<p><strong>ವಡಗೇರಾ:</strong> ಪಟ್ಟಣದಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಯಾದಗಿರಿ ನಗರದ ವಿವಿಧ ಕಾಲೇಜುಗಳಿಗೆ ತರಳುತ್ತಾರೆ. ಆದರೆ ಮಂಗಳವಾರ ಬಸ್ಸುಗಳು ರದ್ದಾದ ಕಾರಣ ಅನೇಕ ವಿದ್ಯಾರ್ಥಿಗಳು ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.</p><p>ರದ್ದಾದ ಬಸ್ಸುಗಳು: ಈ ಹಿಂದೆ ವಡಗೇರಾ–ಹೈದರಾಬಾದ, ವಡಗೇರಾ–ಕಲಬುರಗಿ, ವಡಗೇರಾ–ಯಾದಗಿರಿ ಬಸ್ಸುಗಳು ಬೆಳಿಗ್ಗೆ 7.30ಕ್ಕೆ ವಡಗೇರಾ ದಿಂದ ಜಿಲ್ಲಾ ಕೇಂದ್ರಕ್ಕೆ ಸಂಚರಿಸುತಿದ್ದವು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಆದರೆ ಈ ಬಸ್ಸುಗಳು ರದ್ದಾಗಿರುವುದರಿಂದ ನಮಗೆ ಸಮಸ್ಯೆಯಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.</p><p>ಸಂಗಮ್, ಬೆಂಡೆಬೆಂಬಳಿ ಯಿಂದ ಬರುವ ಬಸ್ಸುಗಳು ಬೆಳಿಗ್ಗೆ ತುಂಬಿ ತುಳುಕುತ್ತಾ ಬರುತ್ತವೆ. ಇದರಿಂದ ವಡಗೇರಾ ಪಟ್ಟಣದ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಬಸ್ನಲ್ಲಿ ಹತ್ತಲು ಸಾಧ್ಯವಾಗಲ್ಲ.</p><p>ಬಸ್ ಸಮಸ್ಯೆ: ವಡಗೇರಾ–ಯಾದಗಿರಿ ನಡುವೆ ಬಸ್ ಮೊದಲು ಸಂಚರಿಸುತಿತ್ತು. ಆದರೆ ಆ ಬಸ್ ಸಂಚಾರವನ್ನು ತುಮಕೂರು ಗ್ರಾಮದವರೆಗೆ ವಿಸ್ತರಿಸಿದ್ದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಬಸ್ನಲ್ಲಿ ಸ್ಥಳವಕಾಶವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ.</p><p>ಅಕ್ಟೋಬರ್ 18 ರಂದು ಸಕಾಲದಲ್ಲಿ ಬಸ್ ಕಲ್ಪಿಸುವಂತೆ ವಿದ್ಯಾರ್ಥಿಗಳು ಯಾದಗಿರಿಯ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿದ್ದರು. ಆದರೆ ವಿದ್ಯಾರ್ಥಿಗಳ ಮನವಿ ಸ್ಪಂದಿಸದ ಘಟಕ ವ್ಯವಸ್ಥಾಪಕರು ಅನೇಕ ಬಸ್ಸುಗಳನ್ನು ರದ್ದುಪಡಿಸಿ ವಿದ್ಯಾರ್ಥಿಗಳ ಭವಿಷ್ಯದ ಜತೆ ಚಲ್ಲಾಟವಾಡುತಿದ್ದಾರೆ ಎಂದು ಪಾಲಕರು ದೂರಿದರು.</p><p>ನೂತನ ತಾಲ್ಲೂಕು ವಡಗೇರಾದಿಂದ ಯಾದಗಿರಿಗೆ ಬೆಳಿಗ್ಗೆ ಬಸ್ ಸಂಚಾರವನ್ನು ಆರಂಭಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.</p>.<div><blockquote>ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಕಂಟ್ರೋಲ್ ಪಾಯಿಂಟ್ನಲ್ಲಿ ಇರುವ ಚಾರ್ಟ್ನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಮಾಡಲಾಗುವುದು</blockquote><span class="attribution">ವಿ.ಆರ್. ರೆಡ್ಡಿ, ಡಿಟಿಒ ಯಾದಗಿರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡಗೇರಾ:</strong> ಪಟ್ಟಣದಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಯಾದಗಿರಿ ನಗರದ ವಿವಿಧ ಕಾಲೇಜುಗಳಿಗೆ ತರಳುತ್ತಾರೆ. ಆದರೆ ಮಂಗಳವಾರ ಬಸ್ಸುಗಳು ರದ್ದಾದ ಕಾರಣ ಅನೇಕ ವಿದ್ಯಾರ್ಥಿಗಳು ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.</p><p>ರದ್ದಾದ ಬಸ್ಸುಗಳು: ಈ ಹಿಂದೆ ವಡಗೇರಾ–ಹೈದರಾಬಾದ, ವಡಗೇರಾ–ಕಲಬುರಗಿ, ವಡಗೇರಾ–ಯಾದಗಿರಿ ಬಸ್ಸುಗಳು ಬೆಳಿಗ್ಗೆ 7.30ಕ್ಕೆ ವಡಗೇರಾ ದಿಂದ ಜಿಲ್ಲಾ ಕೇಂದ್ರಕ್ಕೆ ಸಂಚರಿಸುತಿದ್ದವು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಆದರೆ ಈ ಬಸ್ಸುಗಳು ರದ್ದಾಗಿರುವುದರಿಂದ ನಮಗೆ ಸಮಸ್ಯೆಯಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.</p><p>ಸಂಗಮ್, ಬೆಂಡೆಬೆಂಬಳಿ ಯಿಂದ ಬರುವ ಬಸ್ಸುಗಳು ಬೆಳಿಗ್ಗೆ ತುಂಬಿ ತುಳುಕುತ್ತಾ ಬರುತ್ತವೆ. ಇದರಿಂದ ವಡಗೇರಾ ಪಟ್ಟಣದ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಬಸ್ನಲ್ಲಿ ಹತ್ತಲು ಸಾಧ್ಯವಾಗಲ್ಲ.</p><p>ಬಸ್ ಸಮಸ್ಯೆ: ವಡಗೇರಾ–ಯಾದಗಿರಿ ನಡುವೆ ಬಸ್ ಮೊದಲು ಸಂಚರಿಸುತಿತ್ತು. ಆದರೆ ಆ ಬಸ್ ಸಂಚಾರವನ್ನು ತುಮಕೂರು ಗ್ರಾಮದವರೆಗೆ ವಿಸ್ತರಿಸಿದ್ದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಬಸ್ನಲ್ಲಿ ಸ್ಥಳವಕಾಶವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ.</p><p>ಅಕ್ಟೋಬರ್ 18 ರಂದು ಸಕಾಲದಲ್ಲಿ ಬಸ್ ಕಲ್ಪಿಸುವಂತೆ ವಿದ್ಯಾರ್ಥಿಗಳು ಯಾದಗಿರಿಯ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿದ್ದರು. ಆದರೆ ವಿದ್ಯಾರ್ಥಿಗಳ ಮನವಿ ಸ್ಪಂದಿಸದ ಘಟಕ ವ್ಯವಸ್ಥಾಪಕರು ಅನೇಕ ಬಸ್ಸುಗಳನ್ನು ರದ್ದುಪಡಿಸಿ ವಿದ್ಯಾರ್ಥಿಗಳ ಭವಿಷ್ಯದ ಜತೆ ಚಲ್ಲಾಟವಾಡುತಿದ್ದಾರೆ ಎಂದು ಪಾಲಕರು ದೂರಿದರು.</p><p>ನೂತನ ತಾಲ್ಲೂಕು ವಡಗೇರಾದಿಂದ ಯಾದಗಿರಿಗೆ ಬೆಳಿಗ್ಗೆ ಬಸ್ ಸಂಚಾರವನ್ನು ಆರಂಭಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.</p>.<div><blockquote>ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಕಂಟ್ರೋಲ್ ಪಾಯಿಂಟ್ನಲ್ಲಿ ಇರುವ ಚಾರ್ಟ್ನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಮಾಡಲಾಗುವುದು</blockquote><span class="attribution">ವಿ.ಆರ್. ರೆಡ್ಡಿ, ಡಿಟಿಒ ಯಾದಗಿರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>