ವಿಜಯಪುರ: ನಗರದ ‘ಪದ್ಮಶ್ರೀ’ ಕಾಕಾ ಕಾರಖಾನೀಸ್ ಸ್ಮಾರಕ ಪ್ರೌಢಶಾಲೆಯಲ್ಲಿ ಯುವ ಭಾರತ ಸಮಿತಿಯಿಂದ ಕೊರೊನಾ ಮೂರನೇ ಅಲೆ ಕುರಿತು ಜಾಗೃತಿ ಮೂಡಿಸಿ ಮಾಸ್ಕ್ ಹಂಚಲಾಯಿತು.
ಯುವ ಭಾರತ ಸಮಿತಿ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ಮಾತನಾಡಿ, ಜಗತ್ತನ್ನೆ ತಲ್ಲಣಗೊಳಿಸಿದ ಕೊರೊನಾ ವೈರಸ್ ಅನ್ನು ನಿಯಂತ್ರಣಕ್ಕೆ ತರಲು ಲಸಿಕೆ ನೀಡಲಾಗಿದೆ ಎಲ್ಲ ವಿದ್ಯಾರ್ಥಿಗಳು ಮೊದಲ ಹಾಗೂ ಎರಡನೇ ಹಂತದ ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಯಾರು ಕೂಡಾ ನಿರ್ಲಕ್ಷ್ಯತನ ತೋರಬಾರದು ಆರೋಗ್ಯ ಇಲಾಖೆಯ ಸಲಹೆ ಸೂಚನೆಗಳನ್ನು ಎಲ್ಲರು ತಪ್ಪದೆ ಪಾಲಿಸಬೇಕು ಎಂದರು.
ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಕಾಕಾ ಕಾರಖಾನಿಸ ಭಾವಚಿತ್ರವಿರುವ ’ದಿನ ದರ್ಶಿಕೆ’ ವಿತರಣೆ ಮಾಡಲಾಯಿತು.
ಶಾಲೆಯ ಸಿಬ್ಬಂದಿ ಎಸ್.ಬಿ.ಕುಂಬಾರ, ಎಂ.ಟಿ.ಕೊಟ್ಟಲಗಿ, ವೀಣಾ ಅಕ್ಕಲಕೋಟ, ಸಿಂತ್ರೆ ಗುರುಮಾತೆ ಹಾಗೂ ವಿನೋದಕುಮಾರ ಮಣೂರ ಉಪಸ್ಥಿತರಿದ್ದರು.