<p><strong>ಯಾದಗಿರಿ:</strong> ಜಿಲ್ಲೆಯ ಶಹಾಪುರ ನಗರದಲ್ಲಿರುವ ಖಾಸಗಿ ಮಲ್ಟಿಸ್ಟೆಷಾಲಿಟಿ ಆಸ್ಪತ್ರೆಯ ವೈದ್ಯರು 10 ವರ್ಷದ ಬಾಲಕನಿಗೆ ಗಂಟಲು ನೋವಿಗೆ ಕೊಟ್ಟಿರುವ ಚಿಕಿತ್ಸೆ ರಿಯಾಕ್ಷನ್ ಆಗಿರುವುದರಿಂದ ಈ ವೈದ್ಯನ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ಆಗ್ರಹಿಸಿದೆ.</p>.<p>ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಿದ ದಸಂಸ ಕಾರ್ಯಕರ್ತರು, ‘ರಾಯಚೂರು ಜಿಲ್ಲೆಯ ದೇವದುರ್ಗದ 10 ವರ್ಷ ಬಾಲಕ ಮೊಹ್ಮದ್ಸಾದ್ ಮುಬಾರಕ್ ಅಹ್ಮದ್ನನ್ನು ಗಂಟಲು ನೋವಿಗಾಗಿ ಶಹಾಪುರ ನಗರದ ದಿ.ಅಚ್ಚಪ್ಪಗೌಡ ಸುಬೇದಾರ ಸ್ಮಾರಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ಬಳಿ ಪೋಷಕರು ಮೇ 6 ರಂದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ವೈದ್ಯರು ನೀಡಿದ ಔಷಧ ರಿಯಾಕ್ಷನ್ ಆಗಿ ಬಾಲಕ ಸಂಕಷ್ಟದಲ್ಲಿದ್ದು, ಈಗ ರಾಯಚೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ತಿಳಿಸಿದ್ದಾರೆ.</p>.<p>ಯಾವುದೋ ಚಿಕಿತ್ಸೆ ನೀಡಿ ಅವರ ಜೀವದ ಬಗ್ಗೆ ನಿರ್ಲಕ್ಷ್ಯ ವಹಿಸಿ, ನಕಲಿ ವೈದ್ಯಕೀಯ ವೃತ್ತಿ ಮಾಡುತ್ತಿರುವ ಇಂತಹ ವೈದ್ಯರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಬಾಲಕನ ಆಸ್ಪತ್ರೆಯ ವೆಚ್ಚ ಭರಿಸುವಂತೆ ಹಾಗೂ ವೈದ್ಯರು ಮಾಡಿರುವ ತಪ್ಪಿಗೆ ₹5 ಲಕ್ಷ ದಂಡ ಭರಿಸಲು ಕ್ರಮ ವಹಿಸಿ, ಈ ವೈದ್ಯನ ಪರವಾನಗಿ ರದ್ದುಪಡಿಸಬೇಕೆಂದು ಒತ್ತಾಯಿಸಿದರು.</p>.<p>ವೈದ್ಯನ ಮೇಲೆ ಕ್ರಮಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ತಮ್ಮ ಜಿಲ್ಲಾಸ್ಪತ್ರೆಯ ಮುಂದೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.</p>.<p>ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಮೋಹನರಾಜ್ ಗೌಡ ಮನವಿ ಸಲ್ಲಿಸಿದರು. ಶಹಾಪುರ ತಾಲ್ಲೂಕು ಸಂಚಾಲಕ ಹನುಮಂತ ಗಬ್ಬೂರ, ಭೀಮರಾಯ ಬಡಿಗೇರ, ಕ್ರಾಂತಿಕುಮಾರ ರಾಯಚೂರಕರ, ಆಂಜಿನೇಯ ಟೊಣ್ಣೂರ, ಅರುಣಕುಮಾರ ನಾಟೇಕರ್, ಹನುಮಂತ ಶೆಟಿಗೇರಿ, ಮಬಾರಕರ್ ದೇವದುರ್ಗ, ಭೀಮು ಹುಲಿಮನಿ, ಮಲ್ಲಿಕಾರ್ಜುನ ಕಟ್ಟಿಮನಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಜಿಲ್ಲೆಯ ಶಹಾಪುರ ನಗರದಲ್ಲಿರುವ ಖಾಸಗಿ ಮಲ್ಟಿಸ್ಟೆಷಾಲಿಟಿ ಆಸ್ಪತ್ರೆಯ ವೈದ್ಯರು 10 ವರ್ಷದ ಬಾಲಕನಿಗೆ ಗಂಟಲು ನೋವಿಗೆ ಕೊಟ್ಟಿರುವ ಚಿಕಿತ್ಸೆ ರಿಯಾಕ್ಷನ್ ಆಗಿರುವುದರಿಂದ ಈ ವೈದ್ಯನ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ಆಗ್ರಹಿಸಿದೆ.</p>.<p>ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಿದ ದಸಂಸ ಕಾರ್ಯಕರ್ತರು, ‘ರಾಯಚೂರು ಜಿಲ್ಲೆಯ ದೇವದುರ್ಗದ 10 ವರ್ಷ ಬಾಲಕ ಮೊಹ್ಮದ್ಸಾದ್ ಮುಬಾರಕ್ ಅಹ್ಮದ್ನನ್ನು ಗಂಟಲು ನೋವಿಗಾಗಿ ಶಹಾಪುರ ನಗರದ ದಿ.ಅಚ್ಚಪ್ಪಗೌಡ ಸುಬೇದಾರ ಸ್ಮಾರಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ಬಳಿ ಪೋಷಕರು ಮೇ 6 ರಂದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ವೈದ್ಯರು ನೀಡಿದ ಔಷಧ ರಿಯಾಕ್ಷನ್ ಆಗಿ ಬಾಲಕ ಸಂಕಷ್ಟದಲ್ಲಿದ್ದು, ಈಗ ರಾಯಚೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ತಿಳಿಸಿದ್ದಾರೆ.</p>.<p>ಯಾವುದೋ ಚಿಕಿತ್ಸೆ ನೀಡಿ ಅವರ ಜೀವದ ಬಗ್ಗೆ ನಿರ್ಲಕ್ಷ್ಯ ವಹಿಸಿ, ನಕಲಿ ವೈದ್ಯಕೀಯ ವೃತ್ತಿ ಮಾಡುತ್ತಿರುವ ಇಂತಹ ವೈದ್ಯರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಬಾಲಕನ ಆಸ್ಪತ್ರೆಯ ವೆಚ್ಚ ಭರಿಸುವಂತೆ ಹಾಗೂ ವೈದ್ಯರು ಮಾಡಿರುವ ತಪ್ಪಿಗೆ ₹5 ಲಕ್ಷ ದಂಡ ಭರಿಸಲು ಕ್ರಮ ವಹಿಸಿ, ಈ ವೈದ್ಯನ ಪರವಾನಗಿ ರದ್ದುಪಡಿಸಬೇಕೆಂದು ಒತ್ತಾಯಿಸಿದರು.</p>.<p>ವೈದ್ಯನ ಮೇಲೆ ಕ್ರಮಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ತಮ್ಮ ಜಿಲ್ಲಾಸ್ಪತ್ರೆಯ ಮುಂದೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.</p>.<p>ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಮೋಹನರಾಜ್ ಗೌಡ ಮನವಿ ಸಲ್ಲಿಸಿದರು. ಶಹಾಪುರ ತಾಲ್ಲೂಕು ಸಂಚಾಲಕ ಹನುಮಂತ ಗಬ್ಬೂರ, ಭೀಮರಾಯ ಬಡಿಗೇರ, ಕ್ರಾಂತಿಕುಮಾರ ರಾಯಚೂರಕರ, ಆಂಜಿನೇಯ ಟೊಣ್ಣೂರ, ಅರುಣಕುಮಾರ ನಾಟೇಕರ್, ಹನುಮಂತ ಶೆಟಿಗೇರಿ, ಮಬಾರಕರ್ ದೇವದುರ್ಗ, ಭೀಮು ಹುಲಿಮನಿ, ಮಲ್ಲಿಕಾರ್ಜುನ ಕಟ್ಟಿಮನಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>