<p><strong>ಕಕ್ಕೇರಾ: </strong>ಅಂಗನವಾಡಿ ಕೇಂದ್ರಗಳ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೊಳಿಸಲು ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಮುಖ್ಯವಾಗಿದೆ ಎಂದು ಎಸಿಡಿಪಿಒ ಮೀನಾಕ್ಷಿ ಪಾಟೀಲ ಹೇಳಿದರು.</p>.<p>ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜುದಲ್ಲಿ ಕೆಕೆಆರ್ಡಿಬಿ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲಿಕೆ ಟಾಟಾ ಟ್ರಸ್ಟ್ ಇವರ ಆಶ್ರಯದಲ್ಲಿ ಈಚೆಗೆ ಜರುಗಿದ ಅಂಗನವಾಡಿ ಕಾರ್ಯಕರ್ತೆ ಯರಿಗೆ 3 ದಿನಗಳ ತರಬೇತಿಯಲ್ಲಿ ಅವರು ಮಾತನಾಡಿದರು.</p>.<p>ಅಂಗನವಾಡಿ ಕೇಂದ್ರಗಳು ಮೂರು ವರ್ಷದ ಮಗುವಿನಿಂದ ಆರು ವರ್ಷಗಳವರೆಗೆ ಶಾಲಾ ಪೂರ್ವ ಶಿಕ್ಷಣ ಪಡೆಯಲು ಅರ್ಹವಾಗಿರುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಆ ಮಗುವಿಗೆ ಶಿಕ್ಷಣ ನೀಡುವ ಮೂಲಕ ಮಾನಸಿಕ, ದೈಹಿಕ, ಸಾಮಾಜಿಕ ಬೆಳವಣಿಗೆ ಶ್ರಮಿಸಬೇಕು ಎಂದು ಹೇಳಿದರು.</p>.<p>‘ಓದುವ-ಬರೆಯುವ ಮರಳಿ ಹೇಳಿದ ಪದದ ಚಟುವಟಿಕೆ, ಅಂಕಿ-ಸಂಖ್ಯೆಗಳ ಕಲಿಸುವ, ಒಂದು ಮಗು ಅಂಕಿಗಳ ಹೆಸರುಗಳನ್ನು ಹೇಳುವ, ಶಬ್ದದಲ್ಲಿ ಎಷ್ಟು ವ್ಯತ್ಯಾಸ, ಮೂರು ವಿಧಗಳು, ಆಟ, ಸಂಗೀತ, ನಾಟ್ಯ, ಮೆದುಳಿನ ಚಿತ್ತ, ಬೆಳವಣಿಗೆ, ಜೋಡಣೆ ಹಾಗೂ ಭಾಷೆಯ ಜೊತೆಗೆ ವಿವಿಧ ರೀತಿಯ ಅನುಭವಗಳನ್ನು ಮಕ್ಕಳಿಗೆ ಹೇಳಬೇಕು ಎಂದರು.</p>.<p>ಭಾಷಾ ಕೌಶಲ್ಯ ಬೆಳೆಸುವ ಚಟುವಟಿಕೆ, ಕೃಷಿಗೆ ಸಂಬಂಧಿಸಿದ ವಸ್ತುಗಳ ಪರಿಚಯಗಳನ್ನು ಮಕ್ಕಳಿಗೆ ತಿಳುವಳಿಕೆ ನೀಡುವುದು ಈ ತರಬೇತಿಯ ಉದ್ದೇಶಗಳಾಗಿವೆ ಎಂದು ತಿಳಿಸಿದರು.</p>.<p>3 ದಿನಗಳವರೆಗೆ ವಲಯದ 41 ಅಂಗನವಾಡಿ ಕಾರ್ಯಕರ್ತೆಯರು ತರಬೇತಿಯ ಮಾಹಿತಿಗಳನ್ನು ಪಡೆದುಕೊಂಡು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದರು.</p>.<p>ಜಿಲ್ಲಾ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್, ಅಂಗನವಾಡಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸವಿತಾ, ಉಪತಹಶೀಲ್ದಾರ್ ರೇವಪ್ಪತೆಗ್ಗಿನಮನಿ, ಅಂಗನವಾಡಿ ಮೇಲ್ವಿಚಾರಕರಾದ ಶೋಭಾ ಸಜ್ಜನ್, ಲಕ್ಷ್ಮೀಬಾಯಿ ಚವ್ಹಾಣ, ಕಂದಾಯ ಸಿಬ್ಬಂದಿಗಳಾದಸಂಗಮೇಶ, ವಿಠಲ್ ಬಂದಾಳ್, ಸಂತೋಷರಡ್ಡಿ ಸೇರಿದಂತೆ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಕ್ಕೇರಾ: </strong>ಅಂಗನವಾಡಿ ಕೇಂದ್ರಗಳ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೊಳಿಸಲು ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಮುಖ್ಯವಾಗಿದೆ ಎಂದು ಎಸಿಡಿಪಿಒ ಮೀನಾಕ್ಷಿ ಪಾಟೀಲ ಹೇಳಿದರು.</p>.<p>ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜುದಲ್ಲಿ ಕೆಕೆಆರ್ಡಿಬಿ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲಿಕೆ ಟಾಟಾ ಟ್ರಸ್ಟ್ ಇವರ ಆಶ್ರಯದಲ್ಲಿ ಈಚೆಗೆ ಜರುಗಿದ ಅಂಗನವಾಡಿ ಕಾರ್ಯಕರ್ತೆ ಯರಿಗೆ 3 ದಿನಗಳ ತರಬೇತಿಯಲ್ಲಿ ಅವರು ಮಾತನಾಡಿದರು.</p>.<p>ಅಂಗನವಾಡಿ ಕೇಂದ್ರಗಳು ಮೂರು ವರ್ಷದ ಮಗುವಿನಿಂದ ಆರು ವರ್ಷಗಳವರೆಗೆ ಶಾಲಾ ಪೂರ್ವ ಶಿಕ್ಷಣ ಪಡೆಯಲು ಅರ್ಹವಾಗಿರುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಆ ಮಗುವಿಗೆ ಶಿಕ್ಷಣ ನೀಡುವ ಮೂಲಕ ಮಾನಸಿಕ, ದೈಹಿಕ, ಸಾಮಾಜಿಕ ಬೆಳವಣಿಗೆ ಶ್ರಮಿಸಬೇಕು ಎಂದು ಹೇಳಿದರು.</p>.<p>‘ಓದುವ-ಬರೆಯುವ ಮರಳಿ ಹೇಳಿದ ಪದದ ಚಟುವಟಿಕೆ, ಅಂಕಿ-ಸಂಖ್ಯೆಗಳ ಕಲಿಸುವ, ಒಂದು ಮಗು ಅಂಕಿಗಳ ಹೆಸರುಗಳನ್ನು ಹೇಳುವ, ಶಬ್ದದಲ್ಲಿ ಎಷ್ಟು ವ್ಯತ್ಯಾಸ, ಮೂರು ವಿಧಗಳು, ಆಟ, ಸಂಗೀತ, ನಾಟ್ಯ, ಮೆದುಳಿನ ಚಿತ್ತ, ಬೆಳವಣಿಗೆ, ಜೋಡಣೆ ಹಾಗೂ ಭಾಷೆಯ ಜೊತೆಗೆ ವಿವಿಧ ರೀತಿಯ ಅನುಭವಗಳನ್ನು ಮಕ್ಕಳಿಗೆ ಹೇಳಬೇಕು ಎಂದರು.</p>.<p>ಭಾಷಾ ಕೌಶಲ್ಯ ಬೆಳೆಸುವ ಚಟುವಟಿಕೆ, ಕೃಷಿಗೆ ಸಂಬಂಧಿಸಿದ ವಸ್ತುಗಳ ಪರಿಚಯಗಳನ್ನು ಮಕ್ಕಳಿಗೆ ತಿಳುವಳಿಕೆ ನೀಡುವುದು ಈ ತರಬೇತಿಯ ಉದ್ದೇಶಗಳಾಗಿವೆ ಎಂದು ತಿಳಿಸಿದರು.</p>.<p>3 ದಿನಗಳವರೆಗೆ ವಲಯದ 41 ಅಂಗನವಾಡಿ ಕಾರ್ಯಕರ್ತೆಯರು ತರಬೇತಿಯ ಮಾಹಿತಿಗಳನ್ನು ಪಡೆದುಕೊಂಡು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದರು.</p>.<p>ಜಿಲ್ಲಾ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್, ಅಂಗನವಾಡಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸವಿತಾ, ಉಪತಹಶೀಲ್ದಾರ್ ರೇವಪ್ಪತೆಗ್ಗಿನಮನಿ, ಅಂಗನವಾಡಿ ಮೇಲ್ವಿಚಾರಕರಾದ ಶೋಭಾ ಸಜ್ಜನ್, ಲಕ್ಷ್ಮೀಬಾಯಿ ಚವ್ಹಾಣ, ಕಂದಾಯ ಸಿಬ್ಬಂದಿಗಳಾದಸಂಗಮೇಶ, ವಿಠಲ್ ಬಂದಾಳ್, ಸಂತೋಷರಡ್ಡಿ ಸೇರಿದಂತೆ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>