<p><strong>ಯಾದಗಿರಿ</strong>: ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆ ಸಿದ್ಧತೆ ನಡೆದಿದ್ದು, ಅಮಾವಾಸ್ಯೆ ಪೂಜಾ ಸಾಮಾಗ್ರಿ ದುಬಾರಿಯಾಗಿದೆ.</p>.<p>ನಗರ ಸೇರಿ ಜಿಲ್ಲೆಯ ವಿವಿಧೆಡೆ ಹಬ್ಬಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಪ್ರಮುಖ ವೃತ್ತ, ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಇಡಲಾಗಿದೆ. ಅಮಾವಾಸ್ಯೆ ಪ್ರಯುಕ್ತ ಎಲ್ಲ ಅಂಗಡಿ ಮುಂಗಟ್ಟು ಸೇರಿದಂತೆ ವಿವಿಧೆಡೆ ಪೂಜೆ ಸಲ್ಲಿಸುತ್ತಿರುವ ಕಾರಣ ಬೆಲೆ ಏರಿಕೆ ಮಧ್ಯೆಯೂ ಖರೀದಿ ಭರಾಟೆ ಜೋರಾಗಿದೆ.</p>.<p>ಗ್ರಾಮೀಣ ಭಾಗದಿಂದ ನಗರ, ಪಟ್ಟಣ ಪ್ರದೇಶಕ್ಕೆ ಸಾರ್ವಜನಿಕರು ಬಂದು ಪೂಜಾ ಸಾಮಾಗ್ರಿ ಖರೀದಿಯಲ್ಲಿ ತೊಡಗಿಸಿಕೊಂಡಿರುವುದು ಬುಧವಾರ ಕಂಡು ಬಂತು.</p>.<p>ನಗರದ ಮಹಾತ್ಮ ಗಾಂಧಿ ವೃತ್ತದ ಸಮೀಪ ಬಾಳೆದಿಂಡು, ಕಬ್ಬು, ಹೂವು, ನಿಂಬೆಹಣ್ಣು, ಚೆಂಡು ಹೂವು ಹಾರ ಸೇರಿದಂತೆ ಕಾಯಿ, ಕರ್ಪೂರ ಮಾರಾಟಕ್ಕೆ ಇಡಲಾಗಿದೆ.</p>.<p><strong>ಪಕ್ಕದ ಜಿಲ್ಲೆಯಿಂದ ಬಾಳೆದಿಂಡು: </strong>ನಗರಕ್ಕೆ ಪಕ್ಕದ ಜಿಲ್ಲೆ ಕಲಬುರಗಿಯಿಂದ ಬಾಳೆದಿಂಡು, ಕಬ್ಬು, ಚೆಂಡು ಹೂವು ತರಲಾಗಿದೆ. ನಗರದ ವ್ಯಾಪಾರಿಗಳು ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮಕ್ಕೆ ತೆರಳಿ ಸಾಮಾಗ್ರಿ ಖರೀದಿ ಮಾಡಿಕೊಂಡು ಬಂದಿದ್ದಾರೆ.</p>.<p>ಜೋಡಿ ಬಾಳೆದಿಂಡು ಜೋಡಿ ₹50–60, ಒಂದು ಕುಂಬಳಕಾಯಿ ₹ 55–60, ಪೂಜಾ ಎಳನೀರು ₹50–60, ನಿಂಬೆಹಣ್ಣು ₹10ಗೆ 5, ಹಣತೆ ₹10ಗೆ 4, ಚೆಂಡು ಹೂವು ಹಾರ ₹40ರಿಂದ 50, ಒಂದು ಕೆಜಿ ₹80ಗೆ ಮಾರಾಟ ಮಾಡಲಾಗುತ್ತಿದೆ.</p>.<p>ಮಾರುಕಟ್ಟೆಯಲ್ಲಿ ಇವುಗಳ ಜೊತೆಗೆ ಬೆಂಡು ಬತ್ತಾಸ್, ಬಾರೆ ಹಣ್ಣು, ಪೇರಲ, ಸೇಬು, ಬಾಳೆಹಣ್ಣು, ಸಂತೂರು, ಮೋಸಂಬಿ, ದಾಳಿಂಬೆ ಮಾರಾಟಕ್ಕೆ ಇಡಲಾಗಿದೆ.</p>.<p>‘ಹಬ್ಬದ ಖರೀದಿಗೆ ಬಂದಿದ್ದು, ಬೆಲೆ ಗಗನಕ್ಕೇರಿದೆ. ವ್ಯಾಪಾರಿಗಳ ಜೊತೆ ಚೌಕಾಶಿ ಮಾಡುವುದು ಸಾಮಾನ್ಯವಾಗಿದೆ. ಬೆಲೆ ಹೆಚ್ಚಾದರೂ ಖರೀದಿ ಮಾಡುವ ಅವಶ್ಯವಿದೆ. ಗುರುವಾರ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ’ ಇದೆ ಎನ್ನುತ್ತಾರೆ ಗ್ರಾಹಕ ವಿನೋದ ಕುಮಾರ ಬಂಗಾರಿ.</p>.<p>‘ಬೇರೆ ಬೇರೆ ಜಿಲ್ಲೆಗಳಿಂದ ಹಬ್ಬದ ಸಾಮಾಗ್ರಿ ಖರೀದಿ ಮಾಡಿಕೊಂಡು ಬಂದಿದ್ದು, ನಮಗೂ ಸಾಗಣೆ ವೆಚ್ಚವೂ ಹೆಚ್ಚಾಗಿದೆ. ಇದರಿಂದ ನಾವೂ ಬೆಲೆ ಏರಿಕೆ ಮಾಡುವ ಅನಿವಾರ್ಯವಿದೆ’ ಎನ್ನುತ್ತಾರೆ ವ್ಯಾಪಾರಿ ಮಹಮ್ಮದ್ ಹನೀಫ್.</p>.<p><strong>*****</strong></p>.<p><strong>ಚಿತ್ತಾಪುರ ತಾಲ್ಲೂಕಿನಿಂದ ಬಾಳೆಕಂಬ ಸೇರಿದಂತೆ ಪೂಜೆಗೆ ಬೇಕಾಗುವ ಸಾಮಾಗ್ರಿ ಖರೀದಿ ಮಾಡಿಕೊಂಡು ಬರಲಾಗಿದೆ. ಗುರುವಾರ ಹೆಚ್ಚು ವ್ಯಾಪಾರವಾಗುವ ನಿರೀಕ್ಷೆ ಇದೆ</strong></p>.<p><strong>-ಸಾಬಣ್ಣ ಕುಡ್ಡಿ, ವ್ಯಾಪಾರಿ</strong></p>.<p><strong>***</strong></p>.<p><strong>ದೀಪಾವಳಿ ಹಬ್ಬದ ಅಮಾವಾಸ್ಯೆ ಅಂಗವಾಗಿ ಪೂಜಾ ಸಾಮಗ್ರಿ ಖರೀದಿಗೆ ಬಂದಿದ್ದು, ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಯಾವುದು ಕಡಿಮೆ ಇಲ್ಲ</strong></p>.<p><strong>-ರಮೇಶ ಕೋಲಿ, ಗ್ರಾಹಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆ ಸಿದ್ಧತೆ ನಡೆದಿದ್ದು, ಅಮಾವಾಸ್ಯೆ ಪೂಜಾ ಸಾಮಾಗ್ರಿ ದುಬಾರಿಯಾಗಿದೆ.</p>.<p>ನಗರ ಸೇರಿ ಜಿಲ್ಲೆಯ ವಿವಿಧೆಡೆ ಹಬ್ಬಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಪ್ರಮುಖ ವೃತ್ತ, ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಇಡಲಾಗಿದೆ. ಅಮಾವಾಸ್ಯೆ ಪ್ರಯುಕ್ತ ಎಲ್ಲ ಅಂಗಡಿ ಮುಂಗಟ್ಟು ಸೇರಿದಂತೆ ವಿವಿಧೆಡೆ ಪೂಜೆ ಸಲ್ಲಿಸುತ್ತಿರುವ ಕಾರಣ ಬೆಲೆ ಏರಿಕೆ ಮಧ್ಯೆಯೂ ಖರೀದಿ ಭರಾಟೆ ಜೋರಾಗಿದೆ.</p>.<p>ಗ್ರಾಮೀಣ ಭಾಗದಿಂದ ನಗರ, ಪಟ್ಟಣ ಪ್ರದೇಶಕ್ಕೆ ಸಾರ್ವಜನಿಕರು ಬಂದು ಪೂಜಾ ಸಾಮಾಗ್ರಿ ಖರೀದಿಯಲ್ಲಿ ತೊಡಗಿಸಿಕೊಂಡಿರುವುದು ಬುಧವಾರ ಕಂಡು ಬಂತು.</p>.<p>ನಗರದ ಮಹಾತ್ಮ ಗಾಂಧಿ ವೃತ್ತದ ಸಮೀಪ ಬಾಳೆದಿಂಡು, ಕಬ್ಬು, ಹೂವು, ನಿಂಬೆಹಣ್ಣು, ಚೆಂಡು ಹೂವು ಹಾರ ಸೇರಿದಂತೆ ಕಾಯಿ, ಕರ್ಪೂರ ಮಾರಾಟಕ್ಕೆ ಇಡಲಾಗಿದೆ.</p>.<p><strong>ಪಕ್ಕದ ಜಿಲ್ಲೆಯಿಂದ ಬಾಳೆದಿಂಡು: </strong>ನಗರಕ್ಕೆ ಪಕ್ಕದ ಜಿಲ್ಲೆ ಕಲಬುರಗಿಯಿಂದ ಬಾಳೆದಿಂಡು, ಕಬ್ಬು, ಚೆಂಡು ಹೂವು ತರಲಾಗಿದೆ. ನಗರದ ವ್ಯಾಪಾರಿಗಳು ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮಕ್ಕೆ ತೆರಳಿ ಸಾಮಾಗ್ರಿ ಖರೀದಿ ಮಾಡಿಕೊಂಡು ಬಂದಿದ್ದಾರೆ.</p>.<p>ಜೋಡಿ ಬಾಳೆದಿಂಡು ಜೋಡಿ ₹50–60, ಒಂದು ಕುಂಬಳಕಾಯಿ ₹ 55–60, ಪೂಜಾ ಎಳನೀರು ₹50–60, ನಿಂಬೆಹಣ್ಣು ₹10ಗೆ 5, ಹಣತೆ ₹10ಗೆ 4, ಚೆಂಡು ಹೂವು ಹಾರ ₹40ರಿಂದ 50, ಒಂದು ಕೆಜಿ ₹80ಗೆ ಮಾರಾಟ ಮಾಡಲಾಗುತ್ತಿದೆ.</p>.<p>ಮಾರುಕಟ್ಟೆಯಲ್ಲಿ ಇವುಗಳ ಜೊತೆಗೆ ಬೆಂಡು ಬತ್ತಾಸ್, ಬಾರೆ ಹಣ್ಣು, ಪೇರಲ, ಸೇಬು, ಬಾಳೆಹಣ್ಣು, ಸಂತೂರು, ಮೋಸಂಬಿ, ದಾಳಿಂಬೆ ಮಾರಾಟಕ್ಕೆ ಇಡಲಾಗಿದೆ.</p>.<p>‘ಹಬ್ಬದ ಖರೀದಿಗೆ ಬಂದಿದ್ದು, ಬೆಲೆ ಗಗನಕ್ಕೇರಿದೆ. ವ್ಯಾಪಾರಿಗಳ ಜೊತೆ ಚೌಕಾಶಿ ಮಾಡುವುದು ಸಾಮಾನ್ಯವಾಗಿದೆ. ಬೆಲೆ ಹೆಚ್ಚಾದರೂ ಖರೀದಿ ಮಾಡುವ ಅವಶ್ಯವಿದೆ. ಗುರುವಾರ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ’ ಇದೆ ಎನ್ನುತ್ತಾರೆ ಗ್ರಾಹಕ ವಿನೋದ ಕುಮಾರ ಬಂಗಾರಿ.</p>.<p>‘ಬೇರೆ ಬೇರೆ ಜಿಲ್ಲೆಗಳಿಂದ ಹಬ್ಬದ ಸಾಮಾಗ್ರಿ ಖರೀದಿ ಮಾಡಿಕೊಂಡು ಬಂದಿದ್ದು, ನಮಗೂ ಸಾಗಣೆ ವೆಚ್ಚವೂ ಹೆಚ್ಚಾಗಿದೆ. ಇದರಿಂದ ನಾವೂ ಬೆಲೆ ಏರಿಕೆ ಮಾಡುವ ಅನಿವಾರ್ಯವಿದೆ’ ಎನ್ನುತ್ತಾರೆ ವ್ಯಾಪಾರಿ ಮಹಮ್ಮದ್ ಹನೀಫ್.</p>.<p><strong>*****</strong></p>.<p><strong>ಚಿತ್ತಾಪುರ ತಾಲ್ಲೂಕಿನಿಂದ ಬಾಳೆಕಂಬ ಸೇರಿದಂತೆ ಪೂಜೆಗೆ ಬೇಕಾಗುವ ಸಾಮಾಗ್ರಿ ಖರೀದಿ ಮಾಡಿಕೊಂಡು ಬರಲಾಗಿದೆ. ಗುರುವಾರ ಹೆಚ್ಚು ವ್ಯಾಪಾರವಾಗುವ ನಿರೀಕ್ಷೆ ಇದೆ</strong></p>.<p><strong>-ಸಾಬಣ್ಣ ಕುಡ್ಡಿ, ವ್ಯಾಪಾರಿ</strong></p>.<p><strong>***</strong></p>.<p><strong>ದೀಪಾವಳಿ ಹಬ್ಬದ ಅಮಾವಾಸ್ಯೆ ಅಂಗವಾಗಿ ಪೂಜಾ ಸಾಮಗ್ರಿ ಖರೀದಿಗೆ ಬಂದಿದ್ದು, ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಯಾವುದು ಕಡಿಮೆ ಇಲ್ಲ</strong></p>.<p><strong>-ರಮೇಶ ಕೋಲಿ, ಗ್ರಾಹಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>