<p><strong>ಯಾದಗಿರಿ: </strong>ಜಿಲ್ಲೆಯಲ್ಲಿ ಶನಿವಾರ ಪತ್ತೆಯಾದ 72 ಕೊರೊನಾ ಸೋಂಕು ಪ್ರಕರಣಗಳಲ್ಲಿ 15 ಮಕ್ಕಳಲ್ಲಿ ಕೋವಿಡ್–19 ಪತ್ತೆಯಾಗಿದೆ.</p>.<p>ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರಲ್ಲಿ ಮಕ್ಕಳು ಇದ್ದಾರೆ. ಅವರನ್ನು ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿದೆ. ಅಲ್ಲಿಯೇ ಕೊರೊನಾ ಸೋಂಕು ವಕ್ಕರಿಸಿದೆ.1 ವರ್ಷದ ಬಾಲಕಿಯಿಂದ ಹಿಡಿದು 14 ವರ್ಷದ ಬಾಲಕನವರೆಗೆ ಕೊರೊನಾ ಸೋಂಕು ಪತ್ತೆಯಾಗಿದೆ.</p>.<p><strong>ಬಾಲಕಿಯರ ವಿವರ:</strong>10 ವರ್ಷದ ಬಾಲಕಿ (ಪಿ-1751),6 ವರ್ಷದ ಬಾಲಕಿ (ಪಿ-1755), 1 ವರ್ಷದ ಬಾಲಕಿ (ಪಿ-1756), 8 ವರ್ಷದ ಬಾಲಕಿ (ಪಿ-1762), 7 ವರ್ಷದ ಬಾಲಕಿ (ಪಿ-1870), 2 ವರ್ಷದ ಬಾಲಕಿ (ಪಿ-1874), 8 ವರ್ಷದ ಬಾಲಕಿ (ಪಿ-1880), 6 ವರ್ಷದ ಬಾಲಕಿ (ಪಿ-1881), 10 ವರ್ಷದ ಬಾಲಕಿ (ಪಿ-1885), 9 ವರ್ಷದ ಬಾಲಕಿ (ಪಿ-1903)ಯರಲ್ಲಿ ಕೊರೊನಾ ದೃಢಪಟ್ಟಿದೆ.</p>.<p><strong>ಬಾಲಕರ ವಿವರ:</strong>8 ವರ್ಷದ ಬಾಲಕ (ಪಿ-1750), 11 ವರ್ಷದ ಬಾಲಕ (ಪಿ-1753),2 ವರ್ಷದ ಬಾಲಕ (ಪಿ-1855), 14 ವರ್ಷದ ಬಾಲಕ (ಪಿ-1863), 7 ವರ್ಷದ ಬಾಲಕ (ಪಿ-1904) ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ.</p>.<p><strong>ದುಖಾನ್ವಾಡಿ ಸೀಲ್ಡೌನ್:</strong>ನಗರದದುಖಾನ್ವಾಡಿಯಲ್ಲಿ ಸೀಲ್ಡೌನ್ ಮಾಡಲಾಗಿದ್ದು, ಜನರು ಹೊರ ಬರದಂತೆ ಪೊಲೀಸರು ಮನವಿ ಮಾಡುತ್ತಿದ್ದಾರೆ. ಇಲ್ಲಿರುವ ಇಬ್ಬರಿಗೆ ಸೋಂಕು ತಗುಲಿದೆ. ಹೀಗಾಗಿ ಸೀಲ್ಡೌನ್ ಮಾಡಲಾಗಿದೆಎನ್ನಲಾಗುತ್ತಿದೆ.</p>.<p><strong>ಮಾಹಿತಿ ನೀಡದ ಜಿಲ್ಲಾಡಳಿತ:</strong>72 ಪ್ರಕರಣಗಳು ಪತ್ತೆಯಾಗಿರುವ ವಿಷಯವನ್ನು ಮಾತ್ರ ಜಿಲ್ಲಾಡಳಿತ ಪ್ರಕಟಿಸಿದ್ದು, ಯಾವ ಕ್ವಾರಂಟೈನ್ ಕೇಂದ್ರದಲ್ಲಿ ಸೋಂಕು ಪತ್ತೆಯಾಗಿದೆ ಎನ್ನುವುದನ್ನು ತಿಳಿಯಪಡಿಸಿಲ್ಲ. ಆದರೆ, ಈ ಕುರಿತುವಾಟ್ಸ್ ಆ್ಯಪ್ಗಳಲ್ಲಿ ಸಂದೇಶಗಳು ವೈರಲ್ ಆಗಿವೆ. ಕನ್ಯಾಕೊಳ್ಳುರಿನ ಬಿಸಿಎಂ ಹಾಸ್ಟೆಲ್ನಲ್ಲಿ55, 5 ಕಂದಕೂರ, 8 ಯಾದಗಿರಿ ನಗರ, 1 ಮಗ್ದಮಪುರ ತಾಂಡಾ, 3 ಅರಕೇರಾದಲ್ಲಿ ಸೋಂಕು ಹರಡಿದೆ ಎಂದು ಸಂದೇಶಗಳು ಹರಿದಾಡುತ್ತಿವೆ.</p>.<p>ಮೊದಲಿನಿಂದಲೂ ಕೊರೊನಾ ಪೀಡಿತರ ಪ್ರಾಥಮಿಕ, ದ್ವಿತೀಯ ಸಂಪರ್ಕ ತಿಳಿಯಪಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಇಂಥ ವಿಷಯಗಳನ್ನು ಮುಚ್ಚಿಡುವುದರಿಂದ ಮತ್ತಷ್ಟು ಸೋಂಕು ಹರಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.</p>.<p>***<br />ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಕೇಂದ್ರಗಳಲ್ಲಿರುವ ಗರ್ಭಿಣಿ, ಬಾಣಂತಿ, ಮಕ್ಕಳ ಗಂಟಲಿನ ದ್ರವ ಮಾದರಿ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ಮಕ್ಕಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ.<br /><em><strong>-ಡಾ.ಎಂ.ಎಸ್.ಪಾಟೀಲ, ಡಿಎಚ್ಒ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ಜಿಲ್ಲೆಯಲ್ಲಿ ಶನಿವಾರ ಪತ್ತೆಯಾದ 72 ಕೊರೊನಾ ಸೋಂಕು ಪ್ರಕರಣಗಳಲ್ಲಿ 15 ಮಕ್ಕಳಲ್ಲಿ ಕೋವಿಡ್–19 ಪತ್ತೆಯಾಗಿದೆ.</p>.<p>ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರಲ್ಲಿ ಮಕ್ಕಳು ಇದ್ದಾರೆ. ಅವರನ್ನು ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿದೆ. ಅಲ್ಲಿಯೇ ಕೊರೊನಾ ಸೋಂಕು ವಕ್ಕರಿಸಿದೆ.1 ವರ್ಷದ ಬಾಲಕಿಯಿಂದ ಹಿಡಿದು 14 ವರ್ಷದ ಬಾಲಕನವರೆಗೆ ಕೊರೊನಾ ಸೋಂಕು ಪತ್ತೆಯಾಗಿದೆ.</p>.<p><strong>ಬಾಲಕಿಯರ ವಿವರ:</strong>10 ವರ್ಷದ ಬಾಲಕಿ (ಪಿ-1751),6 ವರ್ಷದ ಬಾಲಕಿ (ಪಿ-1755), 1 ವರ್ಷದ ಬಾಲಕಿ (ಪಿ-1756), 8 ವರ್ಷದ ಬಾಲಕಿ (ಪಿ-1762), 7 ವರ್ಷದ ಬಾಲಕಿ (ಪಿ-1870), 2 ವರ್ಷದ ಬಾಲಕಿ (ಪಿ-1874), 8 ವರ್ಷದ ಬಾಲಕಿ (ಪಿ-1880), 6 ವರ್ಷದ ಬಾಲಕಿ (ಪಿ-1881), 10 ವರ್ಷದ ಬಾಲಕಿ (ಪಿ-1885), 9 ವರ್ಷದ ಬಾಲಕಿ (ಪಿ-1903)ಯರಲ್ಲಿ ಕೊರೊನಾ ದೃಢಪಟ್ಟಿದೆ.</p>.<p><strong>ಬಾಲಕರ ವಿವರ:</strong>8 ವರ್ಷದ ಬಾಲಕ (ಪಿ-1750), 11 ವರ್ಷದ ಬಾಲಕ (ಪಿ-1753),2 ವರ್ಷದ ಬಾಲಕ (ಪಿ-1855), 14 ವರ್ಷದ ಬಾಲಕ (ಪಿ-1863), 7 ವರ್ಷದ ಬಾಲಕ (ಪಿ-1904) ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ.</p>.<p><strong>ದುಖಾನ್ವಾಡಿ ಸೀಲ್ಡೌನ್:</strong>ನಗರದದುಖಾನ್ವಾಡಿಯಲ್ಲಿ ಸೀಲ್ಡೌನ್ ಮಾಡಲಾಗಿದ್ದು, ಜನರು ಹೊರ ಬರದಂತೆ ಪೊಲೀಸರು ಮನವಿ ಮಾಡುತ್ತಿದ್ದಾರೆ. ಇಲ್ಲಿರುವ ಇಬ್ಬರಿಗೆ ಸೋಂಕು ತಗುಲಿದೆ. ಹೀಗಾಗಿ ಸೀಲ್ಡೌನ್ ಮಾಡಲಾಗಿದೆಎನ್ನಲಾಗುತ್ತಿದೆ.</p>.<p><strong>ಮಾಹಿತಿ ನೀಡದ ಜಿಲ್ಲಾಡಳಿತ:</strong>72 ಪ್ರಕರಣಗಳು ಪತ್ತೆಯಾಗಿರುವ ವಿಷಯವನ್ನು ಮಾತ್ರ ಜಿಲ್ಲಾಡಳಿತ ಪ್ರಕಟಿಸಿದ್ದು, ಯಾವ ಕ್ವಾರಂಟೈನ್ ಕೇಂದ್ರದಲ್ಲಿ ಸೋಂಕು ಪತ್ತೆಯಾಗಿದೆ ಎನ್ನುವುದನ್ನು ತಿಳಿಯಪಡಿಸಿಲ್ಲ. ಆದರೆ, ಈ ಕುರಿತುವಾಟ್ಸ್ ಆ್ಯಪ್ಗಳಲ್ಲಿ ಸಂದೇಶಗಳು ವೈರಲ್ ಆಗಿವೆ. ಕನ್ಯಾಕೊಳ್ಳುರಿನ ಬಿಸಿಎಂ ಹಾಸ್ಟೆಲ್ನಲ್ಲಿ55, 5 ಕಂದಕೂರ, 8 ಯಾದಗಿರಿ ನಗರ, 1 ಮಗ್ದಮಪುರ ತಾಂಡಾ, 3 ಅರಕೇರಾದಲ್ಲಿ ಸೋಂಕು ಹರಡಿದೆ ಎಂದು ಸಂದೇಶಗಳು ಹರಿದಾಡುತ್ತಿವೆ.</p>.<p>ಮೊದಲಿನಿಂದಲೂ ಕೊರೊನಾ ಪೀಡಿತರ ಪ್ರಾಥಮಿಕ, ದ್ವಿತೀಯ ಸಂಪರ್ಕ ತಿಳಿಯಪಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಇಂಥ ವಿಷಯಗಳನ್ನು ಮುಚ್ಚಿಡುವುದರಿಂದ ಮತ್ತಷ್ಟು ಸೋಂಕು ಹರಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.</p>.<p>***<br />ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಕೇಂದ್ರಗಳಲ್ಲಿರುವ ಗರ್ಭಿಣಿ, ಬಾಣಂತಿ, ಮಕ್ಕಳ ಗಂಟಲಿನ ದ್ರವ ಮಾದರಿ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ಮಕ್ಕಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ.<br /><em><strong>-ಡಾ.ಎಂ.ಎಸ್.ಪಾಟೀಲ, ಡಿಎಚ್ಒ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>