<p><strong>ಇಂಡಿ</strong>: ‘ಬಂಗಾರ ಮತ್ತಿತರ ಎಲ್ಲ ವಸ್ತುಗಳ ಬೆಲೆ ಏರಿಕೆ, ಯುವಕ ಯುವತಿಯರು ಅತಿ ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವುದು ಸೇರಿದಂತೆ ಹಲವಾರು ಸಮಸ್ಯೆಗಳಲ್ಲಿ ಸಿಲುಕಿರುವವರಿಗೆ ಸಾಮೂಹಿಕ ವಿವಾಹವು ಅನುಕೂಲವಾಗಿದೆ’ ಎಂದು ಯರನಾಳ ಗ್ರಾಮದ ಸಂಗನಬಸವ ಶ್ರೀ ಹೇಳಿದರು.</p>.<p>ತಾಲ್ಲೂಕಿನ ಲಚ್ಯಾಣ ಗ್ರಾಮದ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಶಂಕರಲಿಂಗ ಜಾತ್ರಾ ಮಹೋತ್ಸವ ಮತ್ತು ಹನುಮಾನ್ ಗುಡಿಯ ಕಳಸಾರೋಹಣ, ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>‘ಸಾಲ ಮಾಡಿ ದುಂದು ವೆಚ್ಚ ಮಾಡದೇ ಯಾವದೇ ಜಾತಿ, ಮತ, ಪಂಥ ಎನ್ನದೇ ಹತ್ತಾರು ಪೂಜ್ಯರು, ಸಾವಿರಾರು ಜನರು, ರಾಜಕೀಯ ಮುತ್ಸದ್ದಿಗಳು ಮತ್ತು ಸತ್ಪುರುಷರ, ಬಂಧು ಬಳಗದವರ ಮಧ್ಯೆ ನಡೆಯುವ ವಿವಾಹ ಶ್ರೇಷ್ಠ’ ಎಂದರು.</p>.<p>ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡಕರ, ಹಣಮಂತ ಕಾಗವಾಡ ಮಾತನಾಡಿದರು. ಭಕ್ತಿ ಸೇವೆ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು.</p>.<p>ಹಳಂಗಳಿಯ ಶಿವಾನಂದ ಶ್ರೀ, ತುಂಗಳದ ಮಾತೋಶ್ರೀ ಅನುಸೂಯಾ ಅಮ್ಮ, ಹೂವಿನ ಹಿಪ್ಪರಗಿಯ ದ್ರಾಕ್ಷಾಯಿಣಿ ಅಮ್ಮ, ಚಿಕ್ಕಪಡಸಲಗಿಯ ಅಕ್ಕಮಹಾದೇವಿ ಅಮ್ಮ, ಶಾಸಕ ಯಶವಂತರಾಯಗೌಡ ಪಾಟೀಲರ ಸಹೋದರ ಬಸವಂತರಾಯಗೌಡ ಪಾಟೀಲ, ಎಂ.ಕೆ. ಬಿರಾದಾರ ಇದ್ದರು. ಇದಕ್ಕೂ ಮೊದಲು ಸಿದ್ದಲಿಂಗ ದೇವರು ಗುಡಿಯ ಕಳಸಾರೋಣ ನೆರವೇರಿಸಿದರು.</p>.<p>ಸಾಮೂಹಿಕ ವಿವಾಹದಲ್ಲಿ 28 ಜೋಡಿಗಳು ಮದುವೆ ಆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಡಿ</strong>: ‘ಬಂಗಾರ ಮತ್ತಿತರ ಎಲ್ಲ ವಸ್ತುಗಳ ಬೆಲೆ ಏರಿಕೆ, ಯುವಕ ಯುವತಿಯರು ಅತಿ ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವುದು ಸೇರಿದಂತೆ ಹಲವಾರು ಸಮಸ್ಯೆಗಳಲ್ಲಿ ಸಿಲುಕಿರುವವರಿಗೆ ಸಾಮೂಹಿಕ ವಿವಾಹವು ಅನುಕೂಲವಾಗಿದೆ’ ಎಂದು ಯರನಾಳ ಗ್ರಾಮದ ಸಂಗನಬಸವ ಶ್ರೀ ಹೇಳಿದರು.</p>.<p>ತಾಲ್ಲೂಕಿನ ಲಚ್ಯಾಣ ಗ್ರಾಮದ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಶಂಕರಲಿಂಗ ಜಾತ್ರಾ ಮಹೋತ್ಸವ ಮತ್ತು ಹನುಮಾನ್ ಗುಡಿಯ ಕಳಸಾರೋಹಣ, ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>‘ಸಾಲ ಮಾಡಿ ದುಂದು ವೆಚ್ಚ ಮಾಡದೇ ಯಾವದೇ ಜಾತಿ, ಮತ, ಪಂಥ ಎನ್ನದೇ ಹತ್ತಾರು ಪೂಜ್ಯರು, ಸಾವಿರಾರು ಜನರು, ರಾಜಕೀಯ ಮುತ್ಸದ್ದಿಗಳು ಮತ್ತು ಸತ್ಪುರುಷರ, ಬಂಧು ಬಳಗದವರ ಮಧ್ಯೆ ನಡೆಯುವ ವಿವಾಹ ಶ್ರೇಷ್ಠ’ ಎಂದರು.</p>.<p>ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡಕರ, ಹಣಮಂತ ಕಾಗವಾಡ ಮಾತನಾಡಿದರು. ಭಕ್ತಿ ಸೇವೆ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು.</p>.<p>ಹಳಂಗಳಿಯ ಶಿವಾನಂದ ಶ್ರೀ, ತುಂಗಳದ ಮಾತೋಶ್ರೀ ಅನುಸೂಯಾ ಅಮ್ಮ, ಹೂವಿನ ಹಿಪ್ಪರಗಿಯ ದ್ರಾಕ್ಷಾಯಿಣಿ ಅಮ್ಮ, ಚಿಕ್ಕಪಡಸಲಗಿಯ ಅಕ್ಕಮಹಾದೇವಿ ಅಮ್ಮ, ಶಾಸಕ ಯಶವಂತರಾಯಗೌಡ ಪಾಟೀಲರ ಸಹೋದರ ಬಸವಂತರಾಯಗೌಡ ಪಾಟೀಲ, ಎಂ.ಕೆ. ಬಿರಾದಾರ ಇದ್ದರು. ಇದಕ್ಕೂ ಮೊದಲು ಸಿದ್ದಲಿಂಗ ದೇವರು ಗುಡಿಯ ಕಳಸಾರೋಣ ನೆರವೇರಿಸಿದರು.</p>.<p>ಸಾಮೂಹಿಕ ವಿವಾಹದಲ್ಲಿ 28 ಜೋಡಿಗಳು ಮದುವೆ ಆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>