<p><strong>ವಿಜಯಪುರ</strong>:ಬಬಲೇಶ್ವರ ಗ್ರಾಮದ ಯಾಕೂಬ್ ಚಾಂದಬಾಷಾ ಕೋಲೂರ(24) ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಈ ಸಂಬಂಧ ನಾಲ್ವರು ಸುಫಾರಿ ಹಂತಕರನ್ನು ಬಂಧಿಸಿದ್ದಾರೆ.</p>.<p>ಹತ್ಯೆಯಾದ ಯಾಕೂಬ್ನ ಸೋದರ ಸಂಬಂಧಿ ಬಬಲೇಶ್ವರದ ಪೈಗಂಬರ ದಸ್ತಗಿರಿಸಾಬ ಗೋಕಾಂವಿ, ಪೈಗಂಬರ ರಾಜೇಸಾಬ ಕೋಲೂರ ಹಾಗೂ ಸಾರವಾಡದ ಚಂದ್ರಕಾಂತ ಪುಟ್ಟಣ್ಣವರ ಮತ್ತು ಸಾಗರ ಸಂಜೀವ್ಗೋಳ ಬಂಧಿತ ಹಂತಕರಾಗಿದ್ದಾರೆ.</p>.<p>ಕೊಲೆಯಾಗಿರುವ ಯಾಕೂಬ್ ಚಾಂದಬಾಷಾ ಕೋಲೂರ ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಸಂಶಯಗೊಂಡ ಆರೋಪಿ ಪೈಗಂಬರ್ ರಾಜೇಸಾಬ ಕೋಲೂರ, ಆಗಾಗ ಜಗಳ ಮಾಡುತ್ತಿದ್ದನು. ಇದೇ ಸಿಟ್ಟಿನಿಂದ ಆರೋಪಿಯು ಪೈಗಂಬರ್ ಗೋಕಾಂವಿ ಹಾಗೂ ಅವನ ಗೆಳೆಯರಿಗೆ ₹ 6 ಲಕ್ಷ ಸುಫಾರಿ ಕೊಟ್ಟು ಕೊಲೆ ಮಾಡಿಸಿರುವುದು ವಿಚಾರಣೆಯಿಂದ ಬಹಿರಂಗವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.</p>.<p>ಆರೋಪಿಗಳು ಕಳೆದ ಆಗಸ್ಟ್ 16ರಂದು ಯಾಕೂಬ್ನನ್ನು ಕಾರೊಂದರಲ್ಲಿ ಕೂರಿಸಿಕೊಂಡು ಹೋಗಿ, ಅಂದು ರಾತ್ರಿ 11.30ರ ಸುಮಾರಿಗೆ ಕೊಲ್ಹಾರದ ಕೃಷ್ಣಾ ನದಿಯ ಸೇತುವೆ ಹತ್ತಿರ ಯಾಕೂಬ್ನ ಕುತ್ತಿಗೆಗೆ ವೈರಿನಿಂದ ಬಿಗಿದು ಕೊಲೆ ಮಾಡಿ, ನಂತರ ಆತನ ಹೆಣವನ್ನು ನದಿಗೆ ಎಸೆದು ಪರಾರಿಯಾಗಿದ್ದರು.</p>.<p>ಕೊಲೆಯಾದ ಯಾಕೂಬ್ ಅವರ ತಂದೆ ಚಂದಪಾಷಾ ಕೋಲೂರ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ₹11,100 ನಗದು ವಶಪಡಿಸಿಕೊಂಡಿದ್ದಾರೆ.</p>.<p>ಡಿವೈಎಸ್ಪಿ ಕೆ.ಸಿ.ಲಕ್ಷ್ಮೀನಾರಾಯಣ, ವಿಜಯಪುರ ಗ್ರಾಮೀಣಸಿಪಿಐ ಎಸ್.ಬಿ.ಪಾಲಭಾವಿ, ಬಬಲೇಶ್ವರ ಪಿಎಸ್ಐ ಎಸ್.ಬಿ.ಗೌಡ್ರ ನೇತೃತ್ವದ ತನಿಖಾ ತಂಡವು ಆರೋಪಿಗಳನ್ನು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>:ಬಬಲೇಶ್ವರ ಗ್ರಾಮದ ಯಾಕೂಬ್ ಚಾಂದಬಾಷಾ ಕೋಲೂರ(24) ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಈ ಸಂಬಂಧ ನಾಲ್ವರು ಸುಫಾರಿ ಹಂತಕರನ್ನು ಬಂಧಿಸಿದ್ದಾರೆ.</p>.<p>ಹತ್ಯೆಯಾದ ಯಾಕೂಬ್ನ ಸೋದರ ಸಂಬಂಧಿ ಬಬಲೇಶ್ವರದ ಪೈಗಂಬರ ದಸ್ತಗಿರಿಸಾಬ ಗೋಕಾಂವಿ, ಪೈಗಂಬರ ರಾಜೇಸಾಬ ಕೋಲೂರ ಹಾಗೂ ಸಾರವಾಡದ ಚಂದ್ರಕಾಂತ ಪುಟ್ಟಣ್ಣವರ ಮತ್ತು ಸಾಗರ ಸಂಜೀವ್ಗೋಳ ಬಂಧಿತ ಹಂತಕರಾಗಿದ್ದಾರೆ.</p>.<p>ಕೊಲೆಯಾಗಿರುವ ಯಾಕೂಬ್ ಚಾಂದಬಾಷಾ ಕೋಲೂರ ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಸಂಶಯಗೊಂಡ ಆರೋಪಿ ಪೈಗಂಬರ್ ರಾಜೇಸಾಬ ಕೋಲೂರ, ಆಗಾಗ ಜಗಳ ಮಾಡುತ್ತಿದ್ದನು. ಇದೇ ಸಿಟ್ಟಿನಿಂದ ಆರೋಪಿಯು ಪೈಗಂಬರ್ ಗೋಕಾಂವಿ ಹಾಗೂ ಅವನ ಗೆಳೆಯರಿಗೆ ₹ 6 ಲಕ್ಷ ಸುಫಾರಿ ಕೊಟ್ಟು ಕೊಲೆ ಮಾಡಿಸಿರುವುದು ವಿಚಾರಣೆಯಿಂದ ಬಹಿರಂಗವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.</p>.<p>ಆರೋಪಿಗಳು ಕಳೆದ ಆಗಸ್ಟ್ 16ರಂದು ಯಾಕೂಬ್ನನ್ನು ಕಾರೊಂದರಲ್ಲಿ ಕೂರಿಸಿಕೊಂಡು ಹೋಗಿ, ಅಂದು ರಾತ್ರಿ 11.30ರ ಸುಮಾರಿಗೆ ಕೊಲ್ಹಾರದ ಕೃಷ್ಣಾ ನದಿಯ ಸೇತುವೆ ಹತ್ತಿರ ಯಾಕೂಬ್ನ ಕುತ್ತಿಗೆಗೆ ವೈರಿನಿಂದ ಬಿಗಿದು ಕೊಲೆ ಮಾಡಿ, ನಂತರ ಆತನ ಹೆಣವನ್ನು ನದಿಗೆ ಎಸೆದು ಪರಾರಿಯಾಗಿದ್ದರು.</p>.<p>ಕೊಲೆಯಾದ ಯಾಕೂಬ್ ಅವರ ತಂದೆ ಚಂದಪಾಷಾ ಕೋಲೂರ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ₹11,100 ನಗದು ವಶಪಡಿಸಿಕೊಂಡಿದ್ದಾರೆ.</p>.<p>ಡಿವೈಎಸ್ಪಿ ಕೆ.ಸಿ.ಲಕ್ಷ್ಮೀನಾರಾಯಣ, ವಿಜಯಪುರ ಗ್ರಾಮೀಣಸಿಪಿಐ ಎಸ್.ಬಿ.ಪಾಲಭಾವಿ, ಬಬಲೇಶ್ವರ ಪಿಎಸ್ಐ ಎಸ್.ಬಿ.ಗೌಡ್ರ ನೇತೃತ್ವದ ತನಿಖಾ ತಂಡವು ಆರೋಪಿಗಳನ್ನು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>