ತಾಳಿಕೋಟೆ ತಾಲ್ಲೂಕಿನ ಗೋಟಖಿಂಡ್ಕಿ ಗ್ರಾಮದ ಮುಖ್ಯ ರಸ್ತೆ ಹಾಳಾಗಿದ್ದು ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಬಳಕೆ ಮಾಡಿದ ನೀರು ರಸ್ತೆ ಮಧ್ಯದಲ್ಲಿಯೇ ಹರಿಯುತ್ತಿದೆ
ಎಸ್ಸಿ ಕಾಲೊನಿ ಕನಕದಾಸ ಕಾಲೊನಿಯಲ್ಲಿ ಸಿಸಿ ರಸ್ತೆ ಚರಂಡಿ ವ್ಯವಸ್ಥೆ ಇಲ್ಲದಾಗಿದೆ ಊರಿನ ಪ್ರಮುಖ ರಸ್ತೆಗಳಂತೂ ಚರಂಡಿ ನೀರಿನಿಂದ ಗಬ್ಬೆದ್ದು ನಾರುತ್ತಿವೆ. ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ
ಗುರುಪ್ರಸಾದ್ ಬಿ.ಜಿ. ಯುವ ಮುಖಂಡ
ಗೋಟಖಿಂಡ್ಕಿ ಗ್ರಾಮಕ್ಕೆ ಈಗ ಕುಡಿಯುವ ನೀರಿನ ಸಮಸ್ಯೆಯಿಲ್ಲ. ವಿತರಣೆಯ ಲೋಪ ಸರಿಪಡಿಸಲಾಗುವುದು. ಕ್ರಿಯಾಯೋಜನೆಯಲ್ಲಿಟ್ಟು ರಸ್ತೆ ಚರಂಡಿ ವ್ಯವಸ್ಥೆ ಸರಿಪಡಿಸಲಾಗುವುದು