ಯಾದಗಿರಿ: ಜಿಲ್ಲೆಯಲ್ಲಿ 2019ರಲ್ಲಿ ಭೀಕರ ಪ್ರವಾಹ ಬಂದಾಗ ಹೊಲ–ಗದ್ದೆಗಳಿಗೆ ನೀರು ನುಗ್ಗಿ ಆಪಾರ ಹಾನಿಯಾಗಿತ್ತು. ಅಂದಾಜು 100 ಹೆಕ್ಟೇರ್ಗಿಂತ ಹೆಚ್ಚು ಬೆಳೆ ನಾಶವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಂದಾಯ, ಕೃಷಿ ಇಲಾಖೆ ವತಿಯಿಂದ ಸಮೀಕ್ಷೆ ನಡೆದಿತ್ತು.5,300 ರೈತರಿಗೆ ಪರಿಹಾರವಾಗಿ ₹14.16 ಕೋಟಿ ವಿತರಣೆಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಇದು ಎಲ್ಲ ರೈತರಿಗೆ ಸಿಕ್ಕಿಲ್ಲ ಎನ್ನುವ ಆರೋಪವೂ ರೈತರಿಂದ ಕೇಳಿ ಬರುತ್ತಿದೆ.