ನಗರದ ಶ್ರೀ ಸಿದ್ದೇಶ್ವರ ಗುಡಿಯಿಂದ ಆರಂಭವಾದ ಪಾದಯಾತ್ರೆಯು ಗಾಂಧಿ ಚೌಕಿ ಮೂಲಕ ಸಾಗಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ತಲುಪಿತು. ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದ ಪಕ್ಷ ಕಾರ್ಯಕರ್ತರು, ಬೆಂಬಲಿಗರು, ಮುಖಂಡರು, ಅಭಿಮಾನಿಗಳಿಗೆ ವಂದಿಸಿದರು. ಡೊಳ್ಳಿನ ವಾದ್ಯದೊಂದಿಗೆ ಸಾಂಪ್ರಾದಾಯಿಕ ಲಂಬಾಣಿ ನೃತ್ಯ, ಜೆಡಿಎಸ್ನ ತೆನೆ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಗಮನ ಸೆಳೆದರು.