಾಡಿದಾಗಲೂ ಕೆಲವರು ವಿರೋಧ ವ್ಯಕ್ತಪಡಿಸಿದರು’ ಎಂದರು.</p>.<p>‘ಪ್ರಸ್ತುತ ದಿನಗಳಲ್ಲಿ ಖಾಸಗಿ ಆರೋಗ್ಯ ಸೇವೆಗಳು ತುಂಬಾ ದುಬಾರಿಯಾಗಿವೆ, ಜಿಲ್ಲೆಯ ಅಭಿವೃದ್ಧಿ ಯಾಗಬೇಕಾದರೆ ₹500 ಕೋಟಿ ದೊಡ್ಡದಲ್ಲ ಅದನ್ನು ಸರ್ಕಾರ ಕೊಡಬೇಕು, ಸರ್ಕಾರಿ ಕಾಲೇಜು ಬರುವುದರಿಂದ ಕಡುಬಡವರಿಗೆ ಅನುಕೂಲವಾಗುತ್ತದೆ. ಆದರೆ, ರಾಜಕಾರಣಿಗಳು ತಾವು ಬೆಳೆಯುವುದು, ತಮ್ಮ ಶಿಕ್ಷಣ ಸಂಸ್ಥೆಗಳು ಬೆಳೆಸುವುದನ್ನು ಮಾತ್ರ ನೋಡುತ್ತಿದ್ದಾರೆ’ ಎಂದು ಕಿರಿಕಾರಿದರು.</p>.<p>ಧರಣಿಯಲ್ಲಿ ಮುಖಂಡರಾದ ರವಿಕಾಂತ ಬಗಲಿ, ಉಮೇಶ ವಂದಾಲ, ಪ್ರಕಾಶ ಮಿರ್ಜಿ, ರವೀಂದ್ರ ಲೋಣಿ, ರವಿ ಕುಲಕರ್ಣಿ, ರಾಜು ಬಿರಾದಾರ, ಬಾಬು ಚವ್ಹಾಣ, ಶಿವು ಬುಯ್ಯಾರ, ಮಲ್ಲು ಕುಂಬಾರ, ಸಂತೋಷ ಚವ್ಹಾಣ, ಗಜಾನನ ಚೌಧರಿ, ವಿನೋದ ಖೇಡ ಇದ್ದರು.</p>.<p class="Subhead">ಡಿಎಸ್ಎಸ್ ಬೆಂಬಲ:</p>.<p>ಧರಣಿ ಸತ್ಯಾಗ್ರಹಕ್ಕೆ ದಲಿತ ಸಂಘರ್ಷ ಸಮಿತಿ (ಸಾಗರ) ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ, ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ. ಮಯೂರ, ಪ್ರಶಾಂತ ಝಂಡೆ ನೇತೃತ್ವದಲ್ಲಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.</p>.<p>ಯಾವುದೇ ಕಾರಣಕ್ಕೂ ಸರ್ಕಾರ ಖಾಸಗಿಯವರಿಗೆ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.</p>.<p>ಅಂಗವಿಕಲರ ಕ್ಷೇಮಾಭಿವೃದ್ದಿ ಸಂಘದ ರಾಜ್ಯದ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ, ಉಪಾಧ್ಯಕ್ಷ ಹಣಮಂತ, ಸದಸ್ಯರಾದ ಜಗದೀಶ, ಉಮರಾಣ, ರಾಜು ಕುಮಟಗಿ, ಅಶೋಕ ವಾಲಿಕಾರ, ಅಂಬಣ್ಣ ಬುರಾಣಪುರ, ಮಲ್ಲಿಕಾರ್ಜುನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಗುರುವಾರ ಕರ್ನಾಟಕ ರಾಜ್ಯ ಬೀಜ ನಿಗಮದ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಭೇಟಿ ನೀಡಿ, ಬೆಂಬಲ ವ್ಯಕ್ತಪಡಿಸಿದರು.</p>.<p>‘ಸದನದಲ್ಲೇ ಜಿಲ್ಲೆಯ ಶಾಸಕರೊಬ್ಬರು ಪಿಪಿಪಿ ಮಾಡುವುದಾದರೆ ನಾನು ₹500 ಕೋಟಿ ಹೂಡಿಕೆ ಮಾಡುತ್ತೇನೆ ಎಂದಿದ್ದಾರೆ. ಈಗಾಗಲೇ ದುಡ್ಡು ಮಾಡಿಕೊಂಡಿರುವ ಅವರು ಇನ್ನಷ್ಟು ದುಡ್ಡು ಮಾಡಬೇಕೆಂದು ಬಯಸಿದ್ದಾರೆ’ ಎಂದು ವಿಜುಗೌಡ ಪಾಟೀಲ ಆರೋಪಿಸಿದರು.</p>.<p>‘ಈಗಾಗಲೇ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಿದರೆ ಇವರಿಗೇನು ತ್ರಾಸಿದೆ. ಇದು ಸಣ್ಣ ಮಕ್ಕಳಿಗೂ ಅರ್ಥವಾಗುವಂತಹದ್ದು. ಹಿಂದೆಯೇ ಎಚ್.ಡಿ. ಕುಮಾರಸ್ವಾಮಿಯವರು ಬಂದು ವೈದ್ಯಕೀಯ ಕಾಲೇಜಿಗಾಗಿ ಸ್ಥಳ ವೀಕ್ಷಣೆ ಮಾಡಿದಾಗಲೂ ಕೆಲವರು ವಿರೋಧ ವ್ಯಕ್ತಪಡಿಸಿದರು’ ಎಂದರು.</p>.<p>‘ಪ್ರಸ್ತುತ ದಿನಗಳಲ್ಲಿ ಖಾಸಗಿ ಆರೋಗ್ಯ ಸೇವೆಗಳು ತುಂಬಾ ದುಬಾರಿಯಾಗಿವೆ, ಜಿಲ್ಲೆಯ ಅಭಿವೃದ್ಧಿ ಯಾಗಬೇಕಾದರೆ ₹500 ಕೋಟಿ ದೊಡ್ಡದಲ್ಲ ಅದನ್ನು ಸರ್ಕಾರ ಕೊಡಬೇಕು, ಸರ್ಕಾರಿ ಕಾಲೇಜು ಬರುವುದರಿಂದ ಕಡುಬಡವರಿಗೆ ಅನುಕೂಲವಾಗುತ್ತದೆ. ಆದರೆ, ರಾಜಕಾರಣಿಗಳು ತಾವು ಬೆಳೆಯುವುದು, ತಮ್ಮ ಶಿಕ್ಷಣ ಸಂಸ್ಥೆಗಳು ಬೆಳೆಸುವುದನ್ನು ಮಾತ್ರ ನೋಡುತ್ತಿದ್ದಾರೆ’ ಎಂದು ಕಿರಿಕಾರಿದರು.</p>.<p>ಧರಣಿಯಲ್ಲಿ ಮುಖಂಡರಾದ ರವಿಕಾಂತ ಬಗಲಿ, ಉಮೇಶ ವಂದಾಲ, ಪ್ರಕಾಶ ಮಿರ್ಜಿ, ರವೀಂದ್ರ ಲೋಣಿ, ರವಿ ಕುಲಕರ್ಣಿ, ರಾಜು ಬಿರಾದಾರ, ಬಾಬು ಚವ್ಹಾಣ, ಶಿವು ಬುಯ್ಯಾರ, ಮಲ್ಲು ಕುಂಬಾರ, ಸಂತೋಷ ಚವ್ಹಾಣ, ಗಜಾನನ ಚೌಧರಿ, ವಿನೋದ ಖೇಡ ಇದ್ದರು.</p>.<p class="Subhead">ಡಿಎಸ್ಎಸ್ ಬೆಂಬಲ:</p>.<p>ಧರಣಿ ಸತ್ಯಾಗ್ರಹಕ್ಕೆ ದಲಿತ ಸಂಘರ್ಷ ಸಮಿತಿ (ಸಾಗರ) ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ, ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ. ಮಯೂರ, ಪ್ರಶಾಂತ ಝಂಡೆ ನೇತೃತ್ವದಲ್ಲಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.</p>.<p>ಯಾವುದೇ ಕಾರಣಕ್ಕೂ ಸರ್ಕಾರ ಖಾಸಗಿಯವರಿಗೆ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.</p>.<p>ಅಂಗವಿಕಲರ ಕ್ಷೇಮಾಭಿವೃದ್ದಿ ಸಂಘದ ರಾಜ್ಯದ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ, ಉಪಾಧ್ಯಕ್ಷ ಹಣಮಂತ, ಸದಸ್ಯರಾದ ಜಗದೀಶ, ಉಮರಾಣ, ರಾಜು ಕುಮಟಗಿ, ಅಶೋಕ ವಾಲಿಕಾರ, ಅಂಬಣ್ಣ ಬುರಾಣಪುರ, ಮಲ್ಲಿಕಾರ್ಜುನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>