‘ಈಗಾಗಲೇ ಹೆಸರು ಬಿತ್ತನೆ ಅವಧಿ ಮುಗಿದಿದ್ದು, ಮಳೆಯ ಕೊರತೆಯಿಂದ ಬಿತ್ತಲಾಗಲಿಲ್ಲ. ಮುಂದಿನ ದಿನಗಳಲ್ಲಿ ಮಳೆ ಆಗಲಿದೆ ಎಂಬ ವಿಶ್ವಾಸದಲ್ಲಿ ತೊಗರಿ, ಸೂರ್ಯಕಾಂತಿ, ಸಜ್ಜೆ, ಹುರುಳಿ ಬಿತ್ತನೆ ಮಾಡುತ್ತಿದ್ದೇವೆ. ಮಳೆ ಆಗದಿದ್ದರೆ ಬೀಜ, ಗೊಬ್ಬಕ್ಕೆ ಹಾಕಿದಹಣಮಣ್ಣಿಗೆ ಹೋಗುತ್ತದೆ. ನಸಿಬು ಚಲೋ ಇದ್ದರೆ ಫಸಲು ಬರುತ್ತದೆ’ ಎನ್ನುತ್ತಾರೆ ಬೂದಿಹಾಳ ಗ್ರಾಮದ ರೈತದಯಾನಂದ ಸೋಮನಾಳ.