<p><strong>ಗುರುಮಠಕಲ್ (ಯಾದಗಿರಿ ಜಿಲ್ಲೆ):</strong> ಸಮೀಪದ ಬೂದೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳನ್ನು ಕೂರಿಸಿ ಬೀಗಹಾಕಿಕೊಂಡು ಜಮೀನಿಗೆ ತೆರಳಿದ್ದ ಅಂಗನವಾಡಿ ಸಹಾಯಕಿ ಸಾವಿತ್ರಮ್ಮ ಸಾಬಣ್ಣ ಅವರ ಗೌರವ ಮಾನ್ಯತೆ ಆದೇಶ ಹಿಂಪಡೆಯುವಂತೆ ಸಿಡಿಪಿಒ ಶರಣಬಸವ ಅವರು ಶನಿವಾರ ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.</p>.<p>ಜುಲೈ 30ರಂದು ಅಂಗನವಾಡಿ ಕಾರ್ಯಕರ್ತೆ ಸರೋಜಮ್ಮ ಅವರು ವಲಯಮಟ್ಟದ ಸಭೆಗೆ ತೆರಳಿದ್ದರು. ಅದೇ ದಿನ ಸಾವಿತ್ರಮ್ಮ ಅವರು ಮಕ್ಕಳನ್ನು ಅಂಗನವಾಡಿಯಲ್ಲಿ ಕೂಡಿಹಾಕಿ ತಮ್ಮ ಜಮೀನಿಗೆ ಹೋಗಿದ್ದರು. ಮಕ್ಕಳು ಅಳುವುದನ್ನು ಕೇಳಿ ಗ್ರಾಮಸ್ಥರು ಹತ್ತಿರ ಬಂದು, ಬಳಿಕ ಅಧಿಕಾರಿಗಳ ಗಮನಕ್ಕೆ ತಂದಿದ್ದರು.</p>.<p>ಸಿಡಿಪಿಒ ಶರಣಬಸವ ಮತ್ತು ಅಂಗನವಾಡಿ ಮೇಲ್ವಿಚಾರಕಿ ಗಂಗೂಬಾಯಿ ಅವರು ಅಂಗನವಾಡಿಗೆ ಭೇಟಿ ನೀಡಿ, ಪರಿಶೀಲಿಸಿದರು. ಸಾವಿತ್ರಮ್ಮ ಅವರು ಕರ್ತವ್ಯ ಬೇಜವಾಬ್ದಾರಿ ತೋರಿದ್ದು, ಅವರ ಗೌರವ ಮಾನ್ಯತಾ ಆದೇಶ ಹಿಂಪಡೆಯುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್ (ಯಾದಗಿರಿ ಜಿಲ್ಲೆ):</strong> ಸಮೀಪದ ಬೂದೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳನ್ನು ಕೂರಿಸಿ ಬೀಗಹಾಕಿಕೊಂಡು ಜಮೀನಿಗೆ ತೆರಳಿದ್ದ ಅಂಗನವಾಡಿ ಸಹಾಯಕಿ ಸಾವಿತ್ರಮ್ಮ ಸಾಬಣ್ಣ ಅವರ ಗೌರವ ಮಾನ್ಯತೆ ಆದೇಶ ಹಿಂಪಡೆಯುವಂತೆ ಸಿಡಿಪಿಒ ಶರಣಬಸವ ಅವರು ಶನಿವಾರ ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.</p>.<p>ಜುಲೈ 30ರಂದು ಅಂಗನವಾಡಿ ಕಾರ್ಯಕರ್ತೆ ಸರೋಜಮ್ಮ ಅವರು ವಲಯಮಟ್ಟದ ಸಭೆಗೆ ತೆರಳಿದ್ದರು. ಅದೇ ದಿನ ಸಾವಿತ್ರಮ್ಮ ಅವರು ಮಕ್ಕಳನ್ನು ಅಂಗನವಾಡಿಯಲ್ಲಿ ಕೂಡಿಹಾಕಿ ತಮ್ಮ ಜಮೀನಿಗೆ ಹೋಗಿದ್ದರು. ಮಕ್ಕಳು ಅಳುವುದನ್ನು ಕೇಳಿ ಗ್ರಾಮಸ್ಥರು ಹತ್ತಿರ ಬಂದು, ಬಳಿಕ ಅಧಿಕಾರಿಗಳ ಗಮನಕ್ಕೆ ತಂದಿದ್ದರು.</p>.<p>ಸಿಡಿಪಿಒ ಶರಣಬಸವ ಮತ್ತು ಅಂಗನವಾಡಿ ಮೇಲ್ವಿಚಾರಕಿ ಗಂಗೂಬಾಯಿ ಅವರು ಅಂಗನವಾಡಿಗೆ ಭೇಟಿ ನೀಡಿ, ಪರಿಶೀಲಿಸಿದರು. ಸಾವಿತ್ರಮ್ಮ ಅವರು ಕರ್ತವ್ಯ ಬೇಜವಾಬ್ದಾರಿ ತೋರಿದ್ದು, ಅವರ ಗೌರವ ಮಾನ್ಯತಾ ಆದೇಶ ಹಿಂಪಡೆಯುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>