ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾನಪದ ಸಂಸ್ಕೃತಿ ನಮ್ಮ ಬದುಕು’

Last Updated 4 ಸೆಪ್ಟೆಂಬರ್ 2022, 13:56 IST
ಅಕ್ಷರ ಗಾತ್ರ

ವಿಜಯಪುರ: ಜಾನಪದ ಕಲೆ, ಸಂಸ್ಕೃತಿ ನಮ್ಮ ಬದುಕಿಗೆ ದಾರಿದೀಪವಾಗಿದೆ ಎಂದು ಬಬಲೇಶ್ವರದ ಡಾ. ಮಹಾದೇವ ಶಿವಾಚಾರ್ಯ ಹೇಳಿದರು.

ಹಿಟ್ಟಿನಹಳ್ಳಿ ಗ್ರಾಮದಲ್ಲಿ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಗಜಾನನ ಉತ್ಸವದ ಸುವರ್ಣ ಮಹೋತ್ಸವದಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಭಾರತೀಯ ಪರಂಪರೆ ಜಾನಪದ ಸಂಸ್ಕೃತಿ ಆಧಾರಿತವಾಗಿದೆ. ಹಿರಿಯರು ಕಟ್ಟಿದ ಗ್ರಾಮೀಣ ಜೀವನದ ಮೌಲ್ಯಗಳನ್ನು ಉಳಿಸಿಕೊಳ್ಳುವ ಅವಶ್ಯಕತೆಯಿದೆ ಎಂದರು.

ಮನಗೂಳಿ ಹಿರೇಮಠ ಅಭಿನವ ಸಂಗನಬಸವ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಣೇಶೋತ್ಸವ ಆಯೋಜನೆ ಮೂಲಕ ಬಾಲ ಗಂಗಾಧರ ತಿಲಕರು ಯವಕರಲ್ಲಿ ದೇಶಾಭಿಮಾನ ಮೂಡಿಸಿದರು ಎಂದು ಹೇಳಿದರು.

ನಾಗಠಾಣ ಶಾಸಕ ದೇವಾನಂದ ಚವ್ವಾಣ ಕಾರ್ಯಕ್ರಮ ಉದ್ಘಾಟಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಶ್ರೀಕಾಂತ ಗೊಂಗಡಿ, ವಿಜಯಕುಮಾರ ಘಾಟಗೆ, ರಾಜೇಂದ್ರ ಬಿರಾದಾರ, ಅಶೋಕ ಬಗಲಿ, ಸಾಹೇಬಗೌಡ ಶಿವನಗೌಡ ಬಿರಾದಾರ, ಮಹಿಬೂಬ ಕೋಲಾರ, ಬಸವರಾಜ ಬಿರಾದಾರ,ಅಬ್ದುಲ್ ವಾಲಿಕಾರ,ಮಲ್ಲಪ್ಪ ಬಾವಿಕಟ್ಟಿ, ಸಿದ್ದಣ್ಣ ಹೊಸಳ್ಳಿ, ಜಗನ್ನಾಥ ಶಿರಬೂರ, ಸಾಹೇಬಗೌಡ ಬಿರಾದಾರ, ಮಹಾಂತೇಶ ಹೊಸೂರು, ಡಾ.ಸುನೀಲ ಕುಸಗಲ್, ಡಾ.ಸಂಗಮೇಶ ಮೇತ್ರಿ, ಕೆ.ಸುನಂದಾ, ಆಶಾ ಬಿರಾದಾರ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT