ವಿಜಯಪುರ: ಕಾಂಗ್ರೆಸ್ ಮುಖಂಡ ಮಹಾದೇವ ಸಾಹುಕಾರ ಬೈರಗೊಂಡ ಅವರು ಚಲಿಸುತ್ತಿದ್ದ ಕಾರಿಗೆ ನ. 2ರಂದು ಕನ್ನಾಳ ಕ್ರಾಸ್ ಬಳಿ ಟಿಪ್ಪರ್ನಿಂದ ಡಿಕ್ಕಿ ಹೊಡೆಸಿ, ಗುಂಡಿನ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 13 ಜನರನ್ನು ಬಂಧಿಸಿದ್ದ ತನಿಖಾ ತಂಡವು, ಆರೋಪಿಗಳಾದ ವಿಜಯಪುರ ನಗರದ ಇಂಡಿ ರೋಡ್ನ ಬಂಬಳ ಅಗಸಿ ನಿವಾಸಿಗಳಾದ ಹಸನ್ ಡೋಂಗ್ರಿ ಉರುಫ್ ಡೋಂಗ್ರಿಸಾಬ ಬಡೇಗರ(24), ಕಲ್ಲಪ್ಪ ಉರುಫ್ ಮುದಕಪ್ಪ ಬಜಂತ್ರಿ(24) ಮತ್ತು ಈರಣ್ಣ ಬಜಂತ್ರಿ(21) ಬಂಧಿಸಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೂರು ಮೊಬೈಲ್ಗಳನ್ನು ವಶಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.