<p><strong>ಚಡಚಣ:</strong> ರೈತರು ಸಮಗ್ರ ವ್ಯವಸಾಯದೊಂದಿಗೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬಹುದು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.</p>.<p>ಸಮೀಪದ ಹಲಸಂಗಿ ಗ್ರಾಮದಲ್ಲಿ ಸೋಮವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದರು.</p>.<p>ಸಂಘ ಕಟ್ಟುವುದಕ್ಕಿಂತ ನಿರ್ವಹಣೆ ಜವಾಬ್ದಾರಿ ಮಹತ್ವದ ಪಾತ್ರವಹಿಸುತ್ತದೆ. ಆ ನಿಟ್ಟಿನಲ್ಲಿ ಹಲಸಂಗಿ ಶಾಖೆ ತನ್ನ ಕೆಲಸ ಅಚ್ಚುಕಟ್ಟಾಗಿ ಮಾಡಿದೆ ಎಂದರು.</p>.<p>ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ರೈತರು ಕೃಷಿ ಮಾಡಿ ನಮ್ಮ ಬ್ಯಾಂಕ್ಗಳಿಗೆ ಸಾಲು ಕೊಡುವ ಕಾಲ ಬರಬೇಕು. ಅದಕ್ಕಾಗಿ ರೈತರು ವೈಜ್ಞಾನಿಕ ಕೃಷಿಗೆ ಒತ್ತು ನೀಡಬೇಕು ಎಂದರು.</p>.<p>ಪ್ರಸ್ತಾವಿಕವಾಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಮತನಾಡಿ, ‘ಆರಂಭದಲ್ಲಿ ₹ 34 ಲಕ್ಷದಿಂದ ಈಗ ₹ 1 ಕೋಟಿ ಠೇವಣಿ ಹೊಂದುವುದರೊಂದಿಗೆ ಪ್ರಗತಿ ಪಥದಲ್ಲಿ ನಮ್ಮ ಶಾಖೆ ಸಾಧನೆ ಮಾಡಿದೆ’ ಎಂದರು.</p>.<p>ಮುಖಂಡ ಎಂ.ಆರ್.ಪಾಟೀಲ,ಜಿ.ಪಂ.ಮಾಜಿ ಸದಸ್ಯ ಪಂಚಪ್ಪ ಕಲಬುರಗಿ ಮಾತನಾಡಿದರು.</p>.<p>ಸಾನಿಧ್ಯ ವಹಿಸಿದ್ದ ಯರನಾಳ ಸಂಗನಬಸವ ಸ್ವಾಮೀಜಿ, ಬಸವರಾಜ ಪೂಜಾರಿ, ಮಹಾಂತೇಶ ಹಿರೇಮಠ ವಹಿಸಿ ಆಶೀರ್ವಚನ ನೀಡಿದರು.</p>.<p>ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ. ಪಾಟೀಲ, ಮಾಜಿ ಶಾಸಕ ದೇವಾನಂದ್ ಚವ್ಹಾಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತೀಶ ಮನಮಿ ಇದ್ದರು.</p>.<div><blockquote>ವಿಡಿಸಿಸಿ ಬ್ಯಾಂಕ್ ಮಹಿಳೆಯರ ಸ್ವಸಹಾಯ ಸಂಘದಲ್ಲಿ ಶೂನ್ಯ ಬಡ್ಡಿದರದಲ್ಲಿ ಹೈನುಗಾರಿಕೆ ಸ್ವ ಉದ್ಯೋಗಕ್ಕೆ ಸಾಲ ನೀಡುವುದರೊಂದಿಗೆ ಚಿಕ್ಕ ಹಿಡುವಳಿಗಾರರಿಗೆ ಮನೆ ನಿರ್ಮಾಣಕ್ಕೆ ಶೇ 10ರ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ಅದರ ಪ್ರಯೋಜನ ಪಡೆದುಕೊಳ್ಳಿ</blockquote><span class="attribution">ಶಿವಾನಂದ ಪಾಟೀಲ ಅಧ್ಯಕ್ಷ ವಿಡಿಸಿಸಿ ಬ್ಯಾಂಕ್ ವಿಜಯಪುರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಡಚಣ:</strong> ರೈತರು ಸಮಗ್ರ ವ್ಯವಸಾಯದೊಂದಿಗೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬಹುದು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.</p>.<p>ಸಮೀಪದ ಹಲಸಂಗಿ ಗ್ರಾಮದಲ್ಲಿ ಸೋಮವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದರು.</p>.<p>ಸಂಘ ಕಟ್ಟುವುದಕ್ಕಿಂತ ನಿರ್ವಹಣೆ ಜವಾಬ್ದಾರಿ ಮಹತ್ವದ ಪಾತ್ರವಹಿಸುತ್ತದೆ. ಆ ನಿಟ್ಟಿನಲ್ಲಿ ಹಲಸಂಗಿ ಶಾಖೆ ತನ್ನ ಕೆಲಸ ಅಚ್ಚುಕಟ್ಟಾಗಿ ಮಾಡಿದೆ ಎಂದರು.</p>.<p>ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ರೈತರು ಕೃಷಿ ಮಾಡಿ ನಮ್ಮ ಬ್ಯಾಂಕ್ಗಳಿಗೆ ಸಾಲು ಕೊಡುವ ಕಾಲ ಬರಬೇಕು. ಅದಕ್ಕಾಗಿ ರೈತರು ವೈಜ್ಞಾನಿಕ ಕೃಷಿಗೆ ಒತ್ತು ನೀಡಬೇಕು ಎಂದರು.</p>.<p>ಪ್ರಸ್ತಾವಿಕವಾಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಮತನಾಡಿ, ‘ಆರಂಭದಲ್ಲಿ ₹ 34 ಲಕ್ಷದಿಂದ ಈಗ ₹ 1 ಕೋಟಿ ಠೇವಣಿ ಹೊಂದುವುದರೊಂದಿಗೆ ಪ್ರಗತಿ ಪಥದಲ್ಲಿ ನಮ್ಮ ಶಾಖೆ ಸಾಧನೆ ಮಾಡಿದೆ’ ಎಂದರು.</p>.<p>ಮುಖಂಡ ಎಂ.ಆರ್.ಪಾಟೀಲ,ಜಿ.ಪಂ.ಮಾಜಿ ಸದಸ್ಯ ಪಂಚಪ್ಪ ಕಲಬುರಗಿ ಮಾತನಾಡಿದರು.</p>.<p>ಸಾನಿಧ್ಯ ವಹಿಸಿದ್ದ ಯರನಾಳ ಸಂಗನಬಸವ ಸ್ವಾಮೀಜಿ, ಬಸವರಾಜ ಪೂಜಾರಿ, ಮಹಾಂತೇಶ ಹಿರೇಮಠ ವಹಿಸಿ ಆಶೀರ್ವಚನ ನೀಡಿದರು.</p>.<p>ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ. ಪಾಟೀಲ, ಮಾಜಿ ಶಾಸಕ ದೇವಾನಂದ್ ಚವ್ಹಾಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತೀಶ ಮನಮಿ ಇದ್ದರು.</p>.<div><blockquote>ವಿಡಿಸಿಸಿ ಬ್ಯಾಂಕ್ ಮಹಿಳೆಯರ ಸ್ವಸಹಾಯ ಸಂಘದಲ್ಲಿ ಶೂನ್ಯ ಬಡ್ಡಿದರದಲ್ಲಿ ಹೈನುಗಾರಿಕೆ ಸ್ವ ಉದ್ಯೋಗಕ್ಕೆ ಸಾಲ ನೀಡುವುದರೊಂದಿಗೆ ಚಿಕ್ಕ ಹಿಡುವಳಿಗಾರರಿಗೆ ಮನೆ ನಿರ್ಮಾಣಕ್ಕೆ ಶೇ 10ರ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ಅದರ ಪ್ರಯೋಜನ ಪಡೆದುಕೊಳ್ಳಿ</blockquote><span class="attribution">ಶಿವಾನಂದ ಪಾಟೀಲ ಅಧ್ಯಕ್ಷ ವಿಡಿಸಿಸಿ ಬ್ಯಾಂಕ್ ವಿಜಯಪುರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>