<p><strong>ಬೆಂಗಳೂರು</strong>: ಕನೇರಿಯ ಅದೃಶ್ಯ ಕಾಡ ಸಿದ್ದೇಶ್ವರ ಮಠದ ಸ್ವಾಮೀಜಿ ಅವರು ಅಶ್ಲೀಲ ಪದ ಬಳಕೆ ಮೂಲಕ ಸ್ತ್ರೀ ಸಮುದಾಯ, ಗುರು ಪರಂಪರೆಗೆ ಅವಮಾನ ಮಾಡಿದ್ದು ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ ಆಗ್ರಹಿಸಿದೆ.</p><p>ಸ್ವಾಮೀಜಿ ಅವರು ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿರುವುದನ್ನು ವಿರೋಧಿಸುವ ಮೂಲಕ ಬಿಜೆಪಿಯ ಕೆಲವು ನಾಯಕರು ಪರೋಕ್ಷವಾಗಿ ಸ್ವಾಮೀಜಿಯ ಬೆಂಬಲಕ್ಕೆ ನಿಂತಿದ್ದಾರೆ. ತಮಗೂ ತಾಯಂದಿರಿದ್ದಾರೆ ಎನ್ನುವುದನ್ನು ಬಿಜೆಪಿ ನಾಯಕರು ಮರೆಯಬಾರದು ಎಂದು ಬೆಳಗಾವಿ ಹಂದಿಗುಂದ ಮಠದ ಶಿವಾನಂದ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p><p>ಬಸವ ಸಂಸ್ಕೃತಿ ಉತ್ಸವವನ್ನು ಟೀಕಿಸುವ ಭರದಲ್ಲಿ ಸ್ವಾಮೀಜಿಗಳು ಸ್ತ್ರಿಯರನ್ನೇ ಅಷ್ಟೇ ಅಲ್ಲದೇ ಕಲಾವಿದರಿಗೂ ಅಗೌರವ ತೋರಿದ್ದಾರೆ. ಗುರುವೇ ಹೀಗೆ ಮಾತನಾಡಿದರೆ ಶಿಷ್ಯರ ಸ್ಥಿತಿ ಏನಾಗಬಹುದು ಎಂದು ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ ಪ್ರಶ್ನಿಸಿದರು.</p><p>ಅವರ ಹೇಳಿಕೆಯಿಂದ ಅಶಾಂತಿ ಉಂಟಾಗಬಾರದು ಎಂದು ವಿಜಯಪುರ ಡಿಸಿ ನಿರ್ಬಂಧ ಹೇರಿದ್ದಾರೆ. ಅವರ ನಡವಳಿಕೆ ಹೀಗೆಯೇ ಇದ್ದರೆ ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸದಂತೆ ನಿರ್ಬಂಧ ಹೇರಬಹುದು ಎಂದು ಎಚ್ಚರಿಸಿದರು.</p><p>ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಸಮಾಜದ ಪರವಾಗಿ ನಿರ್ಧಾರ ಕೈಗೊಂಡಿದ್ದಕ್ಕೆ ಗೌರವಿಸಲಾಗಿದೆ. ಇದನ್ನು ಬಿಟ್ಟರೇ ಯಾವುದೇ ಪಕ್ಷ, ನಾಯಕರ ಪರವಾಗಿ ಒಕ್ಕೂಟ ಇಲ್ಲ ಎಂದು ಭಾಲ್ಕಿ ಪಟ್ಟದ್ದೇವರು ಸ್ವಾಮೀಜಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕನೇರಿಯ ಅದೃಶ್ಯ ಕಾಡ ಸಿದ್ದೇಶ್ವರ ಮಠದ ಸ್ವಾಮೀಜಿ ಅವರು ಅಶ್ಲೀಲ ಪದ ಬಳಕೆ ಮೂಲಕ ಸ್ತ್ರೀ ಸಮುದಾಯ, ಗುರು ಪರಂಪರೆಗೆ ಅವಮಾನ ಮಾಡಿದ್ದು ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ ಆಗ್ರಹಿಸಿದೆ.</p><p>ಸ್ವಾಮೀಜಿ ಅವರು ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿರುವುದನ್ನು ವಿರೋಧಿಸುವ ಮೂಲಕ ಬಿಜೆಪಿಯ ಕೆಲವು ನಾಯಕರು ಪರೋಕ್ಷವಾಗಿ ಸ್ವಾಮೀಜಿಯ ಬೆಂಬಲಕ್ಕೆ ನಿಂತಿದ್ದಾರೆ. ತಮಗೂ ತಾಯಂದಿರಿದ್ದಾರೆ ಎನ್ನುವುದನ್ನು ಬಿಜೆಪಿ ನಾಯಕರು ಮರೆಯಬಾರದು ಎಂದು ಬೆಳಗಾವಿ ಹಂದಿಗುಂದ ಮಠದ ಶಿವಾನಂದ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p><p>ಬಸವ ಸಂಸ್ಕೃತಿ ಉತ್ಸವವನ್ನು ಟೀಕಿಸುವ ಭರದಲ್ಲಿ ಸ್ವಾಮೀಜಿಗಳು ಸ್ತ್ರಿಯರನ್ನೇ ಅಷ್ಟೇ ಅಲ್ಲದೇ ಕಲಾವಿದರಿಗೂ ಅಗೌರವ ತೋರಿದ್ದಾರೆ. ಗುರುವೇ ಹೀಗೆ ಮಾತನಾಡಿದರೆ ಶಿಷ್ಯರ ಸ್ಥಿತಿ ಏನಾಗಬಹುದು ಎಂದು ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ ಪ್ರಶ್ನಿಸಿದರು.</p><p>ಅವರ ಹೇಳಿಕೆಯಿಂದ ಅಶಾಂತಿ ಉಂಟಾಗಬಾರದು ಎಂದು ವಿಜಯಪುರ ಡಿಸಿ ನಿರ್ಬಂಧ ಹೇರಿದ್ದಾರೆ. ಅವರ ನಡವಳಿಕೆ ಹೀಗೆಯೇ ಇದ್ದರೆ ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸದಂತೆ ನಿರ್ಬಂಧ ಹೇರಬಹುದು ಎಂದು ಎಚ್ಚರಿಸಿದರು.</p><p>ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಸಮಾಜದ ಪರವಾಗಿ ನಿರ್ಧಾರ ಕೈಗೊಂಡಿದ್ದಕ್ಕೆ ಗೌರವಿಸಲಾಗಿದೆ. ಇದನ್ನು ಬಿಟ್ಟರೇ ಯಾವುದೇ ಪಕ್ಷ, ನಾಯಕರ ಪರವಾಗಿ ಒಕ್ಕೂಟ ಇಲ್ಲ ಎಂದು ಭಾಲ್ಕಿ ಪಟ್ಟದ್ದೇವರು ಸ್ವಾಮೀಜಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>