ಒಟ್ಟು 42 ಸದಸ್ಯ ಸ್ಥಾನ ಒಳಗೊಂಡಿರುವ ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ 20, ಕಾಂಗ್ರೆಸ್ 18, ಜೆಡಿಎಸ್ 3 ಮತ್ತು ಪಕ್ಷೇತರ 1 ಸದಸ್ಯರಿದ್ದಾರೆ. ಕಳೆದ ಎರಡು ಅವಧಿಯಲ್ಲಿ ಕಾಂಗ್ರೆಸ್ ಪಕ್ಷವು ಅಧ್ಯಕ್ಷ ಗಾದಿಯನ್ನು ಏರಿತ್ತು. ಇದೀಗ ಉಳಿದಿರುವ ಕೊನೆಯ ಅವಧಿಗೂ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಿದೆ. ಈ ನಡುವೆ ಸೋಮವಾರ ರಾತ್ರಿ ಕಾಂಗ್ರೆಸ್ನ ಬಬಲೇಶ್ವರ ಜಿ.ಪಂ. ಕ್ಷೇತ್ರದ ಸದಸ್ಯ ಉಮೇಶ್ ಕೋಳಕೂರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ. ಇತ್ತ ಬಿಜೆಪಿ ಸದಸ್ಯರು ಮೂರು ದಿನಗಳಿಂದ ಬಾಗಲಕೋಟೆಯ ರೆಸಾರ್ಟ್ ವೊಂದರಲ್ಲಿ ತಂಗಿದ್ದಾರೆ. ಇಬ್ಬರು ಬಿಜೆಪಿ ಸದಸ್ಯರನ್ನು ಕಾಂಗ್ರೆಸ್ ತನ್ನತ್ತ ಸೆಳೆದುಕೊಂಡಿದೆ. ಜೆಡಿಎಸ್ನ ಇಬ್ಬರು, ಕಾಂಗ್ರೆಸ್ನ ಮತ್ತೊಬ್ಬರು ಬಿಜೆಪಿ ಪರ ನಿಂತಿದ್ದಾರೆ.