<p><strong>ಕಾಳಗಿ: </strong>ತೀರ್ಥಕ್ಷೇತ್ರ, ದಕ್ಷಿಣಕಾಶಿಯ ಆರಾಧ್ಯದೇವ ಇಲ್ಲಿನ ನೀಲಕಂಠ ಕಾಳೇಶ್ವರ ಜಾತ್ರೆಗೆ ಕೋವಿಡ್ ಕರಿನೆರಳು ಆವರಿಸಿ ಬುಧವಾರ ರಥೋತ್ಸವ ಜರುಗಲಿಲ್ಲ.</p>.<p>ಕಲಬುರ್ಗಿ, ಬೀದರ್, ಸೊಲ್ಲಾಪುರ, ಆಂಧ್ರ, ತೆಲಂಗಾಣದ ಅಪಾರ ಜನರ ಶ್ರದ್ಧಾ, ಭಕ್ತಿಯ ಸಂಗಮದೊಂದಿಗೆ ಪ್ರತಿವರ್ಷ ಕನಿಷ್ಠ ಇಪ್ಪತ್ತೈದು ದಿನ ಜರುಗುವ ಜಾತ್ರೆಗೆ ಕಳೆದವರ್ಷ ಕೋವಿಡ್ ಲಾಕ್ಡೌನ್ ಅಪ್ಪಳಿಸಿದ್ದರಿಂದಾಗಿ ಜಾತ್ರೆ ರದ್ದುಗೊಳಿಸಿತು. ಪ್ರಸ್ತುತ ವರ್ಷವೂ ಅದೇ ಪರಿಸ್ಥಿತಿ ನಿರ್ಮಾಣವಾಗಿ ಜಾತ್ರೆ ಕಳೆಗುಂದಿತು.</p>.<p>ಯುಗಾದಿ ಹಬ್ಬದ ದಿನ ಅರ್ಚಕರ ಮನೆಯಿಂದ ಪಲ್ಲಕ್ಕಿಯ ಆಗಮನದೊಂದಿಗೆ ಪ್ರಾರಂಭವಾಗುವ ಜಾತ್ರೆಯಲ್ಲಿ ಪಂಚಾಂಗ ವಾಚನ, ದೇವಸ್ಥಾನದ ಸುತ್ತಲು ನಿತ್ಯ ಪಲ್ಲಕ್ಕಿ ಪ್ರದಕ್ಷಿಣೆ, ಪ್ರಸಾದ ವಿತರಣೆ, ವಿಶೇಷ ಪೂಜೆ ನಡೆಯುತ್ತಿರುವ ಇಲ್ಲಿ ಎಲ್ಲವೂ ಮೌನವಾಗಿದ್ದವು.</p>.<p>ಸದಾ ಭಕ್ತರಿಂದ ತುಂಬಿತುಳುಕುವ ದೇವಸ್ಥಾನದಲ್ಲಿ ಸೋಮವಾರ ದೀಪೋತ್ಸವ, ಮಂಗಳವಾರ ಅಗ್ನಿಪೂಜೆ, ಬುಧವಾರ ರಥೋತ್ಸವ ಈ ಎಲ್ಲವೂ ಶಾಸ್ತ್ರಕ್ಕಷ್ಟೇ ಸೀಮಿತವಾದವು.</p>.<p>ಜನಜಂಗುಳಿ, ವಾದ್ಯಮೇಳಗಳ ಝೇಂಕಾರ ಮೊಳಗುತ್ತಿದ್ದ ದೇವಸ್ಥಾನದ ಪ್ರಾಂಗಣ ಯಾವುದೇ ಸಡಗರ ಸಂಭ್ರಮವಿಲ್ಲದೆ, ಭಕ್ತರಿಲ್ಲದೆ ಭಣಗಟ್ಟಿತು.</p>.<p>ಎರಡನೇ ವರ್ಷವು ದೇವಸ್ಥಾನ ಬಂದ್ ಆಗಿ ಜಾತ್ರೆ ರದ್ದಾಗಿದ್ದಕ್ಕೆ ತೀವ್ರ ಬೇಸರದಲ್ಲಿರುವ ಭಕ್ತಸ್ತೋಮ ದೇವಸ್ಥಾನದ ಕಡೆಗೆ ಸುಳಿಯದೆ ಮನೆಯೊಳಗಿದ್ದೆ ಹರಿಕೆ ಸಲ್ಲಿಸಿದರು.</p>.<p>ಗ್ರೇಡ್-2 ತಹಶೀಲ್ದಾರ್ ನಾಗನಾಥ ತರಗೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ ತೆಲಂಗ, ಸಿಪಿಐ ವಿನಾಯಕ ನಾಯಕ್ ಅವರು ಆಗಾಗ ದೇವಸ್ಥಾನದ ಕಡೆಗೆ ಮುಖಮಾಡಿ ಸಿಬ್ಬಂದಿ ಮೂಲಕ ಜಾತ್ರೆ ನಿಷೇಧದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದರು.</p>.<p>ಪ್ರತಿವರ್ಷ ರಥೋತ್ಸವದ ದಿನ ಬರುವ ಮಳೆ ಈ ದಿನವೂ ಅರ್ಧತಾಸು ಧರೆಗಿಳಿದು ಸಂಪ್ರದಾಯಕ್ಕೆ ಸಾಕ್ಷಿಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ: </strong>ತೀರ್ಥಕ್ಷೇತ್ರ, ದಕ್ಷಿಣಕಾಶಿಯ ಆರಾಧ್ಯದೇವ ಇಲ್ಲಿನ ನೀಲಕಂಠ ಕಾಳೇಶ್ವರ ಜಾತ್ರೆಗೆ ಕೋವಿಡ್ ಕರಿನೆರಳು ಆವರಿಸಿ ಬುಧವಾರ ರಥೋತ್ಸವ ಜರುಗಲಿಲ್ಲ.</p>.<p>ಕಲಬುರ್ಗಿ, ಬೀದರ್, ಸೊಲ್ಲಾಪುರ, ಆಂಧ್ರ, ತೆಲಂಗಾಣದ ಅಪಾರ ಜನರ ಶ್ರದ್ಧಾ, ಭಕ್ತಿಯ ಸಂಗಮದೊಂದಿಗೆ ಪ್ರತಿವರ್ಷ ಕನಿಷ್ಠ ಇಪ್ಪತ್ತೈದು ದಿನ ಜರುಗುವ ಜಾತ್ರೆಗೆ ಕಳೆದವರ್ಷ ಕೋವಿಡ್ ಲಾಕ್ಡೌನ್ ಅಪ್ಪಳಿಸಿದ್ದರಿಂದಾಗಿ ಜಾತ್ರೆ ರದ್ದುಗೊಳಿಸಿತು. ಪ್ರಸ್ತುತ ವರ್ಷವೂ ಅದೇ ಪರಿಸ್ಥಿತಿ ನಿರ್ಮಾಣವಾಗಿ ಜಾತ್ರೆ ಕಳೆಗುಂದಿತು.</p>.<p>ಯುಗಾದಿ ಹಬ್ಬದ ದಿನ ಅರ್ಚಕರ ಮನೆಯಿಂದ ಪಲ್ಲಕ್ಕಿಯ ಆಗಮನದೊಂದಿಗೆ ಪ್ರಾರಂಭವಾಗುವ ಜಾತ್ರೆಯಲ್ಲಿ ಪಂಚಾಂಗ ವಾಚನ, ದೇವಸ್ಥಾನದ ಸುತ್ತಲು ನಿತ್ಯ ಪಲ್ಲಕ್ಕಿ ಪ್ರದಕ್ಷಿಣೆ, ಪ್ರಸಾದ ವಿತರಣೆ, ವಿಶೇಷ ಪೂಜೆ ನಡೆಯುತ್ತಿರುವ ಇಲ್ಲಿ ಎಲ್ಲವೂ ಮೌನವಾಗಿದ್ದವು.</p>.<p>ಸದಾ ಭಕ್ತರಿಂದ ತುಂಬಿತುಳುಕುವ ದೇವಸ್ಥಾನದಲ್ಲಿ ಸೋಮವಾರ ದೀಪೋತ್ಸವ, ಮಂಗಳವಾರ ಅಗ್ನಿಪೂಜೆ, ಬುಧವಾರ ರಥೋತ್ಸವ ಈ ಎಲ್ಲವೂ ಶಾಸ್ತ್ರಕ್ಕಷ್ಟೇ ಸೀಮಿತವಾದವು.</p>.<p>ಜನಜಂಗುಳಿ, ವಾದ್ಯಮೇಳಗಳ ಝೇಂಕಾರ ಮೊಳಗುತ್ತಿದ್ದ ದೇವಸ್ಥಾನದ ಪ್ರಾಂಗಣ ಯಾವುದೇ ಸಡಗರ ಸಂಭ್ರಮವಿಲ್ಲದೆ, ಭಕ್ತರಿಲ್ಲದೆ ಭಣಗಟ್ಟಿತು.</p>.<p>ಎರಡನೇ ವರ್ಷವು ದೇವಸ್ಥಾನ ಬಂದ್ ಆಗಿ ಜಾತ್ರೆ ರದ್ದಾಗಿದ್ದಕ್ಕೆ ತೀವ್ರ ಬೇಸರದಲ್ಲಿರುವ ಭಕ್ತಸ್ತೋಮ ದೇವಸ್ಥಾನದ ಕಡೆಗೆ ಸುಳಿಯದೆ ಮನೆಯೊಳಗಿದ್ದೆ ಹರಿಕೆ ಸಲ್ಲಿಸಿದರು.</p>.<p>ಗ್ರೇಡ್-2 ತಹಶೀಲ್ದಾರ್ ನಾಗನಾಥ ತರಗೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ ತೆಲಂಗ, ಸಿಪಿಐ ವಿನಾಯಕ ನಾಯಕ್ ಅವರು ಆಗಾಗ ದೇವಸ್ಥಾನದ ಕಡೆಗೆ ಮುಖಮಾಡಿ ಸಿಬ್ಬಂದಿ ಮೂಲಕ ಜಾತ್ರೆ ನಿಷೇಧದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದರು.</p>.<p>ಪ್ರತಿವರ್ಷ ರಥೋತ್ಸವದ ದಿನ ಬರುವ ಮಳೆ ಈ ದಿನವೂ ಅರ್ಧತಾಸು ಧರೆಗಿಳಿದು ಸಂಪ್ರದಾಯಕ್ಕೆ ಸಾಕ್ಷಿಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>