‘ದಕ್ಷಿಣ ಕನ್ನಡದ ಶಿರಸಿ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ನಿಷೇಧ ಹೇರಿದ್ದ ಘಟನೆ ಎಲ್ಲೆಡೆ ಪ್ರಭಾವ ಬೀರುತ್ತದೆ ಎನ್ನುವ ನಿರೀಕ್ಷೆ ಇಲ್ಲಿ ಹುಸಿಯಾಗಿದೆ. ರೈತರು ಹಾಗೂ ವರ್ತಕರು ಎತ್ತು, ಹೋರಿಗಳನ್ನು ಖರೀದಿಸಲು ಜಾತ್ರೆಗೆ ಆಗಮಿಸಿದ್ದಾರೆ. ರೈತರು ಕೃಷಿ ಪರಿಕರಗಳನ್ನು ಖರೀದಿಸುವ ಜೊತೆಗೆ ಜಾನುವಾರುಗಳಿಗೆ ಬೇಕಾಗುವ ಹಗ್ಗ, ಮಗಡ, ಬಾರುಕೋಲು, ಗೆಜ್ಜೆ, ಬಾರು, ಮೂಗುದಾಣಿ ಹೀಗೆ ವಿವಿಧ ಸಾಮಗ್ರಿಗಳನ್ನು ಮುಸ್ಲಿಂ ಸಮುದಾಯದವರು ಹಾಕಿದ ಮಳಿಗೆಯಲ್ಲಿ ಖರೀದಿಸಿದರು.