<p><strong>ಹುಣಸಗಿ:</strong> ಪಟ್ಟಣದ ಸುಬ್ಬಮ್ಮ ಗೌಡತಿ ಕಲ್ಯಾಣ ಮಟಪದಲ್ಲಿ ಶನಿವಾರ ಸಾಯಂಕಾಲ ಹಬ್ಬದ ವಾತಾವರಣ ಮನೆ ಮಾಡಿತ್ತು.</p>.<p>ಕ್ವಾರಂಟೈನ್ ಕೇಂದ್ರದಲ್ಲಿದ್ದವರಿಗೆ ಯಾವಾಗ ನಮ್ಮ ಮನೆಗೆ ಹೋಗುತ್ತೇವೋ ಎನ್ನುವ ತವಕ. ತಾಲ್ಲೂಕು ಆಡಳಿತಕ್ಕೆ ಕಾರ್ಮಿಕರನ್ನು ಸುರಕ್ಷಿತವಾಗಿ ಬೀಳ್ಕೊಡುವ ಹುಮ್ಮಸ್ಸು ಜೋರಾಗಿತ್ತು.</p>.<p>ಮಹಾರಾಷ್ಟ್ರ ಸೇರಿದಂತೆ ಮತ್ತಿತರ ಕಡೆಗಳಿಂದ ಆಗಮಿಸಿದ 80ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಕಳೆದ 2 ವಾರಗಳ ಹಿಂದೆ ಇಲ್ಲಿನ ಸುಬ್ಬಮ್ಮ ಗೌಡತಿ ಕಲ್ಯಾಣ ಮಂಟಪದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.</p>.<p>ಇದೀಗ ಈ ಎಲ್ಲರ ಗಂಟಲು ದ್ರವದ ವರದಿಗಳು ನೆಗೆಟಿವ್ ಬಂದಿದ್ದು, ಇವರ ಕ್ವಾರಂಟೈನ್ ಅವಧಿ ಮುಗಿದಿದ್ದರಿಂದಾಗಿ ಶನಿವಾರ ಅವರನ್ನು ಮನೆಗೆ ಕಳಿಸಿಕೊಡಲಾಯಿತು.</p>.<p>ಈ ವೇಳೆ ಬೆಂಗಳೂರು ಮೂಲದ ಡಿ.ಎಸ್.ಮ್ಯಾಕ್ಸ್ ಕಂಪನಿ, ಸ್ಪೂರ್ತಿ ಗ್ರೂಪ್ಸ್ ಹಾಗೂ ಶಾಸಕ ರಾಜುಗೌಡ ಅವರ ಸಹಕಾರದಿಂದ ಎಲ್ಲರಿಗೂ ಹೋಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ಬಳಿಕ ಉಡುಗೊರೆಯಾಗಿ 33 ಮಹಿಳೆಯರಿಗೆ ಸೀರೆ, ರವಿಕೆ, 48 ಪುರುಷರಿಗೆ ಟವೆಲ್ ನೀಡಿ ಗೌರವಿಸಲಾಯಿತು.</p>.<p>ಹುಣಸಗಿ ತಹಶೀಲ್ದಾರ್ ವಿನಯಕುಮಾರ ಪಾಟೀಲ ಮಾತನಾಡಿ, ಎಲ್ಲರೂ ಆರೋಗ್ಯವಾಗಿದ್ದು, ನಿಮ್ಮ ಮನೆಗಳಿಗೆ ತೆರಳುತ್ತಿರುವ ಈ ಸಂದರ್ಭದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಇದೇ ವಾತಾವರಣ ನಿಮ್ಮ ಮನೆಗಳಲ್ಲಿಯೂ ಇರುವಂತೆ ನೋಡಿಕೊಳ್ಳಬೇಕು. ಸುರಕ್ಷಿತ ಅಂತರ ಶುಚಿತ್ವಕ್ಕೆ ಒತ್ತು ನೀಡಬೇಕು. ನಿಮ್ಮ ಗ್ರಾಮಗಳಲ್ಲಿ ನೀವು ಮಾದರಿಯಾಗಿ ಕಾಣುವಂತಾಗಬೇಕು ಎಂದು ಹೇಳಿದರು.</p>.<p>ಡಿ.ಎಸ್. ಮ್ಯಾಕ್ಸ್ ಕಂಪನಿಯಿಂದ ಗೃಹ ರಕ್ಷಕ ದಳದವರಿಗೆ ₹25,000 ಪುರಸ್ಕಾರವನ್ನು ಮುಖಂಡ ಚಂದ್ರಶೇಖರ ಪಟ್ಟಣಶೆಟ್ಟಿ ನೀಡಿ ಗೌರವಿಸಿದರು.</p>.<p>ಗ್ರೇಡ್ –2 ತಹಶೀಲ್ದಾರ್ ಸುರೇಶ ಚವಲರ್, ಹುಣಸಗಿ ಪಿಎಸ್.ಐ ನಚಿಕೇತ ಜನಗೌಡ, ವೈದ್ಯಾಧಿಕಾರಿ ಡಾ. ಮಹೇಶ್ವರಿ, ಶರಣಗೌಡ ಪಾಟೀಲ ವಜ್ಜಲ, ನಾನಾಗೌಡ ಪಾಟೀಲ, ರಮೇಶ ಪಾಟೀಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ:</strong> ಪಟ್ಟಣದ ಸುಬ್ಬಮ್ಮ ಗೌಡತಿ ಕಲ್ಯಾಣ ಮಟಪದಲ್ಲಿ ಶನಿವಾರ ಸಾಯಂಕಾಲ ಹಬ್ಬದ ವಾತಾವರಣ ಮನೆ ಮಾಡಿತ್ತು.</p>.<p>ಕ್ವಾರಂಟೈನ್ ಕೇಂದ್ರದಲ್ಲಿದ್ದವರಿಗೆ ಯಾವಾಗ ನಮ್ಮ ಮನೆಗೆ ಹೋಗುತ್ತೇವೋ ಎನ್ನುವ ತವಕ. ತಾಲ್ಲೂಕು ಆಡಳಿತಕ್ಕೆ ಕಾರ್ಮಿಕರನ್ನು ಸುರಕ್ಷಿತವಾಗಿ ಬೀಳ್ಕೊಡುವ ಹುಮ್ಮಸ್ಸು ಜೋರಾಗಿತ್ತು.</p>.<p>ಮಹಾರಾಷ್ಟ್ರ ಸೇರಿದಂತೆ ಮತ್ತಿತರ ಕಡೆಗಳಿಂದ ಆಗಮಿಸಿದ 80ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಕಳೆದ 2 ವಾರಗಳ ಹಿಂದೆ ಇಲ್ಲಿನ ಸುಬ್ಬಮ್ಮ ಗೌಡತಿ ಕಲ್ಯಾಣ ಮಂಟಪದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.</p>.<p>ಇದೀಗ ಈ ಎಲ್ಲರ ಗಂಟಲು ದ್ರವದ ವರದಿಗಳು ನೆಗೆಟಿವ್ ಬಂದಿದ್ದು, ಇವರ ಕ್ವಾರಂಟೈನ್ ಅವಧಿ ಮುಗಿದಿದ್ದರಿಂದಾಗಿ ಶನಿವಾರ ಅವರನ್ನು ಮನೆಗೆ ಕಳಿಸಿಕೊಡಲಾಯಿತು.</p>.<p>ಈ ವೇಳೆ ಬೆಂಗಳೂರು ಮೂಲದ ಡಿ.ಎಸ್.ಮ್ಯಾಕ್ಸ್ ಕಂಪನಿ, ಸ್ಪೂರ್ತಿ ಗ್ರೂಪ್ಸ್ ಹಾಗೂ ಶಾಸಕ ರಾಜುಗೌಡ ಅವರ ಸಹಕಾರದಿಂದ ಎಲ್ಲರಿಗೂ ಹೋಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ಬಳಿಕ ಉಡುಗೊರೆಯಾಗಿ 33 ಮಹಿಳೆಯರಿಗೆ ಸೀರೆ, ರವಿಕೆ, 48 ಪುರುಷರಿಗೆ ಟವೆಲ್ ನೀಡಿ ಗೌರವಿಸಲಾಯಿತು.</p>.<p>ಹುಣಸಗಿ ತಹಶೀಲ್ದಾರ್ ವಿನಯಕುಮಾರ ಪಾಟೀಲ ಮಾತನಾಡಿ, ಎಲ್ಲರೂ ಆರೋಗ್ಯವಾಗಿದ್ದು, ನಿಮ್ಮ ಮನೆಗಳಿಗೆ ತೆರಳುತ್ತಿರುವ ಈ ಸಂದರ್ಭದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಇದೇ ವಾತಾವರಣ ನಿಮ್ಮ ಮನೆಗಳಲ್ಲಿಯೂ ಇರುವಂತೆ ನೋಡಿಕೊಳ್ಳಬೇಕು. ಸುರಕ್ಷಿತ ಅಂತರ ಶುಚಿತ್ವಕ್ಕೆ ಒತ್ತು ನೀಡಬೇಕು. ನಿಮ್ಮ ಗ್ರಾಮಗಳಲ್ಲಿ ನೀವು ಮಾದರಿಯಾಗಿ ಕಾಣುವಂತಾಗಬೇಕು ಎಂದು ಹೇಳಿದರು.</p>.<p>ಡಿ.ಎಸ್. ಮ್ಯಾಕ್ಸ್ ಕಂಪನಿಯಿಂದ ಗೃಹ ರಕ್ಷಕ ದಳದವರಿಗೆ ₹25,000 ಪುರಸ್ಕಾರವನ್ನು ಮುಖಂಡ ಚಂದ್ರಶೇಖರ ಪಟ್ಟಣಶೆಟ್ಟಿ ನೀಡಿ ಗೌರವಿಸಿದರು.</p>.<p>ಗ್ರೇಡ್ –2 ತಹಶೀಲ್ದಾರ್ ಸುರೇಶ ಚವಲರ್, ಹುಣಸಗಿ ಪಿಎಸ್.ಐ ನಚಿಕೇತ ಜನಗೌಡ, ವೈದ್ಯಾಧಿಕಾರಿ ಡಾ. ಮಹೇಶ್ವರಿ, ಶರಣಗೌಡ ಪಾಟೀಲ ವಜ್ಜಲ, ನಾನಾಗೌಡ ಪಾಟೀಲ, ರಮೇಶ ಪಾಟೀಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>