<p>ವಿಜಯಪುರ: ನಗರದಲ್ಲಿ ಗುರುವಾರ ಸಂಜೆ ಅರ್ಧಗಂಟೆ ಸುರಿದ ಬಿರುಸಿನ ಮಳೆಗೆ ನಗರದ ಮೀನಾಕ್ಷಿ ಚೌಕ್ನಲ್ಲಿ ಅವೈಜ್ಞಾನಿಕ ರಸ್ತೆ ಹಾಗೂ ಚರಂಡಿ ನಿರ್ಮಾಣದಿಂದಾಗಿ, ನೀರು ಸರಾಗವಾಗಿ ಹರಿದು ಹೋಗದ ಕಾರಣ ರಸ್ತೆಯ ಮೇಲೆ ನೀರು ನಿಂತಿತು.</p>.<p>ಮಳೆ ಆರಂಭವಾಗಿ ಕೆಲ ಹೊತ್ತಿನಲ್ಲಿಯೇ ಮೀನಾಕ್ಷಿ ಚೌಕ್ ಕೆರೆಯಂತೆ ಪರಿವರ್ತನೆಯಾಗಿತ್ತು. ಇಲ್ಲಿ ಸಂಚರಿಸುವ ವಾಹನ ಸವಾರರು ನೀರಿನಲ್ಲಿ ಹರಸಾಹಸ ಪಡುತ್ತಾ ಸಂಚರಿಸಿದರು.</p>.<p>ನಗರದ ಮಾರುಕಟ್ಟೆ ಸ್ಥಳವಾದ ಮೀನಾಕ್ಷಿ ಚೌಕ್ ಹಾಗೂ ಕೆ.ಸಿ ಮಾರ್ಕೆಟ್ ರಸ್ತೆ, ಅಲ್ಪ ಮಳೆಗೆ ಭರ್ತಿಯಾಗಿದ್ದು, ರಸ್ತೆ ಮೇಲೆ ಸಂಚರಿಸುವ ಪಾದಚಾರಿಗಳು ಪಾಲಿಕೆ ಮೇಲೆ ಆಕ್ರೋಶ ಹೊರಹಾಕುತ್ತಾ ಸಾಗಿದ ದೃಶ್ಯಗಳು ಕಂಡು ಬಂದವು.</p>.<p>ರಸ್ತೆಯಲ್ಲಿ ತಳ್ಳುಗಾಡಿಯಲ್ಲಿ ವ್ಯಾಪಾರಿಗಳು ಮಳೆಯಿಂದಾಗಿ ತೊಂದರೆ ಅನುಭವಿಸಿದರು. ಮಳೆ ನಿಂತ ನಂತರವೂ ರಸ್ತೆ ಮೇಲೆ ನಿಂತ ನೀರಿನಲ್ಲಿಯೇ ವ್ಯಾಪಾರಕ್ಕೆ ಮುಂದಾದರು. </p>.<p>ಇನ್ನೂ ನಗರದ ರೈಲ್ವೆ ಸ್ಟೇಷನ್ ರಸ್ತೆ, ಇಬ್ರಾಹಿಂ ರೋಜಾ ರಸ್ತೆಯಲ್ಲೂ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ನಗರದ ವಿವಿಧ ಬಡಾವಣೆಗಳ ರಸ್ತೆಯಲ್ಲೂ ಬೈಕ್ ಸವಾರರೂ ಸಾಹಸ ಪಡುತ್ತಾ ಸಾಗಿದರು.</p>.<p>ಮಳೆಯಿಂದಾಗಿ ಮೀನಾಕ್ಷಿ ಚೌಕ್ನಲ್ಲಿ ನಿರಂತರ ನೀರು ನಿಲ್ಲುತ್ತಿದ್ದು, ನಿಂತ ನೀರಿನಲ್ಲಿ ಸೊಳ್ಳೆಗಳು ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗಿ ರೋಗ ಹರಡುವ ಆತಂಕ ಜನರಲ್ಲಿ ಮೂಡುತ್ತಿದೆ.</p>.<p><strong>ಉತ್ತಮ ಮಳೆ:</strong> ಜಿಲ್ಲೆಯ ವಿವಿಧ ಕಡೆ ಬುಧವಾರ ಗುಡುಗು ಮಿಶ್ರಿತ ಉತ್ತಮ ಮಳೆಯಾಗಿದೆ. ಜಿಲ್ಲೆಯ ನಾಲತವಾಡದಲ್ಲಿ 5.4 ಸೆಂ.ಮೀ ಮಳೆಯಾಗಿದೆ. ಮುದ್ದೇಬಿಹಾಳ 2.4 ಸೆಂ.ಮೀ, ಢವಳಗಿ 3.1, ತಾಳಿಕೋಟೆ 1.9, ತಿಕೋಟಾ 1.0, ಆಲಮಟ್ಟಿ 1.7, ಅರೇಶಂಕರ 1.8 ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ನಗರದಲ್ಲಿ ಗುರುವಾರ ಸಂಜೆ ಅರ್ಧಗಂಟೆ ಸುರಿದ ಬಿರುಸಿನ ಮಳೆಗೆ ನಗರದ ಮೀನಾಕ್ಷಿ ಚೌಕ್ನಲ್ಲಿ ಅವೈಜ್ಞಾನಿಕ ರಸ್ತೆ ಹಾಗೂ ಚರಂಡಿ ನಿರ್ಮಾಣದಿಂದಾಗಿ, ನೀರು ಸರಾಗವಾಗಿ ಹರಿದು ಹೋಗದ ಕಾರಣ ರಸ್ತೆಯ ಮೇಲೆ ನೀರು ನಿಂತಿತು.</p>.<p>ಮಳೆ ಆರಂಭವಾಗಿ ಕೆಲ ಹೊತ್ತಿನಲ್ಲಿಯೇ ಮೀನಾಕ್ಷಿ ಚೌಕ್ ಕೆರೆಯಂತೆ ಪರಿವರ್ತನೆಯಾಗಿತ್ತು. ಇಲ್ಲಿ ಸಂಚರಿಸುವ ವಾಹನ ಸವಾರರು ನೀರಿನಲ್ಲಿ ಹರಸಾಹಸ ಪಡುತ್ತಾ ಸಂಚರಿಸಿದರು.</p>.<p>ನಗರದ ಮಾರುಕಟ್ಟೆ ಸ್ಥಳವಾದ ಮೀನಾಕ್ಷಿ ಚೌಕ್ ಹಾಗೂ ಕೆ.ಸಿ ಮಾರ್ಕೆಟ್ ರಸ್ತೆ, ಅಲ್ಪ ಮಳೆಗೆ ಭರ್ತಿಯಾಗಿದ್ದು, ರಸ್ತೆ ಮೇಲೆ ಸಂಚರಿಸುವ ಪಾದಚಾರಿಗಳು ಪಾಲಿಕೆ ಮೇಲೆ ಆಕ್ರೋಶ ಹೊರಹಾಕುತ್ತಾ ಸಾಗಿದ ದೃಶ್ಯಗಳು ಕಂಡು ಬಂದವು.</p>.<p>ರಸ್ತೆಯಲ್ಲಿ ತಳ್ಳುಗಾಡಿಯಲ್ಲಿ ವ್ಯಾಪಾರಿಗಳು ಮಳೆಯಿಂದಾಗಿ ತೊಂದರೆ ಅನುಭವಿಸಿದರು. ಮಳೆ ನಿಂತ ನಂತರವೂ ರಸ್ತೆ ಮೇಲೆ ನಿಂತ ನೀರಿನಲ್ಲಿಯೇ ವ್ಯಾಪಾರಕ್ಕೆ ಮುಂದಾದರು. </p>.<p>ಇನ್ನೂ ನಗರದ ರೈಲ್ವೆ ಸ್ಟೇಷನ್ ರಸ್ತೆ, ಇಬ್ರಾಹಿಂ ರೋಜಾ ರಸ್ತೆಯಲ್ಲೂ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ನಗರದ ವಿವಿಧ ಬಡಾವಣೆಗಳ ರಸ್ತೆಯಲ್ಲೂ ಬೈಕ್ ಸವಾರರೂ ಸಾಹಸ ಪಡುತ್ತಾ ಸಾಗಿದರು.</p>.<p>ಮಳೆಯಿಂದಾಗಿ ಮೀನಾಕ್ಷಿ ಚೌಕ್ನಲ್ಲಿ ನಿರಂತರ ನೀರು ನಿಲ್ಲುತ್ತಿದ್ದು, ನಿಂತ ನೀರಿನಲ್ಲಿ ಸೊಳ್ಳೆಗಳು ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗಿ ರೋಗ ಹರಡುವ ಆತಂಕ ಜನರಲ್ಲಿ ಮೂಡುತ್ತಿದೆ.</p>.<p><strong>ಉತ್ತಮ ಮಳೆ:</strong> ಜಿಲ್ಲೆಯ ವಿವಿಧ ಕಡೆ ಬುಧವಾರ ಗುಡುಗು ಮಿಶ್ರಿತ ಉತ್ತಮ ಮಳೆಯಾಗಿದೆ. ಜಿಲ್ಲೆಯ ನಾಲತವಾಡದಲ್ಲಿ 5.4 ಸೆಂ.ಮೀ ಮಳೆಯಾಗಿದೆ. ಮುದ್ದೇಬಿಹಾಳ 2.4 ಸೆಂ.ಮೀ, ಢವಳಗಿ 3.1, ತಾಳಿಕೋಟೆ 1.9, ತಿಕೋಟಾ 1.0, ಆಲಮಟ್ಟಿ 1.7, ಅರೇಶಂಕರ 1.8 ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>