‘ಭತ್ತದ ಗದ್ದೆಯಲ್ಲಿ ಬೆಂಕಿ ಹಚ್ಚುವುದರಿಂದ ಹೊಗೆಯು ಗಾಳಿಯಲ್ಲಿ ಮಿಶ್ರಣವಾಗಿ ವಾತಾವರಣ ಹಾಳಾಗುತ್ತದೆ. ಆಸ್ತಮಾ ಹಾಗೂ ಉಸಿರಾ ಟದ ತೊಂದರೆ ಆಗುವುದರಿಂದ ದೆಹಲಿ, ಪಂಜಾಬ್ ಹಾಗೂ ಹರಿಯಾಣದಲ್ಲಿ ಹಲ್ಲು ಸುಡುವು ದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅಲ್ಲದೆ ಜಮೀನುಗಳಲ್ಲಿ ಬೆಂಕಿ ಹಚ್ಚಿದರೆ ರೈತರಿಗೆ ದಂಡ ವಿಧಿಸುವ ಸುತ್ತೋಲೆಯನ್ನು ಹೊರಡಿಸಿದೆ. ಮುಂದಿನ ದಿನಗಳಲ್ಲಿ ನಮ್ಮಲ್ಲಿ ಅಂತಹ ದುಸ್ಥಿತಿ ಬರುವ ಮೊದಲು ನಾವು ಎಚ್ಚರಗೊಳ್ಳಬೇಕು. ಅದರಂತೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹುಲ್ಲಿಗೆ ಬೆಂಕಿ ಹಚ್ಚದಂತೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯ ಸಾಗಿದೆ’ ಎನ್ನುತ್ತಾರೆ ಕೃಷಿ ವಿಜ್ಞಾನಿ ಡಾ.ಶಿವಾನಂದ ಹೊನ್ನಾಳಿ.